ಚಿಕ್ಕಬಳ್ಳಾಪುರ : ಗಂಡನ ಹಣದ ದಾಹಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಧಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.
ಮೃತರನ್ನು ಪ್ರಭಾಕರ್ ಬಡಾವಣೆಯ ನಳಿನಿ (36) ಎಂದು ಗುರುತಿಸಲಾಗಿದೆ,
16 ವರ್ಷಗಳ ಹಿಂದೆ ನಳಿನಿಯವರು ಶಿಡ್ಲಘಟ್ಟ ತಾಲೂಕು ದೊಡ್ಡಹಳ್ಳಿ ಗ್ರಾಮದ ಶ್ರೀರಾಮ ಎಂಬವರನ್ನು ವಿವಾಹವಾಗಿದ್ದರು.
ಈ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು, ಮಕ್ಕಳ ಎಜುಕೇಶನ್ ಸಲುವಾಗಿ ಚಿಂತಾಮಣಿ ನಗರದಲ್ಲಿ ಬಂದು ವಾಸವಾಗಿದ್ದರು.
ಈ ನಡುವೆ ಗಂಡ ಶ್ರೀರಾಮ ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದನಂತೆ. ಹಣ ತಾರದೇ ಹೋದ್ರೆ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಿದ್ದ.
ಇದೇ ರೀತಿ 15 ದಿನಗಳ ಹಿಂದೆ ಶ್ರೀರಾಮ ಹಲ್ಲೆ ಕಾಟ ತಾಳಲಾರದೆ ನಳಿನಿ ತವರು ಮನೆ ಸೇರಿದ್ದರು.
ಇದಾದ ಬಳಿಕ ಹೆಂಡತಿ ಮನೆಗೆ ಮತ್ತೆ ಬರೋದಿಲ್ಲ ಎಂದು ಗೊತ್ತಾದ ಶ್ರೀರಾಮ, ಅತ್ತೆ ಮನೆಗೆ ಹೋಗಿ ಹೆಂಡತಿಯ ಮನವೊಲಿಸಿದ್ದ. ಇನ್ನು ಮುಂದೆ ಹೀಗೆಲ್ಲಾ ಹಿಂಸೆ ಮಾಡೋದಿಲ್ಲ ಎಂದು ಹೇಳಿ ಕರೆ ತಂದಿದ್ದ.
ಆದರೆ ನಾಯಿ ಬಾಲ ಡೊಂಕು ಅನ್ನುವಂತೆ, ಶ್ರೀರಾಮ ಮತ್ತೆ ತನ್ನ ಹಳೆಯ ವರಸೆ ಪ್ರಾರಂಭಿಸಿದ್ದ.
ಗಂಡನ ವರ್ತನೆಯಿಂದ ನೊಂದ ನಳಿನಿ ಇಂದು ಫ್ಯಾನಿಗೆ ನೇಣು ಬಿಗಿದು ಉಸಿರು ಚೆಲ್ಲಿದ್ದಾರೆ.
ಹೆಂಡತಿ ಆತ್ಮಹತ್ಯೆ ಸುದ್ದಿ ತಿಳಿದ ಬೆನಲ್ಲೇ ಶ್ರೀರಾಮ ಊರು ಬಿಟ್ಟು ಪರಾರಿಯಾಗಿದ್ದಾನೆ.
Discussion about this post