ಕೇರಳ : ಕೆಲವೇ ಗಂಟೆಗಳ ಹಿಂದೆ ನಡೆದ ಕಾರ್ ಅಪಘಾತದ ಗಲಾಟೆ ಮರ್ಮಾಂಗಕ್ಕೆ ಬಾಯಿ ಕತ್ತರಿಸುವ ಮೂಲಕ ಅಂತ್ಯಗೊಂಡ ವಿಚಿತ್ರ ಘಟನೆ ಕೇರಳದ ಕುನ್ನಾತೂರ್ ನಲ್ಲಿ ನಡೆದಿದೆ.
ಪೆರುಂಬದಪ್ಪು ನಿವಾಸಿ ಶರೀಫ್ ಆಟೋ ಪುನ್ನೋಕಾವ್ ನಿವಾಸಿ ಸುಲೇಮಾನ್ ಕಾರಿಗೆ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲಿ ಕಿತ್ತಾಡಿಕೊಂಡ ಇಬ್ಬರನ್ನೂ ಸಮಾಧಾನ ಪಡಿಸಿದ್ದ ಸಾರ್ವಜನಿಕರು ಕಳುಹಿಸಿಕೊಟ್ಟಿದ್ದರು.
ಗ್ರಹಚಾರ ಅನ್ನುವಂತೆ ಅಲ್ಲಿಂದ ಹೊರಟ ಅವರಿಬ್ಬರು ಸಮೀಪದ ಬಾರ್ ಗೆ ಎಣ್ಣೆ ಸೇವೆಗಾಗಿ ಪ್ರವೇಶಿಸಿದ್ದಾರೆ. ಅಲ್ಲಿ ಮತ್ತೆ ಮುಖಾಮುಖಿಯಾದ ಇಬ್ಬರು ಕಾರು ಅಪಘಾತ ವಿಚಾರದಲ್ಲಿ ಮತ್ತೆ ಕಿತ್ತಾಟ ಪ್ರಾರಂಭಿಸಿದ್ದಾರೆ.

ಈ ವೇಳೆ ನಶೆಯಲ್ಲಿದ್ದ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಆಟೋ ಚಾಲಕ ಶರೀಫ್, ಸುಲೇಮಾನ್ ಮರ್ಮಾಂಗಕ್ಕೆ ಬಾಯಿ ಹಾಕಿದ್ದಾನೆ. ಮಾತ್ರವಲ್ಲದೆ ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ
ಈ ವೇಳೆ ಬಾರ್ ಸಿಬ್ಬಂದಿ ಸುಲೇಮಾನ್ ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಶರೀಫ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಸುಲೇಮಾನ್ ಮರ್ಮಾಂಗವನ್ನು ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸಲಾಗಿದೆ
Discussion about this post