ನವದೆಹಲಿ : ಭಾರತ ವಿರೋಧಿ ತಳೆದಿದೆ ಎನ್ನಲಾದ ಟ್ವೀಟರ್ ವಿರುದ್ಧ ಇದೀಗ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿದೆ.
ಭಾರತಕ್ಕೆ ಭಾರತದ ಕಾನೂನಿನ ಪಾಠ ಮಾಡಿದ್ದ ಟ್ವೀಟರ್ ಗೆ ಭಾರತದ ಕಾನೂನು ಮೂಲಕವೇ ಉತ್ತರ ಕೊಡಲು ನಿರ್ಧರಿಸಲಾಗಿದೆ.
ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸುವ ನೆಪದಲ್ಲಿ ದ್ವೇಷ ಹರಡುತ್ತಿರುವ ಖಾತೆಗಳನ್ನು ಬ್ಲಾಕ್ ಮಾಡಲು ಟ್ವೀಟರ್ ಈ ಹಿಂದೆ ನಿರಾಕರಿಸಿತ್ತು.
ಕೇಂದ್ರ ಸರ್ಕಾರ ಕೊಟ್ಟ ನೊಟೀಸ್ ಗಳನ್ನು ಈಗಾಗಲೇ ಕಸ ಬುಟ್ಟಿಗೆ ಎಸೆದಿರುವ ಟ್ವೀಟರ್, ನಿಮ್ಮ ಸೂಚನೆಗಳನ್ನು ಪಾಲಿಸಲು ಸಾಧ್ಯವಿಲ್ಲ ಅಂದಿದೆ.
ಈ ಹಿನ್ನಲೆಯಲ್ಲಿ ಕಠಿಣ ಕ್ರಮ ಮುಂದಾಗಿರುವ ಕೇಂದ್ರ ಸರ್ಕಾರ,ಸಾಮಾಜಿಕ ಜಾಲತಾಣ ಕಂಪನಿಗಳು ಒಂದೊಂದು ದೇಶ ವಿಷಯದಲ್ಲಿ ಒಂದೊಂದು ರೀತಿ ನಡೆದುಕೊಳ್ಳುವುದನ್ನು ಸಹಿಸೋದಿಲ್ಲ ಅಂದಿದೆ.
ಜೊತೆಗೆ ಆದೇಶ ಪಾಲನೆ ಮಾಡದ ಆರೋಪದಡಿಯಲ್ಲಿ ಟ್ವೀಟರ್ ಇಂಡಿಯಾದ ಉನ್ನತ ಅಧಿಕಾರಿಗಳನ್ನು ಬಂಧಿಸುವ ಕುರಿತಂತೆ ಸಿದ್ದತೆಗಳು ಪ್ರಾರಂಭಗೊಂಡಿದೆ ಎನ್ನಲಾಗಿದೆ.
ಈ ಸಂಬಂಧ ರಾಜ್ಯಸಭೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ್, ಅಮೆರಿಕಾದ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದ ತಕ್ಷಣ ಅದರ ಕುರಿತಾತ ಪೋಸ್ಟ್ ಗಳನ್ನು ಟ್ವೀಟರ್ ಕಂಪನಿ ಅಳಿಸಿ ಹಾಕಿತ್ತು. ಆದರೆ ಕೆಂಪು ಕೋಟೆ ವಿಚಾರದಲ್ಲಿ ಹಾಗೆ ಮಾಡಲಿಲ್ಲ. ಇಂತಹ ನಾಟಕಗಳನ್ನು ನಾವು ಸಹಿಸೋದಿಲ್ಲ. ಇದೇನು ಜೋಕ್ಸ್ ಅಲ್ಲ.
ಭಾರತ ವಾಕ್ ಸ್ವಾತಂತ್ರ್ಯ ನೀಡಿದೆ ಹೌದು, ಆದರೆ ದೇಶದ ಏಕತೆ ಮತ್ತು ಸಾರ್ವಭೌಮತೆ ರಕ್ಷಿಸಲು ನಿರ್ಬಂಧಗಳೂ ಇವೆ ಅಂದಿದ್ದಾರೆ.
ಈ ಹಿಂದೆ 1100 ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದಾಗ ಕೆಲವೇ ದಿನಗಳ ಕಾಲ ಮಾತ್ರ ಬ್ಲಾಕ್ ಮಾಡಲಾಗಿತ್ತು.
ಮತ್ತೆ ಬ್ಲಾಕ್ ಮಾಡುವಂತೆ ಸೂಚಿಸಿದರೆ, ನಾವು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಿಲ್ಲ ಎಂದು ಭಾರತಕ್ಕೆ ಟ್ವೀಟರ್ ಕಂಪನಿ ಕಾನೂನು ಪಾಠ ಹೇಳಿತ್ತು.
ಈ ನಡುವೆ ಟ್ವೀಟರ್ ಕಂಪನಿಗೆ ಖಡಕ್ಕ್ ಎಚ್ಚರಿಕೆ ಕೊಟ್ಟಿರುವ ಕೇಂದ್ರ ಸರ್ಕಾರ ಅಧಿಕಾರಿಗಳು, ಇಲ್ಲಿರಬೇಕು ಅಂದ್ರೆ ಭಾರತದ ಕಾನೂನು ಪಾಲಿಸಿ, ಚೌಕಾಶಿ ಮಾಡಲು ನಾವು ಕುಳಿತಿಲ್ಲ.
ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಕಾರರು ಇದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಅಂದಿದ್ದಾರೆ
Discussion about this post