ಮಂಡ್ಯ : ರಾಜ್ಯದ ಅನೇಕ ಭಾಗಗಳಲ್ಲಿ ಇದು ಒಕ್ಕಣೆ ಮಾಡುವ ಸಮಯವಾಗಿದ್ದು, ರೈತರು ರಸ್ತೆಗಳಲ್ಲೇ ತಮ್ಮ ಬೆಳೆಯನ್ನು ಒಕ್ಕಣೆ ಮಾಡುತ್ತಿದ್ದಾರೆ.
ಈ ರೀತಿಯಲ್ಲಿ ರಸ್ತೆ ಒಕ್ಕಣೆ ಮಾಡುವುದರಿಂದ ವಾಹನಗಳು ಬೆಂಕಿಗೆ ಆಹುತಿಯಾಗುವ ಸಾಧ್ಯತೆಗಳಿದೆ.
ಈ ಹಿನ್ನಲೆಯಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದ್ದು, ರಸ್ತೆಗಳಲ್ಲಿ ಒಕ್ಕಣೆ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹೇಳಿದೆ. ಆದರೆ ರೈತರು ಇದನ್ನು ಕಿವಿಗೆ ಹಾಕಿಕೊಂಡಂತಿಲ್ಲ.
ಹೀಗೆ ರೈತರು ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾರೊಂದು ಚಲಿಸಿ ಹೊತ್ತಿ ಉರಿದ ಘಟನೆ ಕೆ ಆರ್ ಪೇಟೆ ತಾಲೂಕಿಲ್ಲಿ ನಡೆದಿದೆ.
ಬೆಂಗಳೂರಿನಿಂದ ಭೂ ವರಾಹನಾಥ ದೇವಾಲಯಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಉರುಳಿ ಕಾಳು ಒಕ್ಕಣೆ ಮಾಡುತ್ತಿದ್ದರು. ಈ ವೇಳೆ ಕಾರಿನ ಸೈಲೆನ್ಸರ್ ಭಾಗಕ್ಕೆ ಉರುಳಿ ಸೊಪ್ಪು ಸಿಕ್ಕಿದೆ. ಮಾತ್ರವಲ್ಲದೆ ಇಂಜಿನ್ ಹೀಟ್ ಆಗಿದ್ದ ಕಾರಣ ಕಾರು ಸ್ವಲ್ಪ ದೂರ ಸಾಗುವಷ್ಟರಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹಿಂಬದಿಯಿಂದ ಬರುತ್ತಿದ್ದ ಸವಾರರು ಕಾರು ಚಾಲಕನಿಗೆ ಬೆಂಕಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ಕಾರಿನಲ್ಲಿದ್ದವರು ಕೆಳಗಿಳಿದ ಪರಿಣಾಮ ಪ್ರಾಣಾಪಾಯ ಸಂಭವಿಸಿಲ್ಲ.
Discussion about this post