ಇತ್ತೀಚೆಗೆ ಕಾಫಿ ಉದ್ಯಮಿ ಸಿದ್ದಾರ್ಥ್ ಹಾರಿ ಆತ್ಮಹತ್ಯೆ ಮಾಡಿಕೊಂಜ ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ನದಿಗೆ ಹಾರಿದ ಘಟನೆ ಶುಕ್ರವಾರ ನಡೆದಿದೆ.
ನದಿಗೆ ಹಾರಿದ ಯುವತಿಯನ್ನು ಗಜನಿಶ್ವರಿ ಎಂದು ಗುರುತಿಸಲಾಗಿದೆ. ಈಕೆ ಪುತ್ತೂರಿನಾಕೆ ಅನ್ನು ಎಂಬ ಮಾಹಿತಿ ಲಭ್ಯವಾಗಿದೆ. ನದಿಗೆ ಹಾರುವ ಮುನ್ನ ತನ್ನ ಬ್ಯಾಗ್ ಅನ್ನು ಆಕೆ ಸೇತುವೆ ಮೇಲೆ ಬಿಟ್ಟಿದ್ದು, ಅದರಲ್ಲಿರುವ ಐಡಿ ಕಾರ್ಡ್ ಮೂಲಕ ಗುರುತು ಪತ್ತೆ ಹಚ್ಚಲಾಗಿದೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆಯ ವಿಷಯ ತಿಳಿದ ತಕ್ಷಣ ಶಾಸಕ ಯು.ಟಿ. ಖಾದರ್ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಕಾಫಿ ಉದ್ಯಮಿ ಸಿದ್ದಾರ್ಥ್ ಸಾವಿನ ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪತ್ನಿ ಹಾಗೂ ಮಕ್ಕಳ ನೆನಪಾಗಿ ಈಜಿ ದಡ ಸೇರಿದ್ದ.
ಸಿದ್ದಾರ್ಥ್ ಸಲುವಾಗಿ ವ್ಯಾಪಕ ಹುಡುಕಾಟ ನಡೆದಿತ್ತು. ಆದರೆ ಈ ಯುವತಿ ಹಾರಿದ ಸುದ್ದಿ ತಿಳಿದ ತಕ್ಷಣ ಆ ಮಟ್ಟಿಗೆ ಹುಡುಕಾಟದ ಪ್ರಯತ್ನ ನಡೆಯುವ ಲಕ್ಷಣ ಗೋಚರಿಸುತ್ತಿಲ್ಲ.
ನೇತ್ರಾವತಿ ಸೇತುವೆಯಿಂದ ಹಾರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿ ಕ್ಯಾಮಾರ ಅಳವಡಿಸಬೇಕು ಅನ್ನುವ ಸಲಹೆ ಬಂದಿದೆ. ಕ್ಯಾಮಾರ ಅಳವಡಿಸಿದೆರೆ ಆತ್ಮಹತ್ಯೆ ತಡೆಯಲು ಸಾಧ್ಯವೇ ಅನ್ನುವ ಪ್ರಶ್ನೆಯೂ ಎದ್ದಿದೆ.

Discussion about this post