ಟ್ರಾಫಿಕ್ ಪೊಲೀಸರು ಅಂದ್ರೆ ಹೇಗೆ ವರ್ತಿಸುತ್ತಾರೆ ಅನ್ನುವುದು ವಾಹನ ಹತ್ತಿದ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಅದಕ್ಕೆ ಆ ಭಾಗ, ಈ ಭಾಗ ಎಂದಿಲ್ಲ.
ಈ ವಿಭಾಗದಲ್ಲಿ ಕೆಲಸ ಮಾಡುವ ಒಂದೆರೆಡು ಮಂದಿ ಒಳ್ಳೆಯವರು ಬಿಟ್ಟರೆ ಮತ್ತೆಲ್ಲರೂ ಕೂಡಾ ಹಗಲು ದರೋಡೆಕೋರರೇ ಎಂದು ಕುಖ್ಯಾತಿ ಪಡೆದಿದ್ದಾರೆ.
ತಪಸ್ಸು ಮಾಡಿ ದೇವರನ್ನು ಬೇಕಿದ್ರೆ ಪ್ರತ್ಯಕ್ಷ ಮಾಡಿಕೊಳ್ಳಬಹುದು, ಟ್ರಾಫಿಕ್ ಪೊಲೀಸರ ಲಂಚದ ದಾಹವನ್ನು ತೀರಿಸಲು ಸಾಧ್ಯವಿಲ್ಲ.
ಇದೀಗ ನಾಚಿಕೆ, ಮಾನ ಮರ್ಯಾದೆ ಬಿಟ್ಟು ಹಗಲು ದರೋಡೆಗೆ ಇಳಿದಿರುವ ಮಂಗಳೂರು ಟ್ರಾಫಿಕ್ ಪೊಲೀಸರನ್ನು ನಾಡಿನ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಬಯಲು ಮಾಡಿದ್ದಾರೆ.
Discussion about this post