ಕಳೆದ ಕೆಲವು ದಿನಗಳಿಂದ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಜಗಳಕ್ಕೆ ತೆರೆ ಬಿದ್ದಿದೆ.
ದರ್ಶನ್ ಅವರ ರಂಗಪ್ರವೇಶದೊಂದಿಗೆ ಇದೀಗ ಚಂದನವನದ ಕಿರಿಕ್ ಪ್ರಸಂಗಕ್ಕೆ ಬ್ರೇಕ್ ಹಾಕಲಾಗಿದೆ.
ಇಂದು ಬನ್ನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಗ್ಗೇಶ್ ಇಷ್ಟೆಲ್ಲಾ ಜಗಳವಾಗುತ್ತಿದ್ದರೂ ದರ್ಶನ್ ಫೋನ್ ಮಾಡಿಲ್ಲ. ಅವರ ಸಂಕಷ್ಟ ಕಾಲದಲ್ಲಿ ಜೊತೆಗಿದ್ದವರು ಯಾರು ಅನ್ನುವುದು ಅವರಿಗೆ ಮರೆತು ಹೋಯ್ತೆ ಎಂದು ದರ್ಶನ್ ಅವರ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದರು,
ಜಗ್ಗೇಶ್ ಇಂದು ಆಡಿದ ಮಾತುಗಳನ್ನು ನೋಡಿದರೆ ದರ್ಶನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತಿತ್ತು.
ದರ್ಶನ್ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಂತೆ ಮೌನ ಮುರಿದಿರುವ ಡಿ’ಬಾಸ್ ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಬಂದಿದ್ದರೆ, ಅಭಿಮಾನಿಗಳಿಗೆ ಎರಡು ಬಿಟ್ಟು ಬುದ್ದಿ ಹೇಳುತ್ತಿದೆ.
ಜಗ್ಗೇಶ್ ಸರ್ ಹಿರಿಯರು, ಅವರು ನಮ್ಮ ಮುಂದಿರಬೇಕು, ನನ್ನಿಂದ ಹಾಗೂ ಅಭಿಮಾನಿಗಳಿಂದ ಜಗ್ಗೇಶ್ ಅವರಿಗೆ ಬೇಸರಾಗಿದ್ದರೆ ಕ್ಷಮೆ ಕೇಳುತ್ತೇನೆ ಅಂದಿದ್ದಾರೆ.
ಇದೇ ವೇಳೆ ಜಗ್ಗೇಶ್ ಅವರು ಮನೆಗೆ ಬಂದರೆ ಅತಿಥ್ಯ ನೀಡುತ್ತೇನೆ, ಆದರೆ ರೇಸ್ ಅಂತಾ ಬಂದ್ರೆ ರೇಸ್ ಗೆ ನಿಲ್ಲುತ್ತೇನೆ ಎಂದು ಮಾರ್ಮಿಕವಾಗಿ ತಿರುಗೇಟು ಕೊಟ್ಟಿದ್ದಾರೆ.
ಅತ್ತ ದರ್ಶನ್ ಮಾತನಾಡುತ್ತಿದ್ದಂತೆ ಇತ್ತ ಟ್ವೀಟ್ ಮಾಡಿರುವ ಜಗ್ಗೇಶ್ ಸಮಯ ಸಂದರ್ಭ ವಿಷಘಳಿಗೆ ,ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ,ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ,
ಕನ್ನಡಕ್ಕೆ ಒಗ್ಗಟ್ಟಿರಲಿ. ಧನ್ಯವಾದ ದರ್ಶನ್.
ಮನಸ್ಸು ಹಗುರವಾಯಿತು..ಧನ್ಯವಾದ ಮಾಧ್ಯಮಮಿತ್ರರಿಗೆ….ಧನ್ಯವಾದ ಕನ್ನಡದ ಮನಗಳಿಗೆ….ಇನ್ನೆಂದು ಇಂಥ ದಿನ ಬರದಿರಲಿ ಅಂದಿದ್ದಾರೆ.
Discussion about this post