crossorigin="anonymous"> ಆಟೋ ಚಾಲಕನೊಬ್ಬ ಡಾಕ್ಟರೇಟ್ ಪದವಿ ಪಡೆದ ಕಥೆ....ಚನ್ನಣ್ಣವರ್ ಸಾಧನೆಯನ್ನು ನೆನಪಿಸುವಂತಿದೆ... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಆಟೋ ಚಾಲಕನೊಬ್ಬ ಡಾಕ್ಟರೇಟ್ ಪದವಿ ಪಡೆದ ಕಥೆ….ಚನ್ನಣ್ಣವರ್ ಸಾಧನೆಯನ್ನು ನೆನಪಿಸುವಂತಿದೆ…

Radhakrishna Anegundi by Radhakrishna Anegundi
20-04-21, 6 : 00 am
in ಟ್ರೆಂಡಿಂಗ್, ದಕ್ಷಿಣ ಕನ್ನಡ
ptr special
Share on FacebookShare on TwitterWhatsAppTelegram

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆಯ ಯುವಕನೊಬ್ಬ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಟೋರಿ, ಸಿಂಗಂ ಖ್ಯಾತಿಯ ರವಿ ಚನ್ನಣ್ಣನವರ್ ಜೀವನ ಸಾಧನೆಯನ್ನು ನೆನಪಿಸುವಂತಿದೆ.

ನಿಯಾಜ್ ಪಣಕಜೆ, ಕಣ್ಣು ತುಂಬಾ ಕನಸುಗಳನ್ನು ತುಂಬಿಕೊಂಡ ಯುವಕ. ಮುಂದಿರುವುದು ಮುಳ್ಳಿನ ಹಾದಿ ಎಂದು ಗೊತ್ತಿದ್ದರೂ ಸಾಧನೆ ಶಿಖರವೇರಲೇಬೇಕು ಎಂದು ಪಣ ತೊಟ್ಟ ಛಲಗಾರ. ತಮ್ಮ ಈ ಹಠ ಸಾಧನೆಯಿಂದಲೇ ನಿಯಾಜ್ ಪಣಕಜೆ ಇದೀಗ ಡಾ.ಪಣಕಜೆಯಾಗಿ ಹೊರ ಹೊಮ್ಮಿದ್ದಾರೆ.

Niyaz Panakaje 6

ನಿಯಾಜ್ ಪಣಕಜೆ ಓದಿನಲ್ಲಿ ಸಿಕ್ಕಾಪಟ್ಟೆ ಮುಂದಿದ್ದ ಹುಡುಗ, ಆದರೆ ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಬಡತನ ಅವರನ್ನು ಓದಿನಿಂದ ಹಿಂದಕ್ಕೆ ಎಳೆಯುತ್ತಿತ್ತು.  ಮನೆಯಲ್ಲಿ ಅನಾರೋಗ್ಯ ಪೀಡಿತ ತಂದೆ, ಬೀಡಿ ಕಟ್ಟಿ ಮನೆ ನಡೆಸುತ್ತಿರುವ ತಾಯಿ ಇವಿಷ್ಟು ಅವರ ಪರಿಸ್ಥಿತಿಯನ್ನು ಕಣ್ಣ ಮುಂದೆ ತಂದುಕೊಳ್ಳಲು ಸಾಕು.

ಮನೆಯ ಸಮಸ್ಯೆಯ ನಡುವೆಯೂ ನಾನು ಓದಬೇಕು,ಸಾಧನೆ ಮಾಡಲೇಬೇಕು ಎಂದು ಪಣಕಜೆ ನಿರ್ಧರಿಸಿದ್ದರು. ಹೀಗಾಗಿ ತನ್ನ ಓದು ಮನೆಗೆ ಭಾರವಾಗಬಾರದು ಎಂದು ಓದಿನ ನಡುವೆಯೇ ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದರು. ಹಳ್ಳಿಯ ಹುಡುಗ ಅದ್ಯಾವ ಕೆಲಸ ಮಾಡಿಲ್ಲ ಕೇಳಿ, ಬಾವಿ ತೋಡುವುದು, ಗೊಬ್ಬರ ಹೊರುವುದು ಹೀಗೆ ಹಳ್ಳಿಯ ಪ್ರತಿಯೊಂದು ಕೂಲಿ ಕೆಲಸವೂ ಇವರಿಗೆ ಗೊತ್ತು.

Niyaz Panakaje

ಅಷ್ಟು ಮಾತ್ರವಲ್ಲದೆ ಕೂಲಿ ಕೆಲಸವಿಲ್ಲದ ಸಂದರ್ಭದಲ್ಲಿ ಸೈಕಲ್ ರಿಪೇರಿ, ಮೀನು ಮಾರಾಟ, ಹಾಲು ಹಾಕೋದು, ಪೇಪರ್ ಮಾರಾಟ ಮಾಡಿಯೂ ಇವರಿಗೆ ಅಭ್ಯಾಸವಿದೆ.

ಹೀಗೆ ದುಡಿದು ಬಂದ ಹಣದಿಂದಲೇ ಓದು ಮುಂದುವರಿಸಿದ ಪಣಕಜೆ, ಉನ್ನತ ವ್ಯಾಸಂಗಕ್ಕೆ ಬರೋ ಹೊತ್ತಿಗೆ ಕೂಲಿ ಕೆಲಸಕ್ಕೆ ಹೋಗೋದು ಕಷ್ಟವಾಯ್ತು. ಹೀಗಾಗಿ  ಆಟೋ ರಿಕ್ಷಾದಲ್ಲಿ ದುಡಿಯಲಾರಂಭಿಸಿದರು. ಕೆಲವು ವೇಳೆ ಲಾಡ್ಜ್ ನಲ್ಲಿ ರಿಸೆಪನ್ಸ್ ಆಗಿಯೂ ಕೆಲಸ ಮಾಡಿದ್ದರು.

ಹೀಗೆ ಎಲ್ಲಾ ಕೆಲಸ ಮಾಡಿ ಉನ್ನತ ವ್ಯಾಸಂಗ ಮುಗಿಸಿದ ನಿಯಾಜ್ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಕಾಮರ್ಸ್ ವಿಭಾಗದಲ್ಲಿ ಸಹಾಯ ಪ್ರಾಧ್ಯಾಪಕನಾಗಿ ಸೇರಿದರು. ಆಗ್ಲೂ ಅವರ ಓದಿನ ದಾಹ ತೀರಿರಲಿಲ್ಲ.

niyaz panakaje

ಹೀಗಾಗಿ ರೋಲ್ ಆಫ್ ಕೋ ಆಪರೇಟಿವ್ ಬ್ಯಾಂಕಿಂಗ್ ಇನ್ ಸೋಷಿಯೋ ಎಕಾನಾಮಿಕ್ ಡೆವಲಪ್ ಮೆಂಟ್ ಆಫ್ ರೂರಲ್ ಮುಸ್ಲಿಂ ಕಮ್ಯೂನಿಟೀಸ್  ಅನ್ನುವ ವಿಷಯನ್ನು ಆಯ್ಕು ಕೊಂಡು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸಿದರು. ಈ ಸಂಶೋಧನೆಯನ್ನು ಪ್ರಬಂಧ ರೂಪದಲ್ಲಿ ಮಂಡಿಸಿ ಇದೀಗ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

Tags: niyaz
Share32TweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಕರಾವಳಿಯಲ್ಲಿ ಮಳೆಯ ಅಬ್ಬರ : ನಾಳೆ ಜುಲೈ 09ಕ್ಕೆ ಶಾಲಾ ಕಾಲೇಜುಗಳಿಗೆ ರಜೆ

ಪುತ್ತೂರಿನಲ್ಲಿ ದೋಸೆ ಮೇಳ : ಮೂರು ದಿನಗಳ ಕಾಲ ನಡೆಯಲಿದೆ ದೋಸೆ ಜಾತ್ರೆ

ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ಇನ್ನಿಲ್ಲ

ಅರುಣ್ ಪುತ್ತಿಲ ವಿರುದ್ಧ ತೊಡೆ ತಟ್ಟಿದ ಸಂಜೀವ ಮಠಂದೂರು

ಪುತ್ತಿಲ ಬಿಜೆಪಿಗೆ ಬಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ…?

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್