ಬೆಂಗಳೂರು : ರೋಹಿಣಿ ಸಿಂಧೂರಿ, ಕರ್ನಾಟಕ ಕಂಡ ಬೆಸ್ಟ್ ಆಫೀಸರ್ ಅನ್ನುವ ಹೆಸರು ಪಡೆದಿದ್ದರು. ಹಾಸನದಲ್ಲಿದ್ದ ಸಂದರ್ಭದಲ್ಲಿ ರೇವಣ್ಣ ಅವರಿಗೆ ಸೆಡ್ಡು ಹೊಡೆಯುವ ಮೂಲಕ ಐಎಎಸ್ ಅಧಿಕಾರಿಯ ತಾಕತ್ತು ತೋರಿದ್ದರು. ಇನ್ನು ಮೈಸೂರಿಗೆ ಬಂದ ಮೇಲೆ ಸಾರಾ ಮಹೇಶ್ ರಂತವರ ವಿರುದ್ಧ ಮಾತನಾಡುವ ಮೂಲಕ ಭೇಷ್ ಅನ್ನಿಸಿಕೊಂಡಿದ್ದರು.
ಆದರೆ ಚಾಮರಾಜನಗರ ಆಕ್ಸಿಜನ್ ದುರಂತ ಹಾಗೂ ಜಿಲ್ಲಾಧಿಕಾರಿ ನಿವಾಸದ ಈಜುಕೊಳ ವಿವಾದದ ಮೂಲಕ ರೋಹಿಣಿ ಸಿಂಧೂರಿಯವರ ಮತ್ತೊಂದು ಮುಖದ ಪರಿಚಯವಾಗಿತ್ತು. ಅಷ್ಟು ದಿನಗಳ ಸಿಂಧೂರಿ ಹೆಸರನ್ನು ಎತ್ತಿ ಕೊಂಡಾಡಿದ್ದವರು ಛೇ…. ಅಂದಿದ್ದರು.
ಇದೀಗ ರೋಹಿಣಿ ಸಿಂಧೂರಿ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಕೂಡಾ ಕೆಂಡ ಕಾರಿದ್ದಾರೆ. ವಿವಾದವನ್ನು ಮೈ ಎಳೆದುಕೊಂಡಿರುವ ವಿಚಾರ ಕುರಿತಂತೆ ಪ್ರಸ್ತಾಪಿಸಿರುವ ಅವರು ಇದು ನಿಮ್ಮ ನೈತಿಕ ಪತನ ಅಂದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರೂಪಾ, ಕೋರೋನ ಹಾಗು ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ.ಕಟ್ಟುವುದ ಮುಂದೂಡಲೂಬಹುದಿತ್ತು ಅಂದಿದ್ದಾರೆ.
ಇನ್ನು ರೂಪಾ ಮಾಡಿರುವ ಟ್ವೀಟ್ 59 ರೀಟ್ವಿಟ್ ಗಳನ್ನು ಖಂಡಿತಾ. ಜೊತೆಗೆ ಅನೇಕರು ರೂಪಾ ಅವರ ನಿಲುವನ್ನು ವಿರೋಧಿಸಿದ್ದು ಒಬ್ಬ ಅಧಿಕಾರಿಯಾಗಿ ಹೀಗೆ ಹೇಳಬಾರದಿತ್ತು, ಇದು ರಾಜಕಾರಣಿಯ ಹೇಳಿಕೆಯಂತಿದೆ ಅಂದಿದ್ದಾರೆ. ಮತ್ತೆ ಕೆಲವರು ರೂಪಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
Discussion about this post