ಕೋಲಾರ : ನೀರಿನ ತೊಟ್ಟಿಯಲ್ಲಿ ವಿದ್ಯುತ್ ಹರಿದು 5ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಚಿಂತಾಮಣಿ ತಾಲೂಕು ಕೆಂಚಾರ್ಲಹಳ್ಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರದ ಗಣರಾಜ್ಯೋತ್ಸವ ಸಲುವಾಗಿ ಶಾಲೆ ಸ್ವಚ್ಛಗೊಳಿಸುವ ಸಲುವಾಗಿ ಬರುವಂತೆ ಕೆಲ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಯರು ಸೂಚಿಸಿದ್ದರು.
ಆದರೆ ಸೋಮವಾರ ಅಧ್ಯಾಪಕರು ಬರೋ ಮುನ್ನವೇ ಶಾಲೆಗೆ ಬಂದ ವಿದ್ಯಾರ್ಥಿಗಳು ಅಡುಗೆ ಸಹಾಯಕರಿಂದ ಕೀ ಪಡೆದು ಶಾಲೆ ಸ್ವಚ್ಚಗೊಳಿಸುವ ಕಾರ್ಯ ಪ್ರಾರಂಭಿಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ನೀರು ಎತ್ತಿಕೊಳ್ಳಲು ಹೋದ ವೇಳೆ ಬಕೆಟ್ ತೊಟ್ಟಿಯಲ್ಲಿ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಇಳಿಯುವ ವೇಳೆ ವಿದ್ಯಾರ್ಥಿ ಮೋಟಾರ್ ಇಳಿಸಿದ್ದ ಕಬ್ಬಿಣದ ಪೈಪ್ ಹಿಡಿದುಕೊಂಡಿದ್ದಾನೆ. ರಾಡ್ ಮುಖಾಂತರ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ
ಮೃತನನ್ನು ಮುರುಗಮಲ್ಲ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಶಂಕರಪ್ಪರವರ ಮಗ ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ನಂದೀಶ್ (11) ಎಂದು ಗುರುತಿಸಲಾಗಿದೆ.
Discussion about this post