ಬೆಂಗಳೂರು : ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಪತಿರಾಯನೊಬ್ಬ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಹುಳಿಮಾವು ಸಮೀಪದ ಅರಕೆರೆ BTD Lay out ನಲ್ಲಿ ನಡೆದಿದೆ.
ಮೃತರನ್ನು ಆಶಾ ಎಂದು ಗುರುತಿಸಲಾಗಿದೆ. ಅಕ್ರಮ ಸಂಬಂಧದ ಕಾರಣಕ್ಕೆ ಆಶಾ ಹಾಗೂ ಪತಿ ಮಣಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಹೀಗೆ ನಿನ್ನೆ ರಾತ್ರಿಯೂ ಇಬ್ಬರ ನಡುವೆ ಕಿತ್ತಾಟ ನಡೆದಿದೆ. ಈ ವೇಳೆ ವಿಪರೀತವಾಗಿ ಕುಡಿದಿದ್ದ ಮಣಿ ಪತ್ನಿಯನ್ನು ಹಿಗ್ಗಾಮುಗ್ಗಾ ಬೈಯ್ದಿದ್ದಾನೆ.
ರಾತ್ರಿ ಇಬ್ಬರ ಕಿತ್ತಾಟ ಶಾಂತವಾಗಿದೆ. ಆದರೆ ಅದು ಬೂದಿ ಮುಚ್ಚಿದ ಕೆಂಡದಂತಿತ್ತು. ಹೀಗಾಗಿ ಜಗಳದ ಸಿಟ್ಟಿನಿಂದ ಮಲಗಿದ್ದ ಆಶಾಳನ್ನು ಬೆಳಗಿನ ಜಾವ ಕೊಲೆ ಮಾಡಿದ ಮಣಿ ಪರಾರಿಯಾಗಿದ್ದಾನೆ. ಬೆಳಕು ಹರಿದರೂ ಆಶಾ ಮನೆಯಿಂದ ಹೊರ ಬಾರದಿರುವುದನ್ನು ಗಮನಿಸಿದ ಅಕ್ಕ ಪಕ್ಕದ ಮನೆಯವರು ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಇದೀಗ ಹುಳಿಮಾವು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Discussion about this post