crossorigin="anonymous"> ಕೊರೋನಾ ಬಗ್ಗೆ ನಿಮಗೆ ನಿರ್ಲಕ್ಷ್ಯವೇ..ಪತ್ರಕರ್ತರೊಬ್ಬರ ಬರಹವನ್ನು ಒಂದ್ಸಲ ಓದಿಕೊಳ್ಳಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೊರೋನಾ ಬಗ್ಗೆ ನಿಮಗೆ ನಿರ್ಲಕ್ಷ್ಯವೇ..ಪತ್ರಕರ್ತರೊಬ್ಬರ ಬರಹವನ್ನು ಒಂದ್ಸಲ ಓದಿಕೊಳ್ಳಿ

Radhakrishna Anegundi by Radhakrishna Anegundi
18-04-21, 11 : 16 am
in ಟಾಪ್ ನ್ಯೂಸ್
malthesh
Share on FacebookShare on TwitterWhatsAppTelegram

ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರಿನ ಪಾಲಿಗೆ ಕೊರೋನಾ ಭಸ್ಮಾಸುರನಾಗವುದರಲ್ಲಿ ಸಂಶಯವೇ ಇಲ್ಲ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ರಣಕೇಕೆ ನೋಡಿದರೆ ಮೈ ನಡುಗುತ್ತಿದೆ.ದುಡ್ಡಿದ್ದರೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಬಂದ್ರೆ ನೇರವಾಗಿ ಯಮಪುರಿಗೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಕ್ಸಿಜನ್ ಇಲ್ಲದೆ ಜನ ಸಾಯುವಂತಾಗಿದೆ. ಆದರೆ ಆರೋಗ್ಯ ಸಚಿವ ಸುಧಾಕರ್ ಮಾತ್ರ ಆಕ್ಸಿಜನ್ ಕೊರೆತೆ ಇಲ್ಲ ಅನ್ನುತ್ತಿದ್ದಾರೆ. ಇದಕ್ಕೊಂದು ನಿದರ್ಶನ ಅನ್ನುವಂತೆ ಪತ್ರಕರ್ತ ಮಾರುತೇಶ್ ತಮ್ಮದೊಂದು ಅನುಭವವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಹಳ ನೋವಿನಿಂದ ಬರೆಯುತ್ತಿದ್ದೇನೆ.. Of course ಬರೆಯಲೇಬೇಕು ಅನಿಸಿತು..

amb

ಇದನ್ನ ಬರೆಯಲು ಶುರುಮಾಡಿದಾಗ ಬೆಳಗಿನ ಜಾವ 2 ಗಂಟೆ 36 ನಿಮಿಷ. ಅದೊಂದು ಘಟನೆ ಹಾರ್ಟ್ ಗೆ ಕೈ ಹಾಕಿ ಹಿಂಡಿದಂತಾಯ್ತು. ಆಗಿದ್ದಿಷ್ಟು… ಬೆಂಗಳೂರಿನ ಇಂದಿರಾನಗರದ ಇಎಸ್ ಐ ಆಸ್ಪತ್ರೆಯ ಗೇಟ್ ಬಳಿ.. ಗಂಟಲಿನ ಕೊಳವೆಗೆ ಪೈಪ್ ಹಾಕಿದ್ದಾರೆ.. ಆಕ್ಸಿಜನ್ ಹರಿಯುತ್ತಾ ಇದೆ.. ಇತ್ತ ಇನ್ನೊಂದು ತಾಸು ಆಕ್ಸಿಜನ್ ಸಿಲಿಂಡರ್ ಖಾಲಿ ಆಗಬಹುದು ಸರ್ ಅಂತಿದ್ದ ಆಂಬ್ಯುಲೆನ್ಸ್ ಡ್ರೈವರ್. ಆಂಬ್ಯುಲೆನ್ಸ್ ಬಳಿಗೆ ಹೋಗಿ ನೋಡಿದರೆ ಕುಯ್ ಕುಯ್ ಸದ್ದಿನ ನಡುವೆ 45 ವರ್ಷದ ಕೊರೋನಾ ಸೋಂಕಿತನ ಏದುಸಿರು ಕಪಾಳಕ್ಕೆ ಹೊಡೆದಂತೆ ಅನುಭವಕ್ಕೆ ಬರ್ತಿತ್ತು. ಇತ್ತ ಸೋಂಕಿತನ ಸಂಬಂಧಿಕರ ಆಕ್ರಂದನ ವ್ಯವಸ್ಥೆಯ ಅವ್ಯವಸ್ಥೆ ತೋರಿಸ್ತಿತ್ತು. ಏನು ಮಾಡುವುದು..?

ಮಾಜಿ ಸಿಎಂಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡುವ ಆರೋಗ್ಯ ಸಚಿವರು ಈ ಸೋಂಕಿತನಿಗೆ ಬೆಡ್ ಕೊಡಿಸ್ತಾರೆ ಅಂದುಕೊಳ್ಳಲೋ..? ಅಥವಾ ಕೋವಿಡ್ ಸಹಾಯವಾಣಿಯವರು ಒಂದು ಗಂಟೆಯಲ್ಲಿ ಹೋಗುವ ಉಸಿರನ್ನ ತಡೆದು ICU ಬೆಡ್ ವ್ಯವಸ್ಥೆ ಮಾಡ್ತಾರೆ ಅಂದುಕೊಳ್ಳಲೋ..? ಒಂದೂ ತಿಳಿಯದಂತಾಯ್ತು. ವರದಿ ಮಾಡಲು ಬಂದವರು ಅಷ್ಟೇ ಮಾಡಬೇಕು ಅಂತೇನಿಲ್ಲವಲ್ಲ ಎಂದುಕೊಂಡು 1912 ಕೊರೋನಾ‌ ಸಹಾಯವಾಣಿಗೆ ಕರೆ ಮಾಡಿದೆ.. ಆದರೆ ಎಲ್ಲೂ ಬೆಡ್ ಇಲ್ಲ ಎಂಬ ಉತ್ತರ ಬಂತು. ಅಯ್ಯೋ ಖಾಸಗಿಯವರು ಸರ್ಕಾರದ ಜೊತೆ ಟೈಅಪ್ ಆಗಿರುವ ಆಸ್ಪತ್ರೆಯಲ್ಲಿ ಕೇಳಿನೋಡಿ ಅಂತ ಗೋಗರೆದೆ.. ಎರಡು ನಿಮಿಷ ಲೈನಲ್ಲಿರಿ ಎಂದವರು ಮತ್ತೆ ಹೇಳಿದ ಉತ್ತರ ಕೇಳಿದ ನನಗೆ ಬೆಂಗಳೂರಿನ ಕೊರೋನಾ‌ ಕರಾಳತೆ ಮತ್ತೊಮ್ಮೆ ಮನದಟ್ಟು ಮಾಡಿತು..

ಸರ್ ಸರ್ಕಾರಿ ಆಸ್ಪತ್ರೆಗಳಲ್ಲೂ ಇಲ್ಲ.. ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಇಲ್ಲ.. ಯಾರಾದ್ರು ಡಿಸ್ಚಾರ್ಜ್ ಆದರೆ ಬೆಡ್ ಸಿಗತ್ತೆ ಅಂದ್ರು. (ಸಾಕ್ಷಿಗೆ ಆಡಿಯೋ ಇದೆ) ಇತ್ತ ಆಕ್ಸಿಜನ್ ಖಾಲಿಯಾಗ್ತಿದೆ, ಇನ್ನೊಂದು ಗಂಟೆಯಲ್ಲಿ ಹೋಗುವ ಜೀವಕ್ಕೆ ಮತ್ತೊಬ್ಬರು ಡಿಸ್ಚಾರ್ಜ್ ಆಗುವ ತನಕ ಕಾಯಲು ಸಾಧ್ಯವಿದೆಯೇ..? ನಮ್ಮ ಕಣ್ಣೆದುರೇ ಜೀವ ಹೋಗಿ ಬಿಡಬಹುದೇನೋ ಅನ್ನೋ ಭಯ ಶುರುವಾಯ್ತು. ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆ ಮಾಡಿ ಬೆಡ್ ಕೇಳಿದರೆ ಎಲ್ಲೂ ICU ಬೆಡ್ ಸಿಗಲಿಲ್ಲ. ಕೊನೆಗೆ ದೇವರ ತರ ನೆನಪಾಗಿದ್ದು ಕೆಸಿ ಜನರಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ. ವೆಂಕಟೇಶಯ್ಯ. ಮಧ್ಯರಾತ್ರಿ ಆದ್ರೂ ಕಾಲ್ ರಿಸೀವ್ ಮಾಡಿ ಮಾತನಾಡಿದರು ನಮ್ಮಲ್ಲೂ ಭರ್ತಿಯಾಗಿದೆ ಅಂದರು.. ಸೋಂಕಿತನ ಕಥೆ ಮುಗೀತು ಅಂತಲೇ ಭಾವಿಸಿದ್ದೆ.. ಮತ್ತೆ ಕರೆ ಮಾಡಿ.. ಸರ್ ಬಹಳ ಕ್ರಿಟಿಕಲ್ ಇದೆ. ನೀವು ಏನಾದರೂ ವ್ಯವಸ್ಥೆ ಮಾಡದೇ ಇದ್ದರೆ ಜೀವ ಹೋಗೋದು ಗ್ಯಾರಂಟಿ ಅಂದೆ. ಬಹುಶಃ ಅವರದ್ದು ಮನುಷ್ಯ ಹೃದಯ ಅನಿಸತ್ತೆ. ಅದಕ್ಕೆ ನನ್ನ ಮಾತು ಹೃದಯಕ್ಕೆ ಬಡಿದಂತಾಗಿದೆ. ಏನೇನೋ ಪ್ರಯತ್ನಗಳನ್ನ ಮಾಡಿ ಕರೆ ಮಾಡಿದ್ರು

ಇಂದಿರಾನಗರದಿಂದ ಆಂಬ್ಯುಲೆನ್ಸ್ ಮೂವ್ ಮಾಡಿಸಿ ವ್ಯವಸ್ಥೆ ಮಾಡಿಸ್ತೇನೆ ಅಂದರು.. ತಕ್ಷಣ ಆಂಬ್ಯುಲೆನ್ಸ್ ಹೊರಟಿತು ಸೋಂಕಿತ ದಾಖಲಾದಾಗ ರಾತ್ರಿ 2.08 ನಿಮಿಷ. ಅವರಿಗೊಂದು ಕೈ ಮುಗಿದು ಮೆಸೇಜ್ ಕಳಿಸಿದೆ‌‌. ಯಾಕಂದ್ರೆ ನಮಗೆ ದೇವರ ತರ ಕಂಡಿದ್ದು ಅವರೊಬ್ಬರೇ. ರೋಗಿಯ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಂಕಿತ ಗುಣಮುಖ ಆಗಲೀ ಅಂತ ಪ್ರಾರ್ಥನೆ ಮಾಡೋಣ.

ಇಷ್ಟೆಲ್ಲಾ ಬರೆದಿದ್ದು ಯಾಕೆ ಗೊತ್ತಾ..? ಬೆಂಗಳೂರಿನ ಸದ್ಯದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗಲೀ ಅಂತ.    ಪರಿಸ್ಥಿತಿ ಏನೂ ಆಗಿಲ್ಲ ಅನ್ನೋ ಭ್ರಮೆಯಲ್ಲಿದ್ದರೆ ಅದರಿಂದ ಹೊರಗೆ ಬನ್ನಿ. ICU, ವೆಂಟಿಲೇಟರ್ ಮಾತ್ರ ಕೇಳಲೇಬೇಡಿ. ದಯಮಾಡಿ ಕೋವಿಡ್ ನಿಯಮ ಪಾಲಿಸಿ. ಮೇಲೆ ಬರೆದಿರುವವರಿಗೆ ಆದ ಪರಿಸ್ಥಿತಿ ಯಾರಿಗೂ ಬಾರದಿರಲಿ..

ಇಂತಿ ನಿಮ್ಮ ಆರೋಗ್ಯದ ವಿಶ್ವಾಸಿ

– ಮಾರುತೇಶ್ ಹುಣಸನಹಳ್ಳಿ..

https://www.facebook.com/marutesh.hallihudga/posts/4069545756471713
Tags: Corona
Share2TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್