ಇದೇ ಮಾರ್ಚ್ 11 ರಂದು ಶಿವರಾತ್ರಿಯನ್ನು ಆಚರಿಸುತ್ತೇವೆ. ಶಿವನ ಭಕ್ತರು ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಶಿವನನ್ನ ಹಲವು ಹೆಸರಿನಿಂದಲೂ ಕರೆಯಲಾಗುತ್ತದೆ ಶಂಕರ, ಮಂಜುನಾಥ, ವಿಶ್ವನಾಥ, ಭೋಲೆನಾಥ್ ಎಂದು ಕರೆಯುತ್ತಾರೆ.
ಶಿವರಾತ್ರಿಯ ದಿನ ಶಿವನಿಗೆ ಏನೆಲ್ಲಾ ಅರ್ಪಿಸಿದರೆ ಇಷ್ಟಾರ್ಥ ಪೂರೈಕೆಯಾಗುತ್ತದೆ ಅನ್ನೋದನ್ನ ತಿಳಿಯಿರಿ…
ಕರ್ಪೂರ : ಶಿವನಿಗೆ ಕರ್ಪೂರದ ಸುವಾಸನೆ ತುಂಬಾನೆ ಇಷ್ಟ, ಇದರಿಂದ ವಾತಾವರಣ ಶುದ್ಧ ಹಾಗೂ ಪವಿತ್ರವಾಗುತ್ತದೆ. ಪೂಜೆಯ ಸಮಯದಲ್ಲಿ ಇದನ್ನ ಬಳಕೆ ಮಾಡಿದರೆ ಶಿವ ಬೇಗನೆ ಪ್ರಸನ್ನನಾಗುತ್ತಾನೆ.
ನೀರು : ಶಿವನ ಮೇಲೆ ನೀರಿನ ಅಭಿಷೇಕ ಮಾಡುವ ಮಹತ್ವವು ಸಮುದ್ರ ಮಂಥನದ ಕತೆಯೊಂದಿಗೆ ಸೇರಿಕೊಂಡಿದೆ. ವಿಷ ಸೇವನೆ ಮಾಡಿದ ನಂತರ ಶಿವನ ಕಂಠ ನೀಲಿಯಾಗಿತ್ತು. ಆ ಬಿಸಿಯನ್ನ ಕಡಿಮೆ ಮಾಡಲು ದೇವಿ -ದೇವತೆಯರು ಶಿವನಿಗೆ ನೀರನ್ನು ಅರ್ಪಿಸಿದರು.
ಬಿಲ್ವಪತ್ರೆ : ಶಿವನ ಮೂರು ಕಣ್ಣಿನ ಪ್ರತೀಕ ಬಿಲ್ವಪತ್ರೆ. ಆದುದರಿಂದ ಶಿವನಿಗೆ ಬಿಲ್ವಪತ್ರೆಯನ್ನ ಅರ್ಪಿಸಿದರೆ ಉತ್ತಮ.
ಎಕ್ಕದ ಹೂವು : ಶಿವನಿಗೆ ಎಕ್ಕದ ಹೂವು ಅರ್ಪಿಸುವುದು ಎಂದರೆ ಚಿನ್ನ ದಾನ ಮಾಡಿದಷ್ಟು ಶ್ರೇಷ್ಠವಾಗಿದೆ. ಅಷ್ಟೇ ಪುಣ್ಯ ಇದರಿಂದಲೂ ಸಿಗುತ್ತದೆ.
ದತ್ತೂರ : ಶಿವ ಕೈಲಾಸ ಪರ್ವತದಲ್ಲಿ ವಾಸ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಆ ಚಳಿಯ ಜಾಗದಲ್ಲಿ ಉತ್ತಮ ಆಹಾರ ಮತ್ತು ಔಷಧಿ ಅತ್ಯಗತ್ಯವಾಗಿದೆ. ಅಂತಹ ಔಷಧೀಯ ಶಖ್ತಿ ದತ್ತೂರದಲ್ಲಿದೆ. ಆದುದರಿಂದ ಇದನ್ನ ಶಿವನಿಗೆ ಅರ್ಪಿಸುವುದು ಉತ್ತಮ ಎನ್ನಲಾಗುತ್ತದೆ.
ಅಕ್ಕಿ : ಅಕ್ಕಿಯನ್ನ ಅಕ್ಷತೆ ಎಂದು ಕರೆಯಲಾಗುತ್ತದೆ. ಇದರ ಬಣ್ಣ ಬೆಳ್ಳಗಿರುತ್ತದೆ. ಅಕ್ಷತೆ ಇರದೆ ಇದ್ದರೆ ಶಿವನ ಪೂಜೆ ಪೂರ್ಣಗೊಳ್ಳುವುದಿಲ್ಲ.
ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ, ಆಧ್ಯಾತ್ಮಿಕ ಚಿಂತಕರು. 9972848937
Discussion about this post