ಅಮಿತ್ ಶಾ ಮಾಸ್ಟರ್ ಪ್ಲಾನ್ ನಂತೆ ಬಿಸಿಸಿಐನ ಅಧ್ಯಕ್ಷ ಹುದ್ದೆಗೆ ನಿರಾಯಾಸವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕ್ರಿಕೆಟಿಗ ಸೌರವ್ ಗಂಗೂಲಿ 2021ರಲ್ಲಿ ಪಶ್ಚಿಮ ಬಂಗಾಳದ ಸಿಎಂ ಆಗ್ತಾರೆ ಅನ್ನುವ ಸುದ್ದಿ ದಟ್ಟವಾಗಿದೆ.
2021ರಲ್ಲಿ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೌರವ್ ಗಂಗೂಲಿ ಬಂಗಾಳ ಬಿಜೆಪಿಯ ಸಿಎಂ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
ದಾದ ಅವರನ್ನು ಬಂಗಾಳ ರಾಜಕಾರಣಕ್ಕೆ ತರುವ ಸಲುವಾಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿಸುವಲ್ಲಿ ಸಫಲರಾಗಿದ್ದಾರೆ. ಎನ್ನಲಾಗಿದೆ.
ಇನ್ನು 10 ತಿಂಗಳಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷ ಅವಧಿ ಅಂತ್ಯವಾಗಲಿದೆ. ಬಳಿಕ ಅವರನ್ನು ಬಂಗಾಳ ರಾಜಕೀಯಕ್ಕೆ ಕರೆ ತರುವ ಸಾಧ್ಯತೆಗಳಿದೆ.
ಮಮತಾ ಬ್ಯಾನರ್ಜಿಯನ್ನು ಸೋಲಿಸಿ ಕಮಲ ಅರಳಿಸಬೇಕು ಅನ್ನುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಆದರೆ ಸೂಕ್ತ ಸಿಎಂ ಅಭ್ಯರ್ಥಿಯ ಕೊರತೆಯಿಂದಾಗಿ ಬ್ಯಾನರ್ಜಿ ಓಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಇದೀಗ ಗಂಗೂಲಿ ಅವರನ್ನು ಬ್ಯಾನರ್ಜಿ ಮುಂದೆ ನಿಲ್ಲಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಆದರೆ ಇದಕ್ಕೆ ಗಂಗೂಲಿ ಒಪ್ಪಿಕೊಂಡಿದ್ದಾರೆಯೇ ಅನ್ನುವುದು ಪ್ರಶ್ನೆ.
ಈ ಹಿಂದೆಯೂ ಗಂಗೂಲಿ ಅವರನ್ನು ರಾಜಕೀಯಕ್ಕೆ ಸೆಳೆಯಲು ಬಿಜೆಪಿ ಯತ್ನಿಸಿತ್ತು. ಆದರೆ ಮಮತಾ ಬ್ಯಾನರ್ಜಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣ ರಾಜಕಾರಣ ಪ್ರವೇಶಿಸಲು ಅವರು ನಿರಾಕರಿಸಿದ್ದರು.
ಆದರೆ ಇದೀಗ ಅಮಿತ್ ಶಾ ಪ್ಲಾನ್ ನಂತೆ ಗಂಗೂಲಿ ಬಿಸಿಸಿಐ ಪಟ್ಟವೇರಿರುವುದನ್ನು ನೋಡಿದರೆ ದಾದ ಬಂಗಾಳದ ಹುಲಿಯಾಗೋ ಸಾಧ್ಯತೆಗಳು ದಟ್ಟವಾಗಿದೆ.
Discussion about this post