ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಝೋಮ್ಯಾಟೋ ಡೆಲಿವರಿ ಬಾಯ್ ಹಾಗೂ ಮಹಿಳಾ ಡಿಸೈನರ್ ನಡುವಿನ ಕಿತ್ತಾಟಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಮಂಗಳವಾರ ಫುಡ್ ಆರ್ಡರ್ ಹಾಗೂ ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾಮರಾಜ್ ಮತ್ತು ಹಿತೇಶಾ ಚಂದ್ರಾಣಿ ನಡುವೆ ಗಲಾಟೆ ನಡೆದಿತ್ತು.
ಈ ವೇಳೆ ವ್ಯಾಪ್ತಿ ಮೀರಿ ವರ್ತಿಸಿದ್ದ ಕಾಮರಾಜ್ ಹಿತೇಶಾ ಚಂದ್ರಾಣಿ ಮೂಗು ಡ್ಯಾಮೇಜ್ ಮಾಡಿದ್ದ.
ಬಳಿಕ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರು.

ಇದೀಗ ಕಾಮರಾಜ್ ಪೊಲೀಸರ ಮುಂದೆ ಕೊಟ್ಟ ಹೇಳಿಕೆ ಲಭ್ಯವಾಗಿದ್ದು, ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಅವರು ಫುಡ್ ಆರ್ಡರ್ ಮಾಡಿದ್ದರು. ಬುಕ್ಕಿಂಗ್ ಸ್ವೀಕರಿಸಿದ್ದ ನಾನು ನಿಗದಿಗಿಂತ ಅನಿವಾರ್ಯ ಕಾರಣಗಳಿಂದ ಅವರ ಮನೆಗೆ ಊಟ ತೆಗೆದುಕೊಂಡು ಹೋಗಿದ್ದೆ. ಉದ್ದೇಶಪೂರ್ವಕವಾಗಿ ನಾನು ಲೇಟ್ ಮಾಡಿಲ್ಲ.
ಇದನ್ನೂ ಓದಿ : Exclusive – ರಾಬರ್ಟ್ ಪಾರ್ಟ್ 2 ಬರುತ್ತಾ…. ಅಭಿಮಾನಿಗಳ ಪ್ರಶ್ನೆಗೆ ನಿರ್ದೇಶಕರು ಹೇಳಿದ್ದೇನು..?
ಪಾರ್ಸೆಲ್ ತೆಗೆದುಕೊಂಡು ಹೋದ ವೇಳೆ ಮನೆ ಬಾಗಿಲಲ್ಲಿ ನಿಲ್ಲಿಸಿದ ಚಂದ್ರಾಣಿ, ನೀನು ತಡವಾಗಿ ಪಾರ್ಸೇಲ್ ತಂದಿದ್ದೀಯಾ. ಹಾಗಾಗಿ ಬುಕ್ಕಿಂಗ್ ರದ್ದು ಮಾಡುತ್ತೇನೆ ಎಂದು ಆರ್ಡರ್ ರದ್ದು ಮಾಡಿದ್ದಾರೆ.
ಕ್ಷಮೆ ಕೋರಿ ಪಾರ್ಸೇಲ್ ಸ್ವೀಕರಿಸುವಂತೆ ಮನವಿ ಮಾಡಿದರೂ ಪ್ರತಿಕ್ರಿಯಿಸದೆ ಬಾಗಿಲು ಬಂದ್ ಮಾಡಿದ್ದಾರೆ.
ಇದನ್ನೂ ಓದಿ :Zomato ದ ಫುಡ್ ಆರ್ಡರ್ ಕ್ಯಾನ್ಸಲ್ ಮಾಡಿದ್ರೆ ಡೆಲಿವರಿ ಬಾಯ್ ಹೊಡೆದೇ ಬಿಟ್ನಲ್ಲ
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮನೆಯೊಳಗಡೆ ನುಗ್ಗಿದ ಡೆಲಿವರಿ ಬಾಯ್ ಫುಡ್ ಒಳಗಿಟ್ಟು ನಾನು ನಿನ್ನ ಗುಲಾಮನಲ್ಲ ಅಂದಿದ್ದಾನೆ ಅನ್ನುವುದು ಚಂದ್ರಾಣಿ ದೂರು.
ಆಗ ಡೆಲಿವರಿ ಬಾಯ್ ಗೆ ಹೊಡೆಯಲು ಚಂದ್ರಾಣಿ ಚಪ್ಪಲಿ ಕೈಗೆತ್ತಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾಮರಾಜ್ ಚಂದ್ರಾಣಿ ಮುಖಕ್ಕೆ ಪಂಚ್ ಕೊಟ್ಟು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
Discussion about this post