ಕಾಸರಗೋಡು : ಒಂದು ಕಾಲದಲ್ಲಿ ಕೊರೋನಾವನ್ನು ಕಟ್ಟಿ ಹಾಕಿದ್ದ ಕೇರಳದಲ್ಲಿ ಇದೀಗ ಕೊರೋನಾ ಅಬ್ಬರಿಸುತ್ತಿದೆ.
ಈ ನಡುವೆ ಕೇರಳದ ಅಕ್ಕಪಕ್ಕದ ರಾಜ್ಯಗಳು ಎಚ್ಚೆತ್ತುಕೊಂಡಿದ್ದು, ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಕೇರಳದ ಗಡಿಗಳನ್ನು ಬಂದ್ ಮಾಡಿವೆ.
ಈ ನಡುವೆ ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ಇಲಿಜ್ವರ ಕಾಣಿಸಿಕೊಂಡಿದೆ.
ಈ ಸಂಬಂಧ ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟಿರುವ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮ್ ದಾಸ್ ಮುಂಜಾಗ್ರತ ಕ್ರಮಗಳ ಎಚ್ಚರಿಕೆ ಕೊಟ್ಟಿದ್ದಾರೆ
ನಿತ್ರಾಣ ಸಹಿತ ಜ್ವರ, ತಲೆನೋವು, ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದು, ಮೂತ್ರದ ಪ್ರಮಾಣದಲ್ಲಿ ಕಡಿತ, ಹಳದಿ ಕಾಮಾಲೆ ಲಕ್ಷಣಗಳು ಕಂಡು ಬರಬಹುದು.
ಕೇವಲ ಇಲಿ ಮಾತ್ರವಲ್ಲದೆ ನಾಯಿ ಜಾನುವಾರುಗಳ ಮೂತ್ರದ ಮೂಲಕವೂ ರೋಗ ಹರಡುವ ಸಾಧ್ಯತೆಗಳಿದೆ.
ಮೂತ್ರ ಮಣ್ಣಲ್ಲಿ ಬೆರೆತ ಬಳಿಕ ಮಾನವನ ದೇಹದ ಗಾಯದ ಮೂಲಕ ದೇಹದ ಒಳ ಪ್ರವೇಶಿಸುತ್ತದೆ, ಹೀಗಾಗಿ ಹೀಗೆ ಸಂಪರ್ಕಕ್ಕೆ ಬರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಉಳ್ಳವರು ಗ್ಲೌಸ್, ದೊಡ್ಡ ಗಾತ್ರದ ಶೂ (ರಬ್ಬರ್ ಬೂಟ್), ಧರಿಸಬೇಕು.
ಪ್ರಾಣಿ ಹಾಗೂ ಜಾನುವಾರುಗಳ ಮಲ ಮೂತ್ರ ಸ್ವಚ್ಛಗೊಳಿಸುವ ವೇಳೆ ಎಚ್ಚರಿಕೆ ವಹಿಸಬೇಕು ಮತ್ತು ಇಲಿಗಳು ಓಡಾಡುವ ಜಾಗದಲ್ಲಿ ಆಹಾರ ಪದಾರ್ಥಗಳನ್ನು ಗಟ್ಟಿಯಾಗಿ ಮುಚ್ಚಿಡುವಂತೆ ಸೂಚಿಸಲಾಗಿದೆ.
ಪ್ರಾಣಿಗಳ ಸಂಪರ್ಕದಲ್ಲೇ ಕೆಲಸ ಮಾಡುವವರು ವಾರಕ್ಕೊಮ್ಮೆ 6 ವಾರಗಳ ಕಾಲ ಡಾಕ್ಸಿ ಸೈಕ್ಲಿನ್ ಅನ್ನುವ ಮಾತ್ರ ಸೇವಿಸುವಂತೆ ಸಲಹೆ ನೀಡಲಾಗಿದೆ.
ಇವು ರೋಗ ಪ್ರತಿರೋಧ ಗುಳಿಗೆಗಳಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರಲಿದೆ.
Discussion about this post