ಉಡುಪಿ : ಪ್ರಸ್ತುತ ದುಬೈ ನಲ್ಲಿ ನೆಲೆಸಿರುವ ಪಡುಬಿದ್ರಿಯ 7 ತಿಂಗಳ ಗರ್ಣಿಣಿ ಶುಕ್ರವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಮೃತರನ್ನು ಶ್ರೇಯಾ ರೈ ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ಕಳಸದ ಶ್ರೇಯಾ ತಮ್ಮ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರೈಸಿದ್ದರು.

ಶಿಕ್ಷಣದ ಬಳಿಕ ಪಡುಬಿದ್ರಿಯ ಪವನ್ ಶೆಟ್ಟಿ ಎಂಬವರ ಜೊತೆಗೆ ವಿವಾಹವಾಗಿ ದುಬೈ ನಲ್ಲಿ ನೆಲೆಸಿದ್ದರು.
ಶ್ರೇಯಾ ಅವರಿಗೆ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ತಕ್ಷಣ ಅವರನ್ನು ದುಬೈ ನ ಪ್ರಸಿದ್ಧ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಿನ ಕಳೆದಂತೆ ಶ್ರೇಯಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಶುಕ್ರವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ.
Discussion about this post