ನವದೆಹಲಿ : ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಸಂಪೂರ್ಣ ಹಾದಿ ತಪ್ಪಿದೆ. ಅಲ್ಲಿಗೆ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಸಂಪೂರ್ಣ ಹಾದಿ ತಪ್ಪಿದ್ದು, ಕಾಯ್ದೆ ರೈತರ ವಿರೋಧಿಯಾಗಿದ್ದರು ಅದನ್ನು ಜಾರಿಯಾಗದಂತೆ ಪ್ರತಿರೋಧ ಒಡ್ಡುವ ನೈತಿಕತೆಯನ್ನು ಹೋರಾಟಗಾರರು ಕಳೆದುಕೊಂಡಿದ್ದಾರೆ.
ಶಾಂತಿಯುತವಾಗಿ ಟ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಹೇಳಿದ್ದ ಪ್ರತಿಭಟನಕಾರರು ಹಿಂಸಾಚಾರಕ್ಕೆ ಬಂದಂತೆ ಕಾಣಿಸುತ್ತಿತ್ತು.
ನಿಜವಾದ ಹೋರಾಟಗಾರರ ನಡುವೆ ನುಸುಳಿದ ನಕಲಿ ಹೋರಾಟಗಾರರು ಪೊಲೀಸರ ಮೇಲೆ ಟ್ಯಾಕ್ಟರ್ ಗಳನ್ನು ನುಗ್ಗಿಸುವ ಪ್ರಯತ್ನ ಮಾಡಿದರು. ಒಂದು ಹಂತದಲ್ಲಿ ಟ್ರ್ಯಾಕ್ಟರ್ ನುಗ್ಗುವುದನ್ನು ನೋಡಿದರೆ ಪೊಲೀಸರ ಹೆಣ ಬೀಳುವುದು ಖಚಿತ ಅನ್ನುವಂತಿತ್ತು.
ಮತ್ತೊಂದು ಕಡೆ ಪೊಲೀಸರ ಮೇಲೆಯೇ ತಲ್ವಾರ್ ಬೀಸಿರೋ ವಿಡಿಯೋಗಳು ವೈರಲ್ ಆಗಿದೆ. ಪೊಲೀಸರತ್ತ ರೈತರೆಂದು ಅನ್ನಿಸಿಕೊಂಡವರು ತಲ್ವಾರ್ ಬೀಸುತ್ತಾರೆ ಅಂದ್ರೆ ಅರ್ಥವೇನು.
Discussion about this post