crossorigin="anonymous"> ಅಂಡಾಣು ವೀರ್ಯಾಣು ಕಥೆ ಕಟ್ಟಿ ಮಗು ಕದ್ದ ವೈದ್ಯೆಯನ್ನು ಬಂಧಿಸಿದ ಪೊಲೀಸರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಂಡಾಣು ವೀರ್ಯಾಣು ಕಥೆ ಕಟ್ಟಿ ಮಗು ಕದ್ದ ವೈದ್ಯೆಯನ್ನು ಬಂಧಿಸಿದ ಪೊಲೀಸರು

Radhakrishna Anegundi by Radhakrishna Anegundi
31-05-21, 8 : 08 pm
in ಕ್ರೈಮ್
dr rashmi
Share on FacebookShare on TwitterWhatsAppTelegram

ಬೆಂಗಳೂರು : ಸರ್ಕಾರಿ ಆಸ್ಪತ್ರೆಯಲ್ಲಿ ವರ್ಷಗಳ ಹಿಂದೆ ನಡೆದಿದ್ದ ಮಗು ಕಳ್ಳತನದ ಬೆನ್ನು ಹತ್ತಿದ್ದ ಬಸವನಗುಡಿ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತ ಅಂದ್ರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಮಗು ಕಳ್ಳಿ ವೃತ್ತಿಯಲ್ಲಿ ವೈದ್ಯಯಾಗಿದ್ದಾಳೆ.

2020ರ ಮೇ 29 ರಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗುವೊಂದು ಕಳ್ಳತನವಾಗಿತ್ತು. ಈ ವೇಳೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ ಮಗು ಕದ್ದ ಮಹಿಳೆಯ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣದ ಕಡತ ಮುಚ್ಚಿರಲಿಲ್ಲ.

rashmi skecth

ಇದೀಗ ಪೊಲೀಸರ ಕಾರ್ಯಾಚರಣೆ ಫಲ ನೀಡಿದ್ದು, ಕೃತ್ಯ ನಡೆದ ಒಂದು ವರ್ಷ ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಮನೋ ವೈದ್ಯ ರಶ್ಮಿ ಎಂದು ಗುರುತಿಸಲಾಗಿದೆ.

2014ರಲ್ಲಿ ಹುಬ್ಬಳ್ಳಿಯ ಎಸ್.ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿಗೆ ಕೊಪ್ಪಳ ಮೂಲಕ ದಂಪತಿಯ ಪರಿಚಯವಾಗಿತ್ತು. ಆ ದಂಪತಿಗೆ ವಿಶೇಷ ಚೇತನದ ಮಗುವೊಂದಿತ್ತು. ಮಗುವಿನ ಚಿಕಿತ್ಸೆಗಾಗಿ ರಶ್ಮಿ ಬಳಿ ದಂಪತಿ ಬರುತ್ತಿದ್ದ ಕಾರಣ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಮತ್ತೊಂದು ಮಗುವಿಗಾಗಿ ಪ್ರಯತ್ನಿಸುತ್ತಿದ್ದ ವಿಚಾರ ತಿಳಿದ ರಶ್ಮಿ, ನಿಮ್ಮ ಅಂಡಾಣು ಮತ್ತು ವೀರ್ಯಾಣುವನ್ನು ಅಪರಿಚಿತ ಮಹಿಳೆಯ ಗರ್ಭದಲ್ಲಿ  ಸೇರಿಸುತ್ತೇವೆ. ಬೇರೊಂದು ಮಹಿಳೆಯ ಗರ್ಭದಲ್ಲಿ ನಿಮ್ಮದೇ ಮಗು ಬೆಳೆಯಲಿದೆ ಎಂದು ದೊಡ್ಡ ಮೊತ್ತದ ಕಾಸು ಪೀಕಿಸಿದ್ದಳು.

ಡಾ.ರಶ್ಮಿಯ ಮಾತು ನಂಬಿದ್ದ ದಂಪತಿ, ಅಂಡಾಣು ಮತ್ತು ವೀರ್ಯಾಣು ಜೊತೆಗೆ ಕಾಸು ಕೂಡಾ ಕೊಟ್ಟಿದ್ದರು. 2019ರಲ್ಲಿ ಈ ವ್ಯವಹಾರ ನಡೆದಿತ್ತು. ಆದರೆ ತಾನು ಕಲೆಕ್ಟ್ ಮಾಡಿದ್ದ ಅಂಡಾಣು, ವೀರ್ಯಾಣುವನ್ನು ಬಳಸದ ರಶ್ಮಿ ಸಿಕ್ಕ ಕಾಸಿನಲ್ಲಿ ಮಜಾ ಉಡಾಯಿಸಿದ್ದಳು.

ಕೊನೆಗೆ ಮಗು ಕೊಡಬೇಕಾದ ಪರಿಸ್ಥಿತಿ ಬಂದಾಗ, ಹೊಳೆದಿದ್ದು ಮಗು ಕಳ್ಳತನದ ಐಡಿಯಾ. ಹೀಗಾಗಿ 2020ರ ಮೇ 29 ರಂದು ಚಾಮರಾಜಪೇಯೆ ಹೆರಿಗೆ ಆಸ್ಪತ್ರೆಗೆ ನುಗ್ಗಿ, ಮಗುವನ್ನು ಕದ್ದು ದಂಪತಿಯ ಕೈಗಿಟ್ಟಿದ್ದಳು. ಈ ವೇಳೆ 15 ಲಕ್ಷದ ಡೀಲ್ ನ ಫೈನಲ್  ಸೆಟಲ್ಮೆಂಟ್ ಕೂಡಾ ನಡೆದಿತ್ತು.

ಮಗು ಕಳೆದುಕೊಂಡವರಿಗೆ ಮಗು ಸಿಗುತ್ತಾ…?

2020ರ ಮೇ 29 ರಂದು ಪಾದರಾಯನಪುರ ಮೊದಲ ಕ್ರಾಸ್‌ ನಿವಾಸಿಯಾದ ಹುಸ್ನಾ ಬಾನು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಹುಸ್ನಾ ಪತಿ  ನಮೀದ್ ಪಾಷಾರ ಸಹೋದರ ಅಕ್ಮಲ್‌ ಖಾನ್ ತಮ್ಮ ಪತ್ನಿ ನೀಲೂಫರ್ ಅವರಿಗೆ ಮಾಹಿತಿ ನೀಡಿದರು. ಆಜಾದ್‌ ನಗರ ಟೋಲ್‌ ಗೇಟ್‌ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀಲೂಫರ್‌ ಅವರು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಅದರಂತೆ ಬೆಳಗ್ಗೆ 9 ಗಂಟೆಗೆ ಬಾನು ಅವರಿಗೆ ನಾರ್ಮಲ್ ಹೆರಿಗೆಯಾಗಿತ್ತು.

ಬೇರೆ ವಾರ್ಡ್‌ಗಳು ಭರ್ತಿಯಾಗಿದ್ದ ಕಾರಣ ಬಾನು ಅವರನ್ನು ಖಾಲಿ ವಾರ್ಡ್‌ ಒಂದಕ್ಕೆ ಸ್ಥಳಾಂತರಿಸಲಾಗಿತ್ತು. ಈ ವಾರ್ಡ್‌ನ ಬಾಗಿಲುಗಳು ತೆರೆದಿದ್ದವು. ಬಾನು ಅವರ ಪತಿ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರ ಸಹೋದರ ಅಕ್ಮಲ್ ತನ್ನ ಪತ್ನಿಯನ್ನು ಮನೆಗೆ ಬಿಟ್ಟು ಬರಲು ತೆರಳಿದ್ದರು.

ಬಾನು ಅವರು ನಿದ್ರಿಸುತ್ತಿದ್ದಾಗ ಆಸ್ಪತ್ರೆಗೆ ಪ್ರವೇಶಿಸಿದ ಮಹಿಳೆಯೊಬ್ಬಳು ಮಗುವನ್ನು ಕಳ್ಳತನ ಮಾಡಿ ಹಿಂಬಾಗಿಲಿನಿಂದ ಹೊರ ಹೋಗಿದ್ದಾಳೆ. ಬಾನು ಅವರಿಗೆ ಎಚ್ಚರವಾದಾಗ ಮಗು ಅವರ ಪಕ್ಕದಲ್ಲಿ ಇರಲಿಲ್ಲ.

ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡು ಆಟೋದಲ್ಲಿ ತೆರಳುತ್ತಿರೋದು ಗೊತ್ತಾಗಿತ್ತು. ದುರಂತ ಅಂದ್ರೆ ಅಕ್ಮಲ್ ಅವರ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಡೆಗೆ ಆಟೋ ತೆರಳಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಕ್ಮಲ್ ಹಾಗೂ ಅವರ ಪತ್ನಿಯನ್ನೇ ಮೊದಲು ವಿಚಾರಣೆಗೆ ಒಳಪಡಿಸಿದ್ದರೆ. ಕೊನೆಗೆ ಅವರ ಪಾತ್ರವಿಲ್ಲ ಎಂದು ಗೊತ್ತಾಗಿತ್ತು.

ಇದೀಗ ಮಗು ಸಿಕ್ಕಿರುವ ಕುರಿತಂತೆ ಹುಸ್ನಾ ಬಾನು ಮತ್ತು ನಮೀದ್ ಪಾಷಾ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮಗು ನಮಗೆ ಈಗ್ಲೇ ಕೊಡೋದಿಲ್ಲವಂತೆ, ನಮ್ದೇ ಮಗು ಎಂದು ದೃಢಪಡಬೇಕಂತೆ. ಅದಕ್ಕೆ ಹತ್ತಾರು ಟೆಸ್ಟ್ ಗಳು ನಡೆಯಬೇಕಿದೆ ಎಂದು ಬೇಸರವನ್ನೂ ಹೊರ ಹಾಕಿದ್ದಾರೆ.

Tags: BangaloreCrime
Share1TweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್