ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಎರಡು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.
ಗಮನಿಸಬೇಕಾದ ಅಂಶ ಅಂದ್ರೆ ಎರಡೂ ಕಾಲೇಜುಗಳು ಕೂಡಾ ನರ್ಸಿಂಗ್ ಕಾಲೇಜು ಮತ್ತು ಕೊರೋನಾ ಸೋಂಕು ಪತ್ತೆಯಾದ ಎಲ್ಲರೂ ಕೂಡಾ ಕೇರಳ ಮೂಲದ ವಿದ್ಯಾರ್ಥಿಗಳು.
ಇದೀಗ ಕೇರಳ ಮೂಲದ ವಿದ್ಯಾರ್ಥಿಗಳಿಂದ ಬೆಂಗಳೂರಿನಲ್ಲಿ ಆತಂಕ ಸೃಷ್ಚಿಯಾಗಿದೆ. ಹಾಗಂತ ಇದು ವಿದ್ಯಾರ್ಥಿಗಳ ತಪ್ಪಲ್ಲ, ಕಾಲೇಜು ಆಡಳಿತ ಮಂಡಳಿಗಳ ತಪ್ಪು.
ಕಾಸಿನಾಸೆ ಬಿದ್ದಿರುವ ಕಾಲೇಜುಗಳು ಕೇರಳದಿಂದ ಬಂದವರು ಎಂದು ಗೊತ್ತಿದ್ದರೂ ಕೊರೋನಾ ಟೆಸ್ಟ್ ಮಾಡಿಸದೆ ಕಾಲೇಜುಗಳಿಗೆ ಸೇರಿಸುತ್ತಿದೆ. ಕೇರಳದಿಂದ ಬಂದ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಅಥವಾ ಕ್ವಾರಂಟೈನ್ ಮಾಡಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಇದೀಗ ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುಶ್ರೀ ನರ್ಸಿಂಗ್ ಕಾಲೇಜಿನ 40 ವಿದ್ಯಾರ್ಥಿಗಳಿಗೆ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದೆ.
ಆ ವಿದ್ಯಾರ್ಥಿಗಳು ಬೆಂಗಳೂರಿನ ಅದ್ಯಾವ ಮೂಲೆ ಮೂಲೆ ಸುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಇವರಿಂದ ಯಾರಿಗೆಲ್ಲಾ ಸೋಂಕು ಹರಡಿದೆ ಅನ್ನುವುದು ಕೂಡಾ ಗೊತ್ತಿಲ್ಲ.
ಹಿಂದೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಟ್ರೇಸ್ ಮಾಡಲಾಗುತ್ತಿತ್ತು. ಈಗ ಎಲ್ಲವನ್ನೂ ನಿಲ್ಲಿಸಲಾಗಿದೆ.
ಈ ನಡುವೆ ಕೇರಳದಿಂದ ರಾಜ್ಯಕ್ಕೆ ಬರೋ ವಿದ್ಯಾರ್ಥಿಗಳು 72 ಗಂಟೆಯೊಳಗೆ RTPCR ಕೊರೋನಾ ಪರೀಕ್ಷೆ ನಡೆಸಿದ ನೆಗೆಟಿವ್ ವರದಿಯನ್ನು ಕಾಲೇಜುಗಳಿಗೆ ಕೊಡುವಂತೆ ಸೂಚಿಸಲಾಗಿದೆ.
ಒಂದು ವೇಳೆ ವರದಿ ಸಲ್ಲಿಸದಿದ್ರೆ 14 ದಿನಗಳ ಕ್ವಾರಂಟೈನ್ ಮುಗಿಸಿ RTPCR ಮಾಡಿದ ನೆಗೆಟಿವ್ ಪ್ರಮಾಣ ಪತ್ರ ನೀಡುವಂತೆ ಸೂಚಿಸಲಾಗಿದೆ.
Discussion about this post