ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರಲಾರಂಭಿಸಿದೆ.
ಸಮಾಜದ ಹಿತ ಕಾಯಬೇಕಾದ ಖಾಕಿಗಳು ಸುಲಿಗೆ ಕಾಯಕ ಮಾಡುತ್ತಿದ್ದಾರೆ ಅನ್ನುವ ದೂರುಗಳು ಹೆಚ್ಚಾಗಿದೆ.
ಇದಕ್ಕೆ ಮತ್ತೊಂದು ಸಾಕ್ಷಿ ಅನ್ನುವಂತೆ ಹುಳಿಮಾವು ಠಾಣೆಯ ಸಿಬ್ಬಂದಿ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಾಗಿದೆ.
ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೆಹಬೂಬ್ ಪಾಷಾ, ಪೇದೆಗಳಾದ ಪ್ರವೀಣ್, ರಾಜ ಶೇಖರ್, ಶೈಲೇಶ್ ಮತ್ತು ಎನ್ ಚಂದ್ರಶೇಖರ್ ವಿರುದ್ಧ ತಕಾರರು ಅರ್ಜಿ ಸಲ್ಲಿಸಲಾಗಿದೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಯಾರಬ್, ಮುಷ್ತಾಕ್ ಪಾಷಾ, ಅಫ್ರೋಜ್ ಮತ್ತು ಸೈಯದ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅಕ್ರಮ ಬಂಧನ ಹಾಗೂ 15 ಲಕ್ಷ ಸುಲಿಗೆ ಮಾಡಿದ ಆರೋಪ ಹೊರಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಪಿಎಸ್ ದಿನೇಶ್ ಕುಮಾರ್ ಅವರ ಪೀಠ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಆಯುಕ್ತರು ಮತ್ತು ಹುಳಿಮಾವು ಠಾಣೆಯ ಐವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಫೆ.24 ರಂದು ಮುಂದಿನ ವಿಚಾರಣೆ ನಡೆಯಲಿದೆ.
Discussion about this post