ಬೆಂಗಳೂರು : ಬೆಂಗಳೂರಿನಲ್ಲಿ ಅನ್ ಲಾಕ್ 2.O ಜಾರಿಯಾದ ಬೆನ್ನಲ್ಲೇ ಬಿಎಂಟಿಸಿ ಬಸ್ ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿಸಲಾಗಿದೆ. ಜೊತೆಗೆ KSRTC ಬಸ್ ಗಳು ಕೂಡಾ ಸೋಮವಾರದಿಂದ ರಸ್ತೆಗಿಳಿಯಲಿದೆ.
ಇನ್ನೇನು ಬಸ್ ಪ್ರಾರಂಭವಾಯ್ತಲ್ಲ, ಒಂದಿಷ್ಟು ನೆಮ್ಮದಿ ಅಂದುಕೊಳ್ಳುವಷ್ಟು ಹೊತ್ತಿಗೆ ಕೋಡಿಹಳ್ಳಿ ಚಂದ್ರಶೇಖರ್ ಬಾಂಬ್ ಸಿಡಿಸಿದ್ದಾರೆ.
ಮತ್ತೆ ಸಾರಿಗೆ ಸ್ಟ್ರೈಕ್ ನಡೆಸುವುದಾಗಿ ಹೇಳಿರುವ ಅವರು, ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಜುಲೈ 1 ಕೊನೆಯ ದಿನ ಎಂದು ಡೆಡ್ ಲೈನ್ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಸಾರಿಗೆ ಬಂದ್ ಕುರಿತಂತೆ ಹೇಳಿಕೆ ಕೊಟ್ಟಿದ್ದು, ಸರ್ಕಾರ ಸ್ಪಂದಿಸದಿದ್ರೆ ಜುಲೈ 1 ರಿಂದ ಮುಷ್ಕರ ಗ್ಯಾರಂಟಿ ಅಂದಿದ್ದಾರೆ.
ಕಳೆದ ಸಲ ಏಪ್ರಿಲ್ 7 ರಿಂದ 22ರವರೆಗೆ 15 ದಿನ ಸಾರಿಗೆ ಬಂದ್ ನಡೆದಿತ್ತು, ಹೈಕೋರ್ಟ್ ಮಧ್ಯಪ್ರವೇಶದಿಂದ ಬಂದ್ ಹಿಂದಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ ಆರನೇ ವೇತನ ಆಯೋಗ ಜಾರಿಗೆ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.
Discussion about this post