ಬೆಂಗಳೂರು : ನಟಿ ಜಯಶ್ರೀ ಆತ್ಮಹತ್ಯೆ ಚಂದನವನಕ್ಕೆ ಶಾಕ್ ಕೊಟ್ಟಿದೆ. ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ನಟಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಅವರ ಸ್ನೇಹಿತರು ಯಶಸ್ವಿಯಾಗಿದ್ದರು.
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ
ಅವರ ಕ್ಲೋಸ್ ಸರ್ಕಲ್ ನಲ್ಲಿದ್ದ ಗೆಳೆಯರು ಮಾನಸಿಕ ಸ್ಥೈರ್ಯ ತುಂಬಿ ಬದುಕುವ ಕನಸನ್ನು ಕಟ್ಟಿಕೊಂಡಿದ್ದರು. ಇದಾದ ಬಳಿಕ ನಾನು ಬದುಕಬೇಕು, ಬದುಕು ಸಾಧಿಸಿ ತೋರಿಸಬೇಕು ಎಂದು ಪಣ ತೊಟ್ಟಿದ್ದ ಜಯಶ್ರೀ ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದ್ದರು.
ಆದರೆ ಇದೀಗ ಅದೇನಾಯ್ತೋ ಗೊತ್ತಿಲ್ಲ, ಏಕಾಏಕಿ ಶಾಕ್ ಕೊಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

ಈ ಹಿಂದೊಮ್ಮೆ ತಮ್ಮ ಬದುಕಿನ ಕಹಿ ಘಟನೆಗಳನ್ನು ಹಂಚಿಕೊಂಡಿದ್ದ ಜಯಶ್ರೀ ನಾನು ಹಣ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿಲ್ಲ. 5ನೇ ವಯಸ್ಸಿನಲ್ಲೇ ನನ್ನ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಿತ್ತು. ಹುಡುಗಿಯರಿಂದಲೂ ದೌರ್ಜನ್ಯ ನಡೆದಿದೆ. ನನಗೆ ದಯಾಮರಣ ಕೊಡಿಸಿ ಅಂದಿದ್ದರು.
ಮಾನಸಿಕ ತುಂಬಾ ಜರ್ಜರಿತರಾಗಿದ್ದ ಜಯಶ್ರೀ ಖಿನ್ನತೆಗೂ ಒಳಗಾಗಿದ್ದರು.
Discussion about this post