ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಲಸಿಕೆ ಕುರಿತಂತೆ ಕಳ್ಳಾಟ ನಡೆಯುತ್ತಿದೆಯೇ ಅನ್ನುವ ಅನುಮಾನಗಳು ಶುರುವಾಗಿದೆ. ಸಮ್ ಥಿಂಗ್ ರಾಂಗ್ ಅನ್ನಿಸುವ ಬೆಳವಣಿಗೆಗಳು ನಡೆಯುತ್ತಿದ್ದು, ಜನ ಸಾಮಾನ್ಯರಿಗೆ ಶೀಘ್ರದಲ್ಲೇ ಲಸಿಕೆ ಸಿಗೋ ಸಾಧ್ಯತೆಗಳಿಲ್ಲ. ಪರಿಸ್ಥಿತಿ ನೋಡಿದರೆ ಮೂರನೇ ಅಲೆ ಮಕ್ಕಳಿಗಲ್ಲ, ಗ್ರಾಮೀಣ ಪ್ರದೇಶ ಹಾಗೂ ರಾಜ್ಯದ ಬಡವರಿಗೆ ಅಪಾಯ ಅನ್ನೋದು ಗ್ಯಾರಂಟಿ. ಯಾಕಂದ್ರೆ ಕಾಸಿರುವ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಡವರು ಬಿಡಿ ಕಾಸು ಉಳ್ಳವರಿಗೂ ಲಸಿಕೆ ಸಿಗುತ್ತಿಲ್ಲ.
ಈ ನಡುವೆ ಕೊರೋನಾ ಲಸಿಕೆ ಪಡೆಯುವ ಕುರಿತಂತೆ ಪದೇ ಪದೇ ನಿಯಮಗಳು ಬದಲಾಗುತ್ತಿದೆ. ಇದೀಗ ಕೋವಿಶೀಲ್ಡ್ ಲಸಿಕೆಯನ್ನು ಎರಡನೇ ಡೋಸ್ ಪಡೆಯಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಈ ಹಿಂದೆ ಹೀಗಿರಲಿಲ್ಲ. ಇನ್ನು ಕೊರೋನಾ ಸೋಂಕು ತುತ್ತಾಗಿರುವ ಮಂದಿ 14 ದಿನಗಳ ಬಳಿಕ ಲಸಿಕೆ ಪಡೆಯಬಹುದು ಎನ್ನಲಾಗಿತ್ತು. ಆದರೆ ಈಗ ಒಂದು ವೇಳೆ ಸೋಂಕಿಗೆ ತುತ್ತಾಗಿದ್ರೆ ಮೂರು ತಿಂಗಳ ಬಳಿಕ ಲಸಿಕೆ ಪಡೆಯಿರಿ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ಕೊರೋನಾ ಇಲ್ಲ ಅಂತಾ ಉಡಾಫೆ ಮಾಡಬೇಡಿ… ನಾನು ಉಸಿರಾಡಲು ಪಟ್ಟ ಕಷ್ಟ ನನಗೆ ಗೊತ್ತು – ಶ್ವೇತಾ ಚೆಂಗಪ್ಪ
ಹಾಗಿದ್ದರೂ ನಟಿ ಶ್ವೇತ ಚೆಂಗಪ್ಪ ಲಸಿಕೆ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೆ ಸೋಂಕಿಗೆ ತುತ್ತಾದವರು ತಮ್ಮ ಆರೋಗ್ಯದ ಕುರಿತಂತೆ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಇದನ್ನು ಓದಿ : ಮಜಾ ಟಾಕೀಸ್ ತಂಡಕ್ಕೆ ಕೊರೋನಾ ಆತಂಕ – ಶ್ವೇತಾ ಚೆಂಗಪ್ಪಗೆ ಕೊರೋನಾ ಪಾಸಿಟಿವ್
ಕೊರೋನಾ ಸೋಂಕು ತಗುಲಿದ ಬಳಿಕ 21 ದಿನಗಳ ಕ್ವಾರಂಟೈನಲ್ಲಿದ್ದ ಶ್ವೇತಾ ಚೆಂಗಪ್ಪ ಎಪ್ರಿಲ್ 29 ರಂದು ತಮಗೆ ನೆಗೆಟಿವ್ ರಿಪೋರ್ಟ್ ಬಂದಿರುವ ಬಗ್ಗೆ ಹೇಳಿದ್ದರು. ಎಪ್ರಿಲ್ 30ರಂದು ಇನ್ಸ್ಟಾದಲ್ಲಿ ಲೈವ್ ಬಂದಿದ್ದ ಶ್ವೇತಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.

ಈ ನಡುವೆ ಕೊರೋನಾದಿಂದ ಗುಣಮುಖರಾದವರು ಮೂರು ತಿಂಗಳ ತನಕ ಹಾಕಿಸಿಕೊಳ್ಳುವಂತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹಾಗಿದ್ದ ಮೇಲೆ ಶ್ವೇತಾ ಅವರು ಮೂರು ತಿಂಗಳ ಒಳಗಾಗಿ ಲಸಿಕೆ ಹಾಕಿಸಿಕೊಂಡಿದ್ದು ಹೇಗೆ ಅನ್ನುವ ಪ್ರಶ್ನೆ ಎದ್ದಿದೆ. ಕೋವಿನ್ ನಲ್ಲಿ ಹೆಸರು ರಿಜಿಸ್ಟರ್ ಮಾಡಿಕೊಂಡವರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ ಹಾಕಿದ್ದ ಈ ಸೆಲೆಬ್ರೆಟಿಗಳಿಗೆ ಲಸಿಕೆ ಸಿಗುತ್ತಿರೋದು ಹೇಗೆ ಅನ್ನೋದಕ್ಕೆ ಆರೋಗ್ಯ ಸಚಿವ ಸುಧಾಕರ್ ಅವರೇ ಉತ್ತರಿಸಬೇಕು.
ಅಷ್ಟೇ ಅಲ್ಲ, ಕೊರೋನಾ ಸೋಂಕು ಬಂದವರು ಮೂರು ತಿಂಗಳ ತನಕ ಲಸಿಕೆ ಹಾಕಿಸಿಕೊಳ್ಳೋದು ಬೇಡ ಅಂದಿದ್ದಾರೆ. ಸರ್ಕಾರವೂ ಇದಕ್ಕೆ ಹಸಿರು ಮುದ್ರೆ ಒತ್ತಿದೆ. ಹಾಗಿದ್ದ ಮೇಲೆ ಶ್ವೇತಾ ಅವರು ಮೂರು ತಿಂಗಳ ಮುಂಚೆ ಲಸಿಕೆ ಹಾಕಿಸಿಕೊಳ್ಳಲು ಕಾರಣವೇನು ಅನ್ನುವುದಕ್ಕೂ ಆರೋಗ್ಯ ಸಚಿವರು ಉತ್ತರಿಸಬೇಕು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಾ ಚೆಂಗಪ್ಪ, ನಾನು ವೈದ್ಯರ ಸಲಹೆಯ ಮೇರೆಗೆ ಹಾಕಿಸಿಕೊಂಡಿದ್ದೇನೆ. ನೀವು ನಿಮ್ಮ ವೈದ್ಯರ ಬಳಿ ಕೇಳಿ ಅಂದಿದ್ದಾರೆ.
Discussion about this post