ಬೆಂಗಳೂರು : ಮನೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ರೆ ಇಲ್ಲಿ ಕಳ್ಳರ ಪಾಲಾಗುತ್ತದೋ ಅನ್ನುವ ಭಯದಿಂದ ಬಹುತೇಕರು ಬ್ಯಾಂಕ್ ಲಾಕರ್ ಮೊರೆ ಹೋಗುತ್ತಾರೆ.
ಬ್ಯಾಂಕ್ ಲಾಕರ್ ನಲ್ಲಿ ಹಣವಿಟ್ರೆ ಸೇಫ್ ಅನ್ನುವುದು ಬಹುತೇಕರ ಅಭಿಪ್ರಾಯ.
ಆದರೆ ಇದೊಂದು ಸುದ್ದಿ ಓದಿದ ಮೇಲೆ ಬ್ಯಾಂಕ್ ಲಾಕರ್ ಗಳಲ್ಲಿ ಹಣವಿಡುವ ಮುನ್ನ ಸಾವಿರ ಸಲ ಯೋಚಿಸಬೇಕಾಗುತ್ತದೆ.
ಯಾಕಂದ್ರೆ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ಕಂತೆ ಕಂತೆ ಹಣವನ್ನು ಗೆದ್ದಲು ಹುಳಗುಳು ತಿಂದು ಹಾಕಿದೆ.

ಇಂತಹುದೊಂದು ವಿಚಿತ್ರ ಘಟನೆ ನಡೆದಿರುವುದು ಗುಜರಾತಿನ ವಡೋದಾರದಲ್ಲಿ.
ಇಲ್ಲಿನ ಪ್ರತಾಪ್ ನಗರದ BOB ಬ್ಯಾಂಕ್ ಶಾಖೆಯಲ್ಲಿ ರೆಹನಾ 2.20 ಲಕ್ಷ ಹಣ ಇಟ್ಟಿದ್ದರು.

ಇತ್ತೀಚೆಗೆ ಹಣಕ್ಕಾಗಿ ಲಾಕರ್ ತೆಗೆದ್ರೆ ಅಲ್ಲಿದ್ದ ಗೆದ್ದಲು ಹುಳಗಳು ಹಣವನ್ನು ತಿಂದು ತೇಗಿತ್ತು. ಇನ್ನೊಂದಿಷ್ಟು ದಿನ ಬಿಟ್ರೆ ಹಣವಿಟ್ಟಿದ್ದಕ್ಕೆ ಸಾಕ್ಷಿಯೂ ಇರುತ್ತಿರಲಿಲ್ಲ.

ಇದೀಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ರೆಹನಾ ಅವರು ಹಣವಿಟ್ಟಿದ್ದ ಲಾಕರ್ ಮೇಲೆ ಬ್ಯಾಂಕ್ ಸಿಬ್ಬಂದಿ ಸ್ಟಿಕ್ಕರ್ ಒಂದನ್ನು ಅಂಟಿಸಿದ್ದು operation stopped contact custodian ಎಂದು ಬರೆಯಲಾಗಿದೆ. ಅಲ್ಲಿಗೆ ರೆಹನಾ ಅವರ ನಿರ್ಲಕ್ಷ್ಯವೇ ಇದರಲ್ಲಿ ಎದ್ದು ಕಾಣಿಸುತ್ತಿದೆ. ತನಿಖೆಯ ಮೇಲೆ ಸತ್ಯಾಂಶ ಬಹಿರಂಗವಾಗಬೇಕಾಗಿದೆ.

Discussion about this post