ನವದೆಹಲಿ : ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಮೂರು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆ ಇಂದು ಹಿಂಸಾರೂಪಕ್ಕೆ ತಿರುಗಿದೆ.
ಗಣರಾಜ್ಯೋತ್ಸವದ ದಿನದಂದೇ ರೈತರು ಟ್ರ್ಯಾಕ್ಟರ್ rally ನಡೆಸಲು ನಿರ್ಧರಿಸಿದ್ದರು. ಇದಕ್ಕೆ ಪೊಲೀಸರು ಹಲವು ನಿರ್ಬಂಧಗಳನ್ನು ವಿಧಿಸಿದ್ದರು. ಇದೀಗ ಪೊಲೀಸರ ಎಲ್ಲಾ ನಿರ್ಬಂಧಗಳನ್ನು ಮುರಿದು ರೈತರು ದೆಹಲಿಗೆ ನುಗ್ಗಿದ್ದಾರೆ.
ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಸೇರಿದಂತೆ ರೈತರನ್ನು ತಡೆಯಲು ಹಾಕಿದ್ದ ಪ್ರತಿಯೊಂದು ವ್ಯವಸ್ಥೆಯನ್ನೂ ಪುಡಿಗಟ್ಟಲಾಗಿದೆ.
ಕೆಲವೊಂದು ಕಡೆಗಳಲ್ಲಿ ಪೊಲೀಸರ ಮೇಲೂ ಹಲ್ಲೆಗಳು ನಡೆದಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಇದೀಗ ಲಾಠಿ ಜಾರ್ಜ್ ಮಾಡಲಾರಂಭಿಸಿದ್ದಾರೆ ಈಗಾಗಲೇ ರೈತರ ಗುಂಪೊಂದು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದು, ದೆಹಲಿ ರಣಾಂಗಣವಾಗಿ ಮಾರ್ಪಟ್ಟಿದೆ.
Discussion about this post