ಕಿರಿಕ್ ಗಳ ಮೇಲೆ ಕಿರಿಕ್ ಮಾಡಿಕೊಂಡ ನಂತರ ಸಿನಿಮಾ ರಂಗದಿಂದ ದುನಿಯಾ ವಿಜಿಯನ್ನು ಬ್ಯಾನ್ ಮಾಡಬೇಕು ಅನ್ನುವ ಆಗ್ರಹ ಕೇಳಿ ಬಂದಿದೆ. ಈ ಸಂಬಂಧ ಕೆಲ ಸಂಘಟನೆಗಳು ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದೆ. ಜೊತೆಗೆ ಮತ್ತು ಪಾನಿಪೂರಿ ಕಿಟ್ಟಿ ವಿಜಯ್ ವಿರುದ್ಧ ಚಿತ್ರರಂಗದಿಂದ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆದರೆ ವಿಜಿಯನ್ನು ಬ್ಯಾನ್ ಮಾಡುವುದು ಅಷ್ಟು ಸುಲಭವಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡರು ಇದು ವೈಯಕ್ತಿಕ ವಿಷಯ ಆಗಿರುವುದರಿಂದ ನಾವು ಚಿತ್ರರಂಗದಿಂದ ಬಹಿಷ್ಕರಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಿಜಯ್ ಅವರು ಬಂದ ಕೂಡಲೇ ಇಬ್ಬರನ್ನು ಕೂರಿಸಿ ಮಾತನಾಡಿ ಬುದ್ಧಿವಾದ ಹೇಳುವುದಾಗಿ ಹೇಳಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಮಾತನಾಡಿರುವ ಪಾನಿಪೂರಿ ಕಿಟ್ಟಿ ವೈಯಕ್ತಿಕವಾಗಿ ನನಗೂ, ವಿಜಯ್ಗೂ ದ್ವೇಷವಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡ ಮೇಲೆ ಹಲ್ಲೆ ನಡೆದಿದ್ದು, ಇಂತಹ ಘಟನೆಯಿಂದ ಎಂಥವರಿಗೂ ಸಿಟ್ಟು ಬರುತ್ತದೆ. ಪ್ರಕರಣದಲ್ಲಿ ನಾನು ಕಾನೂನು ಮೊರೆ ಹೋಗಿದ್ದೇನೆ.
ಯಾವುದೇ ನಟನಾಗಲಿ ಇನ್ನೊಬ್ಬರಿಗೆ ಮಾದರಿ ಆಗಬೇಕು. ಹಾಗಂತ ವಿಜಿ ವಿರುದ್ಧ ರೌಡಿ ಶೀಟರ್ ತೆರೆಯಲಿ ಎಂದು ನಾನು ಬಯಸುವುದಿಲ್ಲ. ಅದು ಕಾನೂನಿಗೆ ಬಿಟ್ಟ ವಿಚಾರ. ಆದರೆ, ವಿಜಯ್ ಕ್ಷಮೆ ಕೇಳಿದರೂ, ನಾನು ಯಾವುದೇ ಕಾರಣಕ್ಕೂ ಸಂಧಾನಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ.
ಆದರೆ ಒಂದನ್ನು ಅರ್ಥ ಮಾಡಿಕೊಳ್ಳಬೇಕು… ಬ್ಯಾನ್ ಮಾಡಿ ಎಂದು ಒತ್ತಡ ಹೇರುವ ಬದಲು ದುನಿಯಾ ವಿಜಿ ಚಿತ್ರ ನೋಡುವುದನ್ನು ನಿಲ್ಲಿಸಿ, ಒಂದೆರೆಡು ಚಿತ್ರ ಮಕಾಡೆ ಮಲಗಿದರೆ ಅವರೇ ಚಿತ್ರರಂಗ ಬಿಟ್ಟು ಹೋಗುತ್ತಾರೆ.
[youtube https://www.youtube.com/watch?v=_VJhnCsTNHg&w=853&h=480]
Discussion about this post