ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ನಿವಾರಿಸಿದ ದ ಬೆನ್ನಲ್ಲೇ ಸುಪ್ರೀಂ ತೀರ್ಪಿನ ಪರ ಮತ್ತು ವಿರೋಧ ವಾದಗಳು ಕೇಳಿಬಂದಿದೆ.
ಇದೀಗ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎ ಪದ್ಮಕುಮಾರ್, ಮಹಿಳಾ ಪರ ಹೋರಾಟಗಾರರು ಮಾತ್ರ ಶಬರಿಮಲೆಗೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಕೇರಳ ಸಿಎಂ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಸುಪ್ರೀಂ ತೀರ್ಪಿನಿಂದ ಬೇಸರವಾಗಿದೆ. ಕೇವಲ ಮೂಲಭೂತ, ಸಾಂವಿಧಾನಿಕ ಅಂಶಗಳನ್ನು ಗಮನಿಸುವ ಜತೆಗೆ ದೇಗುಲದ ಭೌಗೋಳಿಕ ಹಿನ್ನೆಲೆ, ಕೆಲವೊಂದು ನಿಯಮಗಳ ಬಗ್ಗೆಯೂ ಗಮನಿಸಬೇಕಿತ್ತು ಎಂದರು.
ಕಳೆದ ಬಾರಿಯ ಪೂಜೆ ಸಂದರ್ಭ ವಿಪರೀತ ಜನಸಂದಣಿಯಿಂದ ಭಕ್ತರು 17 ಗಂಟೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಬೆಟ್ಟಗುಡ್ಡದ ಕಡಿದಾದ ಹಾದಿಯಲ್ಲಿ ಅಷ್ಟೊಂದು ದೂರ ನಡೆದುಕೊಂಡು ಬರುವುದು ಕೂಡ ಮಹಿಳೆಯರಿಗೆ ಸುಲಭವಲ್ಲ.
ಹೀಗಾಗಿ ತೀರ್ಪು ಬಂದಿರುವುದಕ್ಕೆ ಅದನ್ನು ಸಂಭ್ರಮಿಸುವ ಮನಸ್ಥಿತಿಯಿರುವ ಮಹಿಳಾ ಹೋರಾಟಗಾರರು ಶಬರಿಮಲೆಗೆ ಬರುವ ನಿರೀಕ್ಷೆಯಿದೆ. ಉಳಿದಂತೆ ಶಬರಿಮಲೆಯ ಐತಿಹ್ಯ, ಹಿನ್ನೆಲೆ ಮತ್ತು ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಅರಿವಿರುವ ಯಾವ ಮಹಿಳಾ ಭಕ್ತರು ಕೂಡ ನಿಯಮ ಮೀರಿ ಸನ್ನಿಧಿಗೆ ಬರಲಾರರು ಎಂದು ಪದ್ಮಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Discussion about this post