ಬೆಂಗಳೂರು : ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರ ಫೋಟೋ ಒಂದು ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಣ್ಣಾಮಲೈ ರಾಜಕೀಯವಾಗಿ ನೆಲೆಗೊಳ್ಳುತ್ತಿರುವ ತಮಿಳುನಾಡಿಗಿಂತಲೂ ಅವರ ಕರ್ಮಭೂಮಿ ಕರ್ನಾಟಕದಲ್ಲಿ ಈ ಪೋಟೋ ವೈರಲ್ ಆಗಿತ್ತು.
ಇದನ್ನೂ ಓದಿ : ಮೋದಿಯೂ ಓದಲೇಬೇಕಾದ ಅಣ್ಣಾಮಲೈ ಪುಸ್ತಕ : Stepping Beyond Khaki: Revelations of a Real-Life Singham
ಅದರಲ್ಲೂ ಈ ಫೋಟೋ ಕೆಟ್ಟದಾಗಿಯೇ ಟ್ರೋಲ್ ಆಗಿತ್ತು.

ಇದೀಗ ಈ ಫೋಟೋ ಕುರಿತಂತೆ ರಿಯಾಕ್ಷನ್ ಕೊಟ್ಟಿರುವ ಅಣ್ಣಾಮಲೈ “ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಹೇಳುತ್ತಿರುವ ನನ್ನ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಸ್ನೇಹಿತರಿಂದ ಇಷ್ಟೊಂದು ಆಕ್ರೋಶ ವ್ಯಕ್ತವಾಗುತ್ತದೆ ಎಂದು ಭಾವಿಸಿರಲಿಲ್ಲ. ಆಲ್ ಈಸ್ ವೆಲ್ ಫ್ರೆಂಡ್ಸ್’ ಎಂದಿದ್ದಾರೆ.
ಇದನ್ನೂ ಓದಿ : ಸಿ ಟಿ ರವಿ ಮುಂದೆ ಕೈ ಕಟ್ಟಿ ನಿಂತ ಪೋಟೋ ಹಿಂದಿನ ರಹಸ್ಯವೇನು..? ವೈರಲ್ ಆಯ್ತು ಸಿಂಗಂ ಅಣ್ಣಾಮಲೈ ಫೋಟೋ…
ಅಂದ ಹಾಗೇ ಈ ಪೋಟೋ ಕೊಯಂಬುತ್ತೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದ್ದಾಗಿತ್ತು. ಸಿಟಿ ರವಿ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅಣ್ಣಾಮಲೈ ವಂದನಾರ್ಪಣೆ ಸಲ್ಲಿಸುವ ವೇಳೆ ಫೋಟೋ ತೆಗೆಯಲಾಗಿತ್ತು.
ಇದನ್ನೂ ಓದಿ : ನಿನ್ನ ಹುಟ್ಟು,ಜೀವನ ಭಾರತದ ಚರಿತ್ರೆಯಾಗಲಿ..’ಸಿಂಗಂ’ಗೆ ಭಾವುಕ ವಿದಾಯ ಕೋರಿದ ‘ಸಿಂಗಂ’

ಆದರೆ ಅಣ್ಣಾಮಲೈ ವಿರೋಧಿಗಳು ಈ ಫೋಟೋಗೆ ಇಲ್ಲಸಲ್ಲದ ಬಣ್ಣ ಹಚ್ಚಿ, ಕಥೆ ಕಟ್ಟಿ ಟ್ರೋಲ್ ಮಾಡಿ ತಮ್ಮ ದೇನು ತೀರಿಸಿಕೊಳ್ಳಬೇಕಿತ್ತೋ ಅದನ್ನು ತೀರಿಸಿಕೊಂಡಿದ್ದರು. ಈಗ ಅದಕ್ಕೆ ಅಣ್ಣಾಮಲೈ ಸಾಫ್ಟ್ ಆಗಿ ಬಲವಾದ ಟಾಂಗ್ ಕೊಟ್ಟಿದ್ದಾರೆ.
Discussion about this post