ಇದೀಗ ಚಂದನವನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸದ್ದು. ಕನ್ನಡವನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸುವ ಕಾರ್ಯವನ್ನು ಈ ಪ್ಯಾನ್ ಇಂಡಿಯಾ ಸಿನಿಮಾಗಳು ಮಾಡುತ್ತಿದೆ.
ಆದರೆ ಪ್ಯಾನ್ ಇಂಡಿಯಾ ಸಿನಿಮಾ ಅಬ್ಬರದಿಂದ ಚಂದನವನಕ್ಕೆ ಆತಂಕ ಕೂಡಾ ಇದೆ.
ಈ ನಡುವೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಪ್ಯಾನ್ ಇಂಡಿಯಾ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಕಬ್ಜ ಕಾರ್ಯದ ಮುಕ್ತಾಯದ ಬೆನ್ನಲ್ಲೇ ಉಪೇಂದ್ರ ಶಶಾಂಕ್ ಜೊತೆ ಸಿನಿಮಾ ಮಾಡಲಿದ್ದಾರೆ. ಹಾಗೇ ನೋಡಿದರೆ ಈ ಸಿನಿಮಾ ಎರಡು ವರ್ಷದ ಹಿಂದೆಯೇ ಅನೌನ್ಸ್ ಆಗಿತ್ತು. ಆದರೆ ಅದ್ಯಾವ ಗ್ರಹದೋಷವೋ ಗೊತ್ತಿಲ್ಲ ಸಿನಿಮಾ ಸೆಟ್ಟೇರಿರಲಿಲ್ಲ.
ಹೀಗಾಗಿ ಈ ಸಿನಿಮಾ ನಿಂತೇ ಹೋಯ್ತು ಅಂದುಕೊಂಡಿತ್ತು, ಚಂದನವನ. ಇದಕ್ಕೆ ಸಾಕ್ಷಿ ಅನ್ನುವಂತೆ ರುಕ್ಮಿಣಿ ವಸಂತ್ ಈ ಪ್ರಾಜೆಕ್ಟ್ ನಿಂದ ಹೊರ ನಡೆದಿದ್ದರು.
ಆದರೆ ಸಿನಿಮಾ ತಂಡ ಇಲ್ಲ ಇಲ್ಲ ಈ ಪ್ರಾಜೆಕ್ಟ್ ನಿಂತು ಹೋಗಿಲ್ಲ ಅಂದಿದೆ.
ಸಿನಿಮಾ ಮಾಡಲು ಬೇಕಾದ ತಯಾರಿ ಕಾರ್ಯ ನಡೆಯುತ್ತಿದೆ ಅನ್ನುವ ಮೂಲಕ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಅನ್ನುವ ಮುನ್ಸೂಚನೆ ಸಿಕ್ಕಿದೆ.
ಈ ಹಿಂದೆ ಈ ಸಿನಿಮಾಗೆ ಸಿನಿಮಾಗೆ ರುಕ್ಮಿಣಿ ವಸಂತ್ ಮತ್ತು ನಿಶ್ವಿಕಾ ಆಯ್ಕೆಯಾಗಿದ್ದರು. ಆದರೆ ರುಕ್ಮಿಣಿ ಸಿನಿಮಾದಿಂದ ಹೊರ ನಡೆದಿದ್ದಾರೆ.
ಇದೀಗ ರುಕ್ಮಿಣಿ ಜಾಗಕ್ಕೆ ಹರಿಪ್ರಿಯಾ ಬಂದಿದ್ದಾರೆ.
Discussion about this post