ಉಡುಪಿ : ತನ್ನ ಪ್ರಿಯತಮ ಹಾಗೂ ಮಗನ ಜೊತೆ ಸೇರಿ ತಾಳಿ ಕಟ್ಟಿದ್ದ ಗಂಡನನ್ನೇ ಕೊಂದು ಹೋಮ ಕುಂಡದಲ್ಲಿ ಸುಟ್ಟ ಆರೋಪ ಎದುರಿಸುತ್ತಿರುವ ರಾಜೇಶ್ವರಿ ಶೆಟ್ಟಿ ಮೇಲೆ ಇದೀಗ ವೇಶ್ಯಾವಾಟಿಕೆ ದಂಧೆ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
ಅಂದ ಹಾಗೇ ರಾಜೇಶ್ವರಿ ಶೆಟ್ಟಿ ಮಾಂಸ ದಂಧೆಯಲ್ಲಿ ಎರಡನೇ ಬಾರಿಗೆ ಸಿಕ್ಕಿ ಬಿದ್ದಿದ್ದು, ಈ ಬಾರಿ ಪರಾರಿಯಾಗಿದ್ದಾಳೆ.

ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ದುರ್ಗಾ ಇಂಟರ್ ನ್ಯಾಶನಲ್ ಹೊಟೇಲ್ ನಲ್ಲಿ ಅಕ್ರಮ ಚಟುವಟಿಕೆಗೆ ಆಶ್ರಯ ನೀಡಿದ ಆರೋಪ ರಾಜೇಶ್ವರಿ ಶೆಟ್ಟಿ ಮೇಲಿದೆ.
ವೇಶ್ಯಾವಾಟಿಕೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ರಾಜೇಶ್ವರಿ ಶೆಟ್ಟಿ ತಲೆ ಮರೆಸಿಕೊಂಡಿದ್ದಾಳೆ.

ತನ್ನ ಅಕ್ರಮ ಸಂಬಂಧ ಬಯಲಾದ ಹಿನ್ನಲೆಯಲ್ಲಿ ಕೋಟ್ಯಧಿಪತಿ ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಮಗ ನವನೀತ್ ಹಾಗೂ ಹಾಗೂ ಪ್ರಿಯತಮ ನಿರಂಜನ ಭಟ್ ಜೊತೆ ಸೇರಿ ಕೊಲೆ ಮಾಡಲಾಗಿತ್ತು.
ಬಳಿಕ ಭಾಸ್ಕರ ಶೆಟ್ಟಿ ಶವವನ್ನು ಹೋಮಕುಂಡದಲ್ಲಿ ಸುಟ್ಟು ಹಾಕಲಾಗಿತ್ತು.

2016ರ ಜುಲೈ 28 ರಂದು ಕೊಲೆ ನಡೆದಿದ್ದು, ಬಳಿಕ ಮೂವರು ಆರೋಪಿಗಳು ಜೈಲು ಪಾಲಾಗಿದ್ದರು.
ಈ ನಡುವೆ 2018ರ ಏಪ್ರಿಲ್ ನಲ್ಲಿ ಜಾಮೀನು ಪಡೆದಿದ್ದ ರಾಜೇಶ್ವರಿ ಗಂಡನ ಉದ್ಯಮ ನೋಡಿಕೊಳ್ಳುತ್ತಿದ್ದಳು. ಇನ್ನುಳಿದ ಎರಡು ಆರೋಪಿಗಳು ಇನ್ನೂ ಜೈಲೂಟ ತಿನ್ನುತ್ತಿದ್ದಾರೆ. ಅಷ್ಟರಲ್ಲಿ ರಾಜೇಶ್ವರಿ ಶೆಟ್ಟಿಯ ಮಾಂಸದಂಧೆ ವ್ಯವಹಾರ ಬಯಲಾಗಿದೆ.
Discussion about this post