ರಮ್ಮಿ ಜಾಹೀರಾತು ಒಂದರಲ್ಲಿ ಸುದೀಪ್ ಕಾಣಿಸಿಕೊಂಡಿರುವುದರ ವಿರುದ್ಧ ಗರಂ ಆಗಿದ್ದ ಸಂಘಟನೆಯೊಂದು, ಅವರನ್ನು ಚಂದನವನದಿಂದ ಬ್ಯಾನ್ ಮಾಡಿ ಎಂದು ಆಗ್ರಹಿಸಿತ್ತು. ಜೊತೆಗೆ ವಾಣಿಜ್ಯ ಮಂಡಳಿಯಲ್ಲಿ ದೂರನ್ನೂ ಕೂಡಾ ಸಲ್ಲಿಸಲಾಗಿತ್ತು. ಮಾತ್ರವಲ್ಲದೆ ಸುದೀಪ್ ಈ ಜಾಹೀರಾತಿನಿಂದ ಹೊರ ಬಾರದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿಯೂ ಸಂಘಟನೆ ಸದಸ್ಯರು ಹೇಳಿದ್ದರು.
ಸುದೀಪ್ ಇಂತಹ ಜೂಜಾಟದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸುದೀಪ್ ಅಭಿಮಾನಿಗಳು ದಾರಿ ತಪ್ಪುತ್ತಾರೆ ಅನ್ನುವುದು ಸಂಘಟನೆಯ ಕಾಳಜಿಯಾಗಿತ್ತು.

ಆದರೆ ಇಂತಹುದೊಂದು ಆಗ್ರಹ ಕೇಳಿ ಬರುತ್ತಿದ್ದಂತೆ ಸಂಘಟನೆ ವಿರುದ್ಧ ಸುದೀಪ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಂಘಟನೆ ವಿರೋಧ ಟ್ರೋಲ್ ಗಳು ಪ್ರಾರಂಭವಾಗಿತ್ತು.
ಇದೀಗ ಸುದೀಪ್ ಅಭಿಮಾನಿಗಳ ವಿರುದ್ಧ ವಂದೇಮಾತರಂ ಸಮಾಜ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷ ಶಿವಕುಮಾರ ನಾಯ್ಡು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ದೂರು ಸಲ್ಲಿಸಿದ್ದು, ಸುದೀಪ್ ಅಭಿಮಾನಿ ಸಂಘಗಳಿಂದ ನನಗೆ ಬೆದರಿಕೆ ಬರುತ್ತಿದೆ.
ಸುದೀಪ್ ವಿರುದ್ಧ ದೂರು ನೀಡಿದ ನಂತ್ರ ದೇಶ ವಿದೇಶದ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದೆ. ವಾಟ್ಸಾಪ್ ಸಂದೇಶಗಳು ಬರುತ್ತಿದೆ. ತಮಗೆ ಜೀವ ಭಯವಿದ್ದು, ನನಗೆ ಏನೇ ಆದರೂ ಅದಕ್ಕೆ ಸುದೀಪ್ ಅವರೇ ನೇರ ಹೊಣೆ ಎಂದು ದೂರು ಸಲ್ಲಿಸಿದ್ದಾರೆ.
Discussion about this post