ಸರಿಗಮಪದ 15 ಸೀಸನ್ ಪ್ರಾರಂಭಗೊಂಡಿದೆ. ಹೊಸ ಸಂಗೀತ ಪ್ರತಿಭೆಗಳು ತಮ್ಮೊಳಗಿನ ಸಂಗೀತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ವೇದಿಕೆ ಹತ್ತಿದ್ದಾರೆ.
ಆದರೆ ಕಾರ್ಯಕ್ರಮವನ್ನು ಸ್ವಾಗತಿಸಿರುವ ಕನ್ನಡಿಗರು ಅದೇ ಪ್ರಮಾಣದಲ್ಲಿ ಟೀಕೆಗಳನ್ನೂ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮವನ್ನು ಹೊಗಳುವುದರ ಜೊತೆಗೆ ಅನುಶ್ರೀ ಮತ್ತು ಅರ್ಜುನ್ ಜನ್ಯರನ್ನು ಲೆಫ್ಟ್ ರೈಟ್ ತೆಗೆದುಕೊಳ್ಳುತ್ತಿದ್ದಾರೆ.
ನಿಮ್ಮಿಬ್ಬರದು ದೊಂಬರಾಟ ಎಂದು ಕರೆದಿರುವ ಕಾರ್ಯಕ್ರಮ ಅಭಿಮಾನಿಗಳು, ಅದ್ಭುತ ಕಾರ್ಯಕ್ರಮವನ್ನು ಮಕ್ಕಳ ಜೊತೆ ಕೂತು ನೋಡಲಾಗುತ್ತಿಲ್ಲ ಎಂದು ನೊಂದು ಬರೆದುಕೊಂಡಿದ್ದಾರೆ.
ಇದೊಂದು ಫ್ಯಾಮಿಲಿ ಕಾರ್ಯಕ್ರಮ, ಇದನ್ನು ನಿರೂಪಣೆ ಮಾಡುವಾಗ ಗಂಭೀರತೆ ಇರಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಆದರೆ TRP ಸಲುವಾಗಿ ಈ ಎಲ್ಲಾ ಗಿಮಿಕ್ ಗಳು ಅನಿವಾರ್ಯವಾಗಿರುವುದರಿಂದ ಝೀ ವಾಹಿನಿಯಾಗಲಿ ಅನುಶ್ರೀಯಾಗಲಿ ಈ ಫೇಕ್ ಪ್ರೀತಿ ನಾಟಕವನ್ನು ನಿಲ್ಲಿಸುವುದಿಲ್ಲ. ಡಾರ್ಲಿಂಗ್ ಶಬ್ಧಕ್ಕೆ ಅನುಶ್ರೀ ಬ್ರೇಕ್ ಕೂಡಾ ಹಾಕುವುದಿಲ್ಲ.
ಆದರೂ ನಾದ ಬ್ರಹ್ಮ ಹಂಸಲೇಖ ಮುಂದೆ ಇಂಥ ವರ್ತನೆ ನಿಜಕ್ಕೂ ಸರಿಯಲ್ಲ ಅನ್ನುವ ವಾದದಲ್ಲಿ ಅರ್ಥವಿದೆ ಬಿಡಿ.
[youtube https://www.youtube.com/watch?v=f7cenEeBUzQ&w=697&h=392]
Discussion about this post