ನವದೆಹಲಿ : ಕೊರೋನಾ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ ರಾಜಕಾರಣವನ್ನು ದೇಶ ಮರೆಯಲು ಸಾಧ್ಯವಿಲ್ಲ. ಲಸಿಕೆ ಸಂಶೋಧನೆಯದಿಂದ ಹಿಡಿದು ಇಂದಿನವರೆಗೆ ಕಾಂಗ್ರೆಸ್ ನಾಯಕರು ಲಸಿಕೆ ಕುರಿತಂತೆ ನೀಡಿದ ಹೇಳಿಕೆಗಳನ್ನು ನೋಡಿದರೆ ನಿಲುವುಗಳೇನು ಅನ್ನುವುದು ಅರ್ಥವಾಗುತ್ತದೆ. ಮೊನ್ನೆ ಮೊನ್ನೆ ಕಾಂಗ್ರೆಸ್ ನಾಯಕನೊಬ್ಬ ಲಸಿಕೆಯಲ್ಲಿ ಕರುವಿನ ಸೀರಂ ಇದೆ ಅನ್ನುವ ಮೂಲಕ ಜನರ ಹಾದಿ ತಪ್ಪಿಸಿದ್ದ.
ಆ ಮಟ್ಟಿಗೆ ಕರ್ನಾಟಕ ಡಿಕೆಶಿಯವರನ್ನು ಮೆಚ್ಚಬೇಕು, ಜನತೆಗೆ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಕೆಲ ನಾಯಕರು ಲಸಿಕೆ ವಿಚಾರದಲ್ಲಿ ಮಾಡಿದ ಪಾಪ ತೊಳೆಯುವ ಕೆಲಸವನ್ನು ಡಿಕೆಶಿ ಮಾಡುತ್ತಿದ್ದಾರೆ. ಲಸಿಕೆ ತೆಗೆದುಕೊಳ್ಳುವಂತೆ ಜನರ ಮನವೊಲಿಸುವ ಕೆಲಸವನ್ನು ಕೆಪಿಸಿಸಿ ಮಾಡುವುದನ್ನು ನೋಡಿದರೆ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು.
ಆದರೆ ಕಾಂಗ್ರೆಸ್ ಅಧಿನಾಯಕಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲಿ ಲಸಿಕೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಕಾಂಗ್ರೆಸ್ ತೀರಾ ಹಿಂದುಳಿದಿದೆ. ಇದೇ ಕಾರಣದಿಂದ ಲಸಿಕೆ ನೀಡಿಕೆಯಲ್ಲಿ ಸೋನಿಯಾಗಾಂಧಿ ಪ್ರತಿನಿಧಿಸುವ ತೀರಾ ಹಿಂದುಳಿದಿದೆ.
ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ ಈ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ಚರ್ಚೆ ಹುಟ್ಟು ಹಾಕಿದೆ. ವಿಚಿತ್ರ ಅಂದ್ರೆ ಈ ಕ್ಷೇತ್ರದಲ್ಲಿ ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು
ಕೊರೊನಾ ಲಸಿಕೆ ಪಡೆದ ಬಳಿಕ ಜ್ವರ ಬಂದರೆ ಅಂತವರು ಉಳಿದವರಿಗೆ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಸಲಹೆ ಕೊಡುತ್ತಿದ್ದಾರೆ. ಇದರೊಂದಿಗೆ ಅಖಿಲೇಶ್ ನೀಡಿದ ಹೇಳಿಕೆ ಕೂಡಾ ಲಸಿಕೆ ಪಡೆಯಲು ಜನ ಹಿಂದೇಟು ಹಾಕುವಂತೆ ಮಾಡಿದ ಅನ್ನುವುದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವೀರೇಂದ್ರ ಸಿಂಗ್ ಅನ್ನುವವರ ಮಾತು.
ನಮ್ಮ ಗ್ರಾಮದಲ್ಲಿ ಯಾದವ್, ಮುಸ್ಲಿಂ ಸಮುದಾಯದ ಜನರು ಕೊರೊನಾ ಲಸಿಕೆ ಪಡೆಯಲ್ಲ ಅನ್ನುತ್ತಿದ್ದಾರೆ. ಅಖಿಲೇಶ್ ಯಾದವ್, ಬಿಜೆಪಿ ಲಸಿಕೆಯನ್ನು ಪಡೆಯಲ್ಲ ಅಂದ ಬಳಿಕ ಹೀಗಾಗಿದೆ ಅನ್ನುವುದು ವೀರೇಂದ್ರ ಸಿಂಗ್ ಮಾತು.
ಈ ರಾಯ್ ಬರೇಲಿ ಒಟ್ಟು 39 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಆದರೆ ಈವರೆಗೆ ಇದುವರೆಗೂ 2,21,084 ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಈ ಪೈಕಿ 1,88,060 ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅಂದರೆ ಜಿಲ್ಲೆಯ ಜನಸಂಖ್ಯೆಯ ಪೈಕಿ ಶೇ 4.6ರಷ್ಟು ಜನರು ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
ಅಧಿನಾಯಕಿ ಕ್ಷೇತ್ರದಲ್ಲಿ ಹೀಗೆ ನಿರ್ಲಕ್ಷ್ಯ ಸರಿಯೇ ಅಂದ್ರೆ, ಲಸಿಕೆ ಖರೀದಿಸಿ, ರಾಜ್ಯಗಳಿಗೆ ಹಂಚುವುದು ಕೇಂದ್ರ ಸರ್ಕಾರದ ಕೆಲಸ, ಲಸಿಕೆಯನ್ನು ಜನರಿಗೆ ನೀಡುವುದು ರಾಜ್ಯ ಸರ್ಕಾರದ ಕೆಲಸ. ಅಲ್ಲಿ ಸಂಸದರ ಪಾತ್ರವಿಲ್ಲ ಜನರಲ್ಲಿ ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆಗಳಿದ್ದರೆ, ರಾಜ್ಯ ಸರ್ಕಾರ ಅವುಗಳನ್ನು ನಿವಾರಣೆ ಮಾಡಬೇಕು. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ರಾಜ್ಯ ಸರ್ಕಾರ ಜಾಗೃತಿ ಮೂಡಿಸಬೇಕು ಅನ್ನುತ್ತಾರೆ ಕಾಂಗ್ರೆಸ್ ನಾಯಕರು.
ಲಸಿಕಾ ವಿತರಣೆ ಯಶಸ್ವಿಯಾಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶ್ರಮ ಖಂಡಿತಾ ಸಾಲುವುದಿಲ್ಲ. ಪ್ರತಿಪಕ್ಷಗಳ ಸಹಕಾರವೂ ಬೇಕು. ಅಂದ ಮೇಲೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸೋನಿಯಾ ಗಾಂಧಿ ಬಹಿರಂಗವಾಗಿ ಹೇಳುವುದರಲ್ಲಿ ತಪ್ಪೇನಿದೆ. ಜೊತೆಗೆ ರಾಯ್ ಬರೇಲಿ ಕ್ಷೇತ್ರದಲ್ಲಿ ಲಸಿಕೆ ಕುರಿತಂತೆ ಹರಡಿರುವ ತಪ್ಪು ಸಂದೇಶಗಳ ಕುರಿತಂತೆ ಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಬಹುದಲ್ವ.
ಒಟ್ಟಿನಲ್ಲಿ ಅಖಿಲೇಶ್ ಯಾದವ್ ನೀಡಿದ ಹೇಳಿಕೆಯೊಂದು ಕಾಂಗ್ರೆಸ್ ಅಧಿನಾಯಕಿ ಕ್ಷೇತ್ರದಲ್ಲಿ ತುಂಬಾ ಕೆಟ್ಟ ಪರಿಣಾಮವನ್ನೇ ಬೀರಿದೆ.
Discussion about this post