crossorigin="anonymous"> ಸಂಕಷ್ಟದಲ್ಲಿದ್ದ ಶೀರೂರು ಮಠ ಸ್ವಾವಲಂಬಿಯಾಗಿದ್ದು ಹೇಗೆ...? ನೂತನ ಯತಿಗಳ ಭಾರ ಇಳಿಸಿದ ಸೋದೆಶ್ರೀಗಳು ಮಾಡಿದ್ದು ಸರಿಯೇ.. - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸಂಕಷ್ಟದಲ್ಲಿದ್ದ ಶೀರೂರು ಮಠ ಸ್ವಾವಲಂಬಿಯಾಗಿದ್ದು ಹೇಗೆ…? ನೂತನ ಯತಿಗಳ ಭಾರ ಇಳಿಸಿದ ಸೋದೆಶ್ರೀಗಳು ಮಾಡಿದ್ದು ಸರಿಯೇ..

Radhakrishna Anegundi by Radhakrishna Anegundi
24-04-21, 12 : 16 pm
in ರಾಜ್ಯ
Saralattaya With Soda Swamyji ts
Share on FacebookShare on TwitterWhatsAppTelegram

ಉಡುಪಿ : ಸದಾ ಸುದ್ದಿಯಲ್ಲಿ ಅಷ್ಟ ಮಠಗಳ ಪೈಕಿ ಒಂದಾದ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸದಾ ಸುದ್ದಿಯಲ್ಲಿದ್ದರು. ಅವರ ಕೆಲಸ ಕಾರ್ಯಗಳು ಸಿಕ್ಕಾಪಟ್ಟೆ ವಿಭಿನ್ನವಾಗಿದ್ದ ಕಾರಣ ಪತ್ರಿಕೆಗಳಲ್ಲಿ ಫೋಟೋ ಬರೋದು ತಪ್ಪುತ್ತಿರಲಿಲ್ಲ. ಆದರೆ ಈ ಪ್ರಚಾರದ ಭರಾಟೆಯ ನಡುವೆ ಮಠದೊಳಗೆ ಏನು ನಡೆಯುತ್ತಿದೆ ಅನ್ನುವುದು ಭಕ್ತರಿಗೆ ತಿಳಿಯಲೇ ಇಲ್ಲ.

ಶ್ರೀ ಲಕ್ಷ್ಮೀವರ ತೀರ್ಥರು ವೃಂದಾವನಸ್ಥರಾದ ಮೇಲೆ ಹುಟ್ಟಿಕೊಂಡ ಕಥೆಗಳು ಒಂದಲ್ಲ ಎರಡಲ್ಲ. ಅದರಲ್ಲಿ ಸುಳ್ಳೆಷ್ಟು ಸತ್ಯವೆಷ್ಟು ಅನ್ನುವುದು ಮೂಲದೇವರಿಗೆ ಮಾತ್ರ ಗೊತ್ತು. ಆದರೆ ಮಠ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು ಅನ್ನುವುದು ಮಾತ್ರ ಸತ್ಯ. ಇಂತಹ ಸಂದರ್ಭದಲ್ಲಿ ಶೀರೂರು ಮಠದ ಆಡಳಿತ ಚುಕ್ಕಾಣಿ ಹಿಡಿದದ್ದು ದ್ವಂದ ಮಠವಾದ ಸೋದೆ.
ಸೋದೆಯ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮಠದ ಚಟುವಟಿಕೆಗಳನ್ನು ಕೈಗೆತ್ತಿಕೊಂಡರೆ ಅದು ಚಕ್ರವ್ಯೂಹವಾಗಿತ್ತು. ಮುಟ್ಟಲು ಹೋದರೆ ಕಚ್ಚಲು ಬರೋ ಪರಿಸ್ಥಿತಿ. ಹಾಗಂತ ಹಾಗೇ ಬಿಡುವಂತಿರಲಿಲ್ಲ. ನಾಳೆ ಭಕ್ತರು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡುವ ಜವಾಬ್ದಾರಿ ವಿಶ್ವವಲ್ಲಭತೀರ್ಥರ ಮೇಲಿತ್ತು.

sode1

ಇದನ್ನೂ ಓದಿ : ಕೃಷ್ಣ ಮಠದಲ್ಲಿದ್ದ ಶೀರೂರಿನ ಪಟ್ಟದೇವರಿಗೆ ಸಿಕ್ತು ಬಿಡುಗಡೆ ಭಾಗ್ಯ

ಹಾಗಿದ್ದರೂ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದ ವಿಶ್ವವಲ್ಲಭತೀರ್ಥರು, ಶೀರೂರು ಮಠವನ್ನು ಸಮಸ್ಯೆ ಮುಕ್ತವಾಗಿಸಲು ಪಣತೊಟ್ಟರು. ಒಂದೊಂದೋ ಯೋಚನೆಗಳಿಗೆ ಯೋಜನೆಯ ರೂಪ ಕೊಟ್ಟರು. ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಕನಕ ಮಹಲ್ ವಿವಾದವನ್ನು ಬಗೆ ಹರಿಸಿದರು. ಕನಕ ಮಹಲ್ ಗೆ ಸಂಬಂಧಿಸಿದ ಉದ್ಯಮಿಯೊಂದಿಗೆ ಮಾತುಕತೆ ನಡೆಸಿ ಕಾರ್ಪೋರೇಷನ್ ಬ್ಯಾಂಕ್ ನ ಸಾಲದ ಹೊರೆಯಿಂದ ಮಠವನ್ನು ಮುಕ್ತರಾಗಿಸಿದರು.

ಇದನ್ನೂ ಓದಿ : ಶೀರೂರು ಶ್ರೀ ಸಾವಿನ ಬೆನ್ನಲ್ಲೇ ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳಿಗೆ ತಲೆ ನೋವು

temple 01

ಶೀರೂರು ಮಠದ ಮುಂದೆ ಹಡಿಲ್ ಬಿದ್ದ ಜಾಗದಲ್ಲಿ ಕೃಷಿ ಚಟುವಟಿಕೆಯನ್ನು ಕೈಗೆತ್ತಿಕೊಂಡರು. ಈ ಮೂಲಕ ಮುಂದೆ ಯತಿಗಳಾಗಿ ಬರುವವರು ಮಾಡಬೇಕಾಗಿರುವುದೇನು ಅನ್ನುವುದಕ್ಕೊಂದು ನೀಲ ನಕ್ಷೆ ಮಾಡಿಕೊಟ್ಟರು. ಜೊತೆಗೆ ಹಿರಿಯಡ್ಕ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿದರು. ಜೊತೆಗೆ ಶೀರೂರು ಮಠದ ನಿರ್ವಹಣೆ ಹಾಗೂ ಧರ್ಮಪ್ರಚಾರದ ಸಲುವಾಗಿ ನಿರಂತರ ಆದಾಯದ ಮೂಲಬೇಕಾಗಿತ್ತು. ಇದಕ್ಕಾಗಿ ಈ ಹಿಂದೆ ಮಠದ ಕೈ ತಪ್ಪಿ ಹೋಗಿದ್ದ ಆದಾಯದ ಮೂಲಗಳಿಗೆ ಜೀವ ತುಂಬಿದರು.

sode2

ಕೇವಲ ಹಣಕಾಸು ಯೋಜನೆಗಳು ಮಾತ್ರವಲ್ಲದೆ, ಶೀರೂರು ಮಠದ ಶಾಖಾ ಮಠವಾಗಿರುವ ಶೀರೂರು ಸಮೀಪವೇ ಇರುವ ಸಾಂತ್ಯಾರು ಮಠ ಪಾಳು ಬಿದ್ದು ಹೋಗಿತ್ತು. ಶ್ರೀಗೋಪಾಲಕೃಷ್ಣ ಮುಖ್ಯ ಪ್ರಾಣ ಹಾಗೂ ಶಕ್ತಿದೇವತೆಗಳ ಸನ್ನಿಧಾನ ಜೀರ್ಣಾವಸ್ಥೆ ತಲುಪಿತ್ತು. ಭಕ್ತರ ಜೊತೆಗೆ ಸತತ ಸಭೆ ನಡೆಸಿದ ಸೋದೆ ಶ್ರೀಗಳು ಮಠವನ್ನು ಜೀರ್ಣೋದ್ಧಾರಗೊಳಿಸಿ ಧಾರ್ಮಿಕ ಆಚರಣೆಗಳನ್ನು ಮತ್ತೆ ಆರಂಭಿಸುವ ಕುರಿತಂತೆ ಮುನ್ನುಡಿ ಬರೆದಿದ್ದಾರೆ.

ಇದನ್ನೂ ಓದಿ : ಕೊನೆಗೂ ಶಿರೂರು ಮಠಕ್ಕೆ ಪೀಠಾಧಿಪತಿ : ಸೋದೆ ಮಠದ ಶ್ರೀಗಳ ತಾಕತ್ತು ಮೆಚ್ಚಲೇಬೇಕು

ಒಟ್ಟಿನಲ್ಲಿ ಶೀರೂರು ಮಠಕ್ಕೆ ನೂತನ ಯತಿಗಳಾಗಿ ಬರುವವರಿಗೆ ಸಾಲದ ಹೊರೆ ಇರಬಾರದು ಅನ್ನುವುದು ಸೋದೆ ಶ್ರೀಗಳ ತೀರ್ಮಾನವಾಗಿತ್ತು. ನೂತನ ಯತಿಗಳಾಗಿ ಬರುವವರು ಮಠದ ಕಾನೂನು ಹೋರಾಟ, ಹಣಕಾಸಿನ ವ್ಯವಹಾರದ ಬಡಿದಾಟಕ್ಕೆ ನಿಂತ್ರೆ ಧರ್ಮ ಪ್ರಚಾರ ಮಾಡೋದು ಯಾವಾಗ, ಧಾರ್ಮಿಕ ಕಾರ್ಯಕ್ರಮ ನಡೆಸೋದು ಯಾವಾಗ, ಹೀಗಾಗಿ ಯತಿಗಳಾಗಿ ಬರುವವರ ಉದ್ದೇಶವೇ ಬೇರೆಯಾಗಿರುವಾಗ, ಊರ ಊಸಾಬರಿ ಇರಬಾರದು ಅನ್ನುವ ಕಾರಣಕ್ಕಾಗಿಯೇ ಇದೀಗ ಶೀರೂರು ಮಠವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಹೆಜ್ಜೆ ಇಡಲಾಗಿದೆ. ಶೀರೂರು ಶ್ರೀಗಳು ಮಾಡಿದ ಒಂದಿಷ್ಟು ಒಳ್ಳೆಯ ಕೆಲಸಗಳ ಜೊತೆಗೆ ಮತ್ತಷ್ಟು ಯೋಜನೆಗಳು ಸೇರಿಸಿ ಶೀರೂರು ಮಠಕ್ಕೊಂದು ಹೊಸ ಲುಕ್ ನೀಡಲಾಗಿದೆ.

santhayaru math1
Tags: ಶೀರೂರುಸೋದೆ
Share58TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್