ಬೆಂಗಳೂರು : ಕೊರೋನಾ ಮಹಾಮಾರಿ ಇಡೀ ಜಗತ್ತನ್ನು ಕಾಡುತ್ತಿದೆ. ಇದು ಅಬ್ಬರಿಸುತ್ತಿರುವ ಪರಿ ನೋಡಿದರೆ ಅದ್ಯಾವ ಪ್ರಳಯವೂ ಇನ್ಮುಂದೆ ಬೇಕಾಗಿಲ್ಲ. ಈಗಾಗಲೇ ಜೀವ ಜಗತ್ತನ್ನು ಪ್ರಳಯವೆಂಬ ಅಗ್ನಿ ಕುಂಡದಲ್ಲಿ ಸುಡುತ್ತಿದೆ ಈ ಕೊರೋನಾ.
ಈ ಮಹಾಮಾರಿ ಇದೀಗ ಸೀರಿಯಲ್ ಲೋಕವನ್ನೂ ತಲ್ಲಣಗೊಳಿಸಿದೆ. ಈ ಕೊರೋನಾದ ಕಾರಣದಿಂದ ಈಗಾಗಲೇ ಎಲ್ಲಾ ಸೀರಿಯಲ್ ಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಒಂದು ಸೀರಿಯಲ್ ಸ್ಥಗಿತಗೊಂಡರೆ ನೂರಾರು ಮಂದಿಯ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ.
ಇದೀಗ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಡೂಪರ್ ಧಾರಾವಾಹಿ ಮಾಂಗಲ್ಯ ತಂತುನಾನೇನಾ ಮುಕ್ತಾಯವಾಗುತ್ತಿದೆ ಅನ್ನುವ ಶಾಕಿಂಗ್ ಸುದ್ದಿ ಬಂದಿದೆ.
ಲಾಕ್ ಡೌನ್ ಗಿಂತ ಮುಂಚೆ ದಿನದಿಂದ ದಿನಕ್ಕೆ ಕುತೂಹಲಕಾರಿ ಸಂಚಿಕೆಗಳು ಪ್ರಸಾರವಾಗಿತ್ತು. ಅದರಲ್ಲೂ ಶ್ರಾವಣಿಗೆ ಸಿಕ್ಕ ಕಷ್ಟ ನೋಡಿ ವೀಕ್ಷಕರು ಬೇಸರ ಮಾಡಿಕೊಂಡಿದ್ದರು. ಆಕೆಯ ಹೋರಾಟ ಎಲ್ಲವನ್ನೂ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಶ್ರಾವಣಿಯನ್ನು ತೇಜು ಅಧಿಕೃತವಾಗಿ ಮನೆಗೆ ಕರೆಸಿಕೊಳ್ತಾನ, ಚುನಾವಣೆಯ ಕಥೆಯೇನಾಗುತ್ತದೋ ಅನ್ನುವ ಕುತೂಹಲದಲ್ಲಿ ವೀಕ್ಷಕರಿದ್ದರು. ಅಷ್ಟು ಹೊತ್ತಿಗೆ ಲಾಕ್ ಡೌನ್ ಘೋಷಣೆಯಾಯ್ತು. ಮಾಂಗಲ್ಯಂ ಗೆ ಬ್ರೇಕ್ ಬಿತ್ತು.

ಇನ್ನೇನು ಶೂಟಿಂಗ್ ಪ್ರಾರಂಭವಾಗುತ್ತದೆ ಹೊಸ ಸಂಚಿಕೆಗಳು ಪ್ರಸಾರ ಪ್ರಾರಂಭಿಸುತ್ತದೆ ಅನ್ನುವಷ್ಟರಲ್ಲಿ ಶಾಕಿಂಗ್ ಸುದ್ದಿ ಬಂದಿದೆ.
ಮಾಂಗಲ್ಯ ತಂತುನಾನೇನಾ ಧಾರವಾಹಿ ಪ್ರಸಾರ ನಿಲ್ಲಿಸುತ್ತಿದೆಯಂತೆ. ಆದರೆ ಕಾರಣವೇನು ಅನ್ನುವುದು ಇನ್ನೂ ನಿಗೂಢ. ಈ ಸಂಬಂಧ ವಾಹಿನಿಯಾಗಲಿ ಧಾರಾವಾಹಿ ನಿರ್ದೇಶಕ ರಘು ಚರಣ್ ತಿಪಟೂರು ಆಗ್ಲಿ ಏನೂ ಹೇಳಿಲ್ಲ.
ಮಾಹಿತಿ ಪ್ರಕಾರ ಸಾಮಾಜಿಕ ಅಂತರ ಕಾಪಾಡಿಕೊಂಡು ಶೂಟಿಂಗ್ ಮಾಡುವುದು ಕಷ್ಟ. ಹೀಗಾಗಿ ಧಾರಾವಾಹಿ ನಿಲ್ಲಿಸದೇ ವಿಧಿಯಿಲ್ಲ ಎಂದು ಮಾಂಗಲ್ಯ ತಂತುನಾನೇನಾಗೆ ಮಂಗಳ ಹಾಡಲಾಗಿದೆಯಂತೆ.
ಜೊತೆಗೆ ಧಾರಾವಾಹಿ ಶೂಟಿಂಗ್ ಗಳನ್ನು ಒಳಾಂಗಣದಲ್ಲಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಬಹುತೇಕ ಧಾರಾವಾಹಿಗಳು ಹೊರಾಂಗಣದ ಕಥೆಯನ್ನೇ ನೆಚ್ಚಿಕೊಂಡಿರುವುದು ಮತ್ತೊಂದು ಸಮಸ್ಯೆಯಾಗಿದೆ.
ಒಟ್ಟಿನಲ್ಲಿ ಒಳ್ಳೆಯ ಕಥೆ ಹೊಂದಿದ್ದ ಧಾರಾವಾಹಿಯನ್ನು ಕೊರೋನಾ ಕೊಂದಿತಲ್ಲ ಅನ್ನುವುದೇ ಬೇಸರದ ವಿಷಯ.

Discussion about this post