ಬೆಂಗಳೂರು : ಲಾಕ್ ಡೌನ್ ಕಾರಣದಿಂದ ಮನೆಯಲ್ಲಿರುವ ಧಾರಾವಾಹಿ ಪ್ರಿಯರು ಹಲವು ಸೀರಿಯಲ್ ಗಳ ಕಥೆ ಏನಾಯ್ತು ಅನ್ನುವ ಆತಂಕದಲ್ಲಿದ್ದಾರೆ.
ನಾಗಿಣಿ ಏನಾದಳು, ಜಾನಕಿ ಎಲ್ಲಿ ಹೋದಳು ಹೀಗೆ ಹಲವು ಪಾತ್ರಗಳ ಬಗ್ಗೆ ಕುತೂಹಲವಿದ್ದೇ ಇದೆ.
ಲಾಕ್ ಡೌನ್ ಕಾರಣದಿಂದ ಸೀರಿಯಲ್ ಶೂಟಿಂಗ್ ಗಳು ಸ್ಥಗಿತಗೊಂಡಿರುವ ಕಾರಣದಿಂದ ಹಳೆಯ ಎಪಿಸೋಡ್ ಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಈ ನಡುವೆ ಸಚಿವ ಆರ್.ಅಶೋಕ್ ಸಿನಿಮಾ ಹಾಗೂ ಸೀರಿಯಲ್ ಶೂಟಿಂಗ್ ಗೆ ಅನುಮತಿ ಕೊಡುವ ಮುನ್ಸೂಚನೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಚಿತ್ರರಂಗದ ಕೆಲವರು ಬಂದು ಈ ಕುರಿತಂತೆ ಮನವಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಶೂಟಿಂಗ್ ನಡೆಸುವುದಾಗಿ ಭರವಸೆ ಕೊಟ್ಟಿದ್ದಾರೆಯ. ಹೀಗಾಗಿ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದಿದ್ದಾರೆ.
Discussion about this post