ಚುನಾವಣೆಯಲ್ಲಿ ಸೋತ ಬಳಿಕ, ಮುಖ್ಯಮಂತ್ರಿ,ಮಂತ್ರಿ ಪದವಿ ಕಳೆದುಕೊಂಡ ಬಳಿಕ ವಾರದೊಳಗೆ ಸರ್ಕಾರ ನಿವಾಸ ಖಾಲಿ ಮಾಡಬೇಕು ಅನ್ನುವ ತುರ್ತು ನಿಯಮವೊಂದನ್ನು ಜಾರಿಗೆ ತರಬೇಕಾಗಿದೆ.
ಇಲ್ಲವಾದರೆ ಅಧಿಕಾರ ಕಳೆದುಕೊಂಡ ಮಂದಿ ಜನರ ದುಡ್ಡಿನಲ್ಲಿ ಎಂಜಾಯ್ ಮಾಡುವ ಬುದ್ದಿಯನ್ನು ಬಿಡುವುದಿಲ್ಲ.
Get upto 54% off on Girls Party Dresses
ಮೋದಿ ಪ್ರಧಾನಿಯಾಗಿ ದಿನವೆಷ್ಟಾಯ್ತು, ಆದರೂ 200ಕ್ಕೂ ಹೆಚ್ಚು ಸಂಸದರು ಮಾಜಿಗಳಾದರೂ ಇನ್ನೂ ದಿಲ್ಲಿಯ ಲುಟೆನ್ಸ್ ಪ್ರದೇಶದಲ್ಲಿರುವ ಅಧಿಕೃತ ನಿವಾಸಗಳನ್ನು ತೆರವುಗೊಳಿಸಿಲ್ಲವಂತೆ.
Get up to Rs.30 Cashback on your First Recharge
ಹೀಗಾಗಿ ನೂತನ ಸಂಸದರಿಗೆ ದಿಲ್ಲಿಯ ವೆಸ್ಟರ್ನ್ ಕೋರ್ಟ್ ಕಟ್ಟಡ ಹಾಗೂ ಇತರ ಅತಿಥಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಒಂದು ಪುಣ್ಯ ಸಂಸದರು ತಮಗೆ ಅಧಿಕೃತ ನಿವಾಸ ದೊರೆಯುವುದಕ್ಕೂ ಮುನ್ನ ಪಂಚತಾರಾ ಹೋಟೆಲ್ನಲ್ಲಿ ತಂಗಲು ಅವಕಾಶ ಕಲ್ಪಿಸಲಾಗುತ್ತಿತ್ತು. ಇದೀಗ ವೆಚ್ಚ ಉಳಿತಾಯದ ಕ್ರಮವಾಗಿ ಅತಿಥಿ ಗೃಹಗಳಲ್ಲಿ ನೂತನ ಸಂಸದರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
16ನೇ ಲೋಕಸಭೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೇ 25ರಂದು ವಿಸರ್ಜಿಸಿದ್ದಾರೆ. ಅಲ್ಲಿಗೆ ಸಂಸದರಾಗಿದ್ದವರು ಅಧಿಕಾರವೂ ಮುಗಿದಿದೆ. ಅಂದ ಮೇಲೆ ಅವರು ಸರ್ಕಾರಿ ನಿವಾಸದಲ್ಲಿ ಕೂರುವುದು ಎಷ್ಟರ ಮಟ್ಟಿಗೆ ಸರಿ. ಹಾಗಂತ ಅವರೇನೂ ಸ್ವಂತ ದುಡ್ಡಿನಲ್ಲಿ ಪಂಚ ತಾರ ಹೋಟೆಲ್ ಗಳಲ್ಲಿ ರೂಮ್ ಪಡೆಯಲಾಗದಷ್ಟು ಬಡವರೇನಲ್ಲ.
Discussion about this post