ಸೂರ್ಯನ ಪ್ರಖರ ಬೆಳಕಿದೆ ಅಂದ ಮೇಲೆ ಅದ್ಯಾವುದೇ ವಸ್ತು, ಕಟ್ಟಡ, ಆಕೃತಿಯ ನೆರಳು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲದೆ ಆ ಕ್ಷಣಕ್ಕೆ ಅನುಗುಣವಾಗಿ ದಿಕ್ಕನ್ನು ಕೂಡಾ ಬದಲಾಯಿಸುತ್ತಿರುತ್ತದೆ. ಅದರಲ್ಲೂ ಸೂರ್ಯಾಸ್ತದ ಹೊತ್ತಿನಲ್ಲಿ ನೆರಳು ಭೂಮಿಯ ಮೇಲೆ ಬೀಳದಿರಲು ಸಾಧ್ಯವೇ ಇಲ್ಲ.
ಆದರೆ ಭಾರತದಲ್ಲಿರುವ ದೇವಸ್ಥಾನವೊಂದರ ನೆರಳು ಗೋಧೋಳಿ ಸಮಯದಲ್ಲಿ ಭೂಸ್ಪರ್ಶ ಮಾಡುವುದೇ ಇಲ್ಲ. ಅದು ಒಂದು ದಿನ ಎರಡು ದಿನವಲ್ಲ. ವರ್ಷ ಪೂರ್ತಿ ನೆರಳು ಭೂಮಿಗೆ ಬೀಳುವುದೇ ಇಲ್ಲ. ಅಚ್ಚರಿ ಅಂದ್ರೆ ನೆರಳು ರಹಸ್ಯವನ್ನು ಬೇಧಿಸಲು ಶಾಸ್ತ್ರಜ್ಞರು, ಪರಿಶೋಧಕರು, ಪುರಾತತ್ವ ಇಲಾಖೆಯವರು ಬಂದಿದ್ದಾರೆ. ಬಂದವರೆಲ್ಲಾ ಬರೀಗೈಯಲ್ಲೇ ಹಿಂತಿರುಗಿದ್ದಾರೆ.

ಅಂದ ಹಾಗೇ ಈ ದೇವಸ್ಥಾನ ಇರುವುದು ತಮಿಳುನಾಡಿನ ತಂಜಾವೂರಿನಲ್ಲಿ. 11ನೇ ಶತಮಾನದಲ್ಲಿ ನಿರ್ಮಿಸಲಾದ ತಂಜಾವೂರಿನ ಬೃಹದೀಶ್ವರ ದೇವಾಲಯ ಚೋಳ ವಾಸ್ತುಶಿಲ್ಪ ಕಲೆಗೊಂದು ನಿದರ್ಶನವಾಗಿದ್ದು. ಕಲೆ ವಾಸ್ತುಶಿಲ್ಪ ಮತ್ತು ಇತಿಹಾಸ ಬಗ್ಗೆ ಆಸಕ್ತಿ ಇರುವವರು ಭೇಟಿ ಕೊಡಲೇಬೇಕಾದ ದೇವಸ್ಥಾನ ಇದಾಗಿದೆ.
ಕ್ರಿ.ಶ 11 ನೇ ಶತಮಾನದಲ್ಲಿ ಒಂದನೇ ರಾಜ ರಾಜ ಚೋಳ ಈ ದೇವಾಲಯ ನಿರ್ಮಿಸಿದ ಎನ್ನಲಾಗಿದೆ. ಒಂದನೇ ರಾಜ ರಾಜ ಚೋಳ ಸುತ್ತಮುತ್ತ ಪ್ರದೇಶಗಳ ಮೇಲೆ ದಂಡೆತ್ತಿ ಹೋದ ಸಂದರ್ಭದಲ್ಲಿ ತನ್ನ ಅಧೀನಕ್ಕೆ ಬಂದ ಈ ಪ್ರದೇಶದಲ್ಲಿ ಬೃಹದೀಶ್ವರ ದೇವಾಲಯ ನಿರ್ಮಿಸಿದನಂತೆ.
ಈ ದೇವಾಲಯ ನಿರ್ಮಾಣದ ಬಳಿಕ ರಾಜ ರಾಜ ಚೋಳನಿಗೆ ಸೋಲು ಅನ್ನುವುದೇ ಇಲ್ಲದಂತಾಯಿತಂತೆ. ಮಾತ್ರವಲ್ಲದೆ ಅವನ ರಾಜ್ಯ ಅಭಿವೃದ್ಧಿಯನ್ನು ಕೂಡಾ ಹೊಂದಿತು. ಇವೆಲ್ಲಾ ಶಿವನ ದಯೆ ಎಂದು ನಂಬಿದ ರಾ ಈ ದೇವಾಲಯಕ್ಕೆ ಮತ್ತಷ್ಟು ಮೆರುಗು ತುಂಬಿದ ಎನ್ನಲಾಗಿದೆ.
ಈ ದೇವಾಲಯ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದು, ಹಲವು ಪ್ರಥಮಗಳು ಇದೇ ದೇವಾಲಯದ ಹೆಸರಿನಲ್ಲಿದೆ.
Discussion about this post