crossorigin="anonymous"> ಭಾರತದಲ್ಲಿ ಕೊರೋನಾ ಮೊದಲ ಕೇಸ್ ಪತ್ತೆಯಾಗಿ ಇಂದಿಗೆ 1 ವರ್ಷ – ಕೇರಳದಲ್ಲಿ ಇನ್ನೂ ನಿಲ್ಲದ ಅಟ್ಟಹಾಸ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಭಾರತದಲ್ಲಿ ಕೊರೋನಾ ಮೊದಲ ಕೇಸ್ ಪತ್ತೆಯಾಗಿ ಇಂದಿಗೆ 1 ವರ್ಷ – ಕೇರಳದಲ್ಲಿ ಇನ್ನೂ ನಿಲ್ಲದ ಅಟ್ಟಹಾಸ

Radhakrishna Anegundi by Radhakrishna Anegundi
30-01-21, 9 : 38 am
in ದೇಶ
corona 1 year
Share on FacebookShare on TwitterWhatsAppTelegram

ಬೆಂಗಳೂರು : ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಕೊರೋನಾ ಅಬ್ಬರಿಸುತ್ತಿದೆ. ಎಲ್ಲಿ ನಮ್ಮಲ್ಲಿಗೂ ಬಂದು ತಲುಪುತ್ತದೋ ಅನ್ನುವ ಆತಂಕದಲ್ಲಿ ಭಾರತೀಯರಿದ್ದರು.

ಈ ನಡುವೆ ಕೊರೋನಾ ಎದುರಿಸಲು ಭಾರತ ಕೂಡಾ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿತ್ತು.

ಅದು 24 January 2020. ವುಹಾನ್ ನಲ್ಲಿ ಕಾಡುತ್ತಿದ್ದ ನಿಗೂಢ ವೈರಸ್ ಕಾರಣದಿಂದ ವುಹಾನ್ ನಿಂದ ವಿದ್ಯಾರ್ಥಿಯೊಬ್ಬಳು ಕೇರಳ ತ್ರಿಶೂರ್ ಗೆ ಬಂದಿಳಿದಳು.

ಬಂದು ನಾಲ್ಕು ದಿನ ಕಳೆಯುವಷ್ಟರಲ್ಲಿ ವಿದ್ಯಾರ್ಥಿನಿಗೆ ಒಣ ಕೆಮ್ಮು ಕಾಣಿಸಿಕೊಂಡಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಲ್ಲಿಗೆ ಚೈನಾ ವೈರಸ್ ಭಾರತದ ಬಾಗಿಲು ಬಡಿಯುತ್ತಿದೆ ಅಂದಾಯ್ತು. ವಿದ್ಯಾರ್ಥಿನಿಯ ಹಲವು ಮಾದರಿಗಳನ್ನು ಪರೀಕ್ಷೆ ಕಳುಹಿಸಲಾಯ್ತು. ಜನರಿಗೆ 30 ರಂದು ಬಂದ ವರದಿ… ಹೌದು ಅದು ಕೊರೋನಾ ಪಾಸಿಟಿವ್

ಈ ಮೂಲಕ ಭಾರತದಲ್ಲಿ ಕೊರೋನಾ ಕೇಸ್ ಪತ್ತೆಯಾಗಿ ಇಂದಿಗೆ 1 ವರ್ಷ ಪೂರ್ಣಗೊಂಡಿದೆ.

ದೇಶದ ಮೊದಲ ಮೂರು ಕೊರೋನಾ ಕೇಸ್ ಗಳು ಪತ್ತೆಯಾಗಿದ್ದು ಕೇರಳದಲ್ಲಿ. ಇಡೀ ವಿಶ್ವವೇ ತಿರುಗಿ ನೋಡುವಂತೆ ಕೊರೋನಾವನ್ನು ನಿಯಂತ್ರಿಸಿದ್ದ ಕೇರಳ ಇದೀಗ ಮಾತ್ರ ಎಡವಿ ಬಿದ್ದಿದೆ.

ಬಹುತೇಕ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಇಳಿ ಮುಖವಾಗುತ್ತಿದ್ದರೆ ಕೇರಳದಲ್ಲಿ ಮಾತ್ರ ಕೊರೋನಾ ಅಬ್ಬರ ಮುಂದುವರಿದಿದೆ.

ಪಿಣರಾಯಿ ಸರ್ಕಾರ ಕೊರೋನಾ ನಿಯಂತ್ರಣ ವಿಚಾರದಲ್ಲಿ ಸಂಪೂರ್ಣ ವಿಫಲ ಅನ್ನುತ್ತಿದೆ ಪ್ರತಿಪಕ್ಷಗಳು.

ಜನವರಿ 30 ರಂದು ಕೇರಳದ ತ್ರಿಶೂರ್ ನಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಚೀನಾದ ವುಹಾನ್ ನಿಂದ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು.

ಇದು ಭಾರತದ ಮೊದಲ ಕೊರೋನಾ ಪ್ರಕರಣವಾದರೆ, ಫೆ 2 ರಂದು ಆಲಪುಳ್ಳದಲ್ಲಿ ಹಾಗೂ 3ನೇ ಕೇಸ್ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು.

ಅಲ್ಲಿಂದ ಪ್ರಾರಂಭವಾದ ಸೋಂಕಿನ ಅಟ್ಟಹಾಸ ಇನ್ನೂ ಮುಂದುವರಿದಿದ್ದು ಒಂದೇ ವರ್ಷದಲ್ಲಿ 1.07 ಕೋಟಿ ಮಂದಿಗೆ ಸೋಂಕು ತಗುಲಿದೆ.

ಕೊರೋನಾ ಆತಂಕದ ನಡುವೆ ಅಧಿವೇಶನಗಳನ್ನು ನಡೆಸಲು ರಾಜಕಾರಣಿಗಳು ಹಿಂಜರಿದರೂ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಜೊತೆಗೆ ಹಲವು ಚುನಾವಣೆಗಳು ನಡೆದಿದೆ.

ಇದೀಗ ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ವಿಶ್ವ ಹೆಜ್ಜೆಯಿಡುತ್ತಿದ್ದು ಹಲವು ಲಸಿಕೆಗಳ ವಿತರಣೆ ಪ್ರಾರಂಭವಾಗಿದೆ.

ಕೊರೋನಾಗೆ ಮೊದಲು ಲಸಿಕೆ ಹುಡುಕಿದ ಹಿರಿಮೆ ರಷ್ಯಾ ದೇಶದಾಗಿದ್ದು ಆಕ್ಟೋಬರ್ 31 ರಂದು ರಷ್ಯಾ ಸ್ಪುಟ್ನಿಕ್ ಅನ್ನುವ ಲಸಿಕೆಯನ್ನು  ವಿಶ್ವಕ್ಕೆ ಪರಿಚಯಿಸಿತ್ತು.

ಹಾಗಂತ ಭಾರತ ಕೂಡಾ ಹಿಂದೆ ಬಿದ್ದಿಲ್ಲ, ಈಗಾಗಲೇ ಎರಡು ಲಸಿಕೆಗಳ ವಿತರಣೆಗೆ ಅನುಮತಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ

Share1TweetSendShare

Discussion about this post

Related News

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಪೋಲೆಂಡಿಂದ ಉಕ್ರೇನ್ ರೈಲಿನಲ್ಲಿ ನರೇಂದ್ರ ಮೋದಿ ಪ್ರಯಾಣ : ಹೇಗಿದೆ ಗೊತ್ತಾ Rail force one

ಸುರಿಯೋ ಮಳೆಯ ನಡುವೆ ರೈತರಿಗೆ ಕೊಡೆ ಹಿಡಿದು ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಭಾರತ- ಮಾಲ್ಡೀವ್ಸ್ ನಡುವಣ ಸಹಕಾರ ವೃದ್ಧಿ – ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್

ವಿಯೆಟ್ನಾಂ ಪ್ರಧಾನಿ ಮಿನ್ ಚಿನ್ ಭಾರತ ಭೇಟಿ – ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಮಾರಿಷಸ್‌ನಲ್ಲಿ ಕೇಂದ್ರ ಸಚಿವ ಎಸ್. ಜೈಶಂಕರ್

 ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ : ಕೇಂದ್ರ ಗೃಹ ಸಚಿವ ಅಮಿತ್ ಷಾ

ಡೆಂಘೀ ನಿಯಂತ್ರಣ ಕುರಿತು ಕೇಂದ್ರದಿಂದ ಪರಾಮರ್ಶೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್