ಬೆಂಗಳೂರು : ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಕೊರೋನಾ ಸೋಂಕಿನ ಎರಡನೆ ಅಲೆ ತಡೆಯುವ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ. ಇವೆಲ್ಲವೂ ಕೂಡಾ ಆದೇಶದಲ್ಲಿರುವ ಕಠಿಣ ನಿಯಮಗಳೇ ಹೊರತು, ಜಾರಿಯಾಗುವ ನಿಯಮಗಳಲ್ಲ. ಜಾರಿಯಾಗುವ ನಿಯಮಗಳಾಗಿದ್ರೆ ಉಪಚುನಾವಣೆ ಪ್ರಚಾರ ಸಂದರ್ಭದಲ್ಲೇ ಈ ಆದೇಶ ಹೊರ ಬೀಳಬೇಕಾಗಿತ್ತು.
ಕಲ್ಯಾಣ ಮಂಟಪದಲ್ಲಿ 100 ಜನ, ಜನ್ಮ ದಿನಕ್ಕೆ 50 ಜನ ಎಂದು ಹೇಳಿರುವ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಪರಿಸ್ಥಿತಿ ಹೇಗಿರಬೇಕು ಅನ್ನುವ ಬಗ್ಗೆ ಹೇಳಿಯೇ ಇಲ್ಲ. ರಾಜ್ಯದ ಬಹುತೇಕ ಶಿಕ್ಷಣ ಸಂಸ್ಥೆಗಳು ಕೊರೋನಾ ಹಾಟ್ ಸ್ಪಾಟ್ ಆಗಿದ್ದರೂ ಅಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕನಿಷ್ಠ ಪಕ್ಷ ಶಾಲಾ ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ನಡೆಸುವ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಲಿ.
ಇನ್ನು ಇದೇ ಆದೇಶದಲ್ಲಿ ಧಾರ್ಮಿಕ ಸಮಾರಂಭಗಳನ್ನು ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ ಹೇಳಿರುವ ರಾಜ್ಯ ಸರ್ಕಾರ ರಾಜಕೀಯ ಕಾರ್ಯಕ್ರಮದಲ್ಲಿ 200 ಜನ ಪಾಲ್ಗೊಳ್ಳಬಹುದು ಅಂದಿದೆ. ಇದಕ್ಕಿಂದ ದೊಡ್ಡ ದುರಂತ ಇನ್ನೇನಿದೆ. ಕಳೆದ ವರ್ಷವೂ ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡ ಕಾರಣಕ್ಕೆ ಆಸ್ತಿಕರು ಘಾಸಿಗೊಂಡಿದ್ದಾರೆ. ಹೀಗಾಗಿ ಕನಿಷ್ಟ ಪಕ್ಷ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಧಾರ್ಮಿಕ ಆಚರಣೆಗೆ ಸರ್ಕಾರ ಅನುಮತಿ ಕೊಡಬಹುದಿತ್ತು. ಆದರೆ ಅದೆಲ್ಲವನ್ನೂ ಬಿಟ್ಟು ರಾಜಕೀಯ ಸಮಾರಂಭಕ್ಕೆ 200 ಜನ ಸೇರಿಸಬಹುದಂತೆ. ಅಂದ್ರೆ ರಾಜಕೀಯ ಸಮಾರಂಭಗಳ ಕಡೆ ಕೊರೋನಾ ವೈರಸ್ ಬರೋದಿಲ್ಲ, ಮದುವೆ, ಜನ್ಮದಿನ ಸೇರಿ ಇನ್ನಿತರ ಸಮಾರಂಭಗಳ ಕಡೆ ಮಾತ್ರ ಈ ಚೈನಾ ವೈರಸ್ ಬರುತ್ತದೆ ಅಂದಾಯ್ತು.
ರಾಜ್ಯದಲ್ಲಿ ಇವತ್ತು ಕೊರೋನಾ ಸೋಂಕು ಈ ಮಟ್ಟಿಗೆ ತಾಂಡವವಾಡುತ್ತಿದೆ ಅಂದ್ರೆ ಅದಕ್ಕೆ ಕಾರಣ ರಾಜಕೀಯ ಸಮಾವೇಶಗಳು. ಕೇರಳಕ್ಕೆ ಪ್ರಚಾರಕ್ಕೆಂದು ಹೋದ ಅದೆಷ್ಟು ಮಂದಿ ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡಿಲ್ಲ. ಉಪಚುನಾವಣೆಯಲ್ಲಿ ಪಾಲ್ಗೊಂಡ ಅದೆಷ್ಟು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿಲ್ಲ. ಒಟ್ಟಿನಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ಹೇರಿ, ರಾಜಕೀಯ ಕಾರ್ಯಕ್ರಮ ಅನುಮತಿ ಕೊಡಬಹುದು ಅನ್ನುವ ಐಡಿಯಾ ಕೊಟ್ಟವರಿಗೊಂದು ಆವಾರ್ಡ್ ಕೊಡಲೇಬೇಕು
Discussion about this post