ZEE Kannada ವಾಹಿನಿಯಲ್ಲಿ ಪ್ರಸಾರಗವಾಗುತ್ತಿದ್ದ Sa Re Ga Ma Pa ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಹಂಸಲೇಖ ಹಾಗೂ ರಾಜೇಶ್ ಕೃಷ್ಣನ್ ಹೊರ ಬಂದಿದ್ದಾರೆ.
ಹಂಸಲೇಖ ಅವರು ಈ ವೇದಿಕೆಯಲ್ಲಿ ಮಹಾಗುರುಗಳು ಅನ್ನುವ ಹೊಗಳಿಕೆಗೆ ಪಾತ್ರವಾಗಿದ್ರೆ, ರಾಜೇಶ್ ಕೃಷ್ಣನ್ ಕೂಡಾ ಹಿರಿಯ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಉತ್ತುಂಗುದಲ್ಲಿದ್ದ ಕಾರ್ಯಕ್ರಮದಿಂದ ಅದ್ಯಾಕೆ ಅವರಿಬ್ಬರು ಹೊರ ಬಂದರು ಅನ್ನುವುದು ಇನ್ನೂ ನಿಗೂಢ.

ಈ ನಡುವೆ ಝೀ ಕನ್ನಡದಿಂದ ಹೊರಬಂದಿರುವ ಇವರಿಬ್ಬರೂ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವುದು ಗೊತ್ತಾಗಿದೆ. ಈ ಹಿಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟಿದ್ದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಮತ್ತೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಈ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಗಾಯಕ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿರುತ್ತಾರೆ.

ಎದೆ ತುಂಬಿ ಹಾಡುವೆನು ಅನ್ನುವ ಕಾರ್ಯಕ್ರಮ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿತ್ತು. ಈ ವೇದಿಕೆಗೆ ಮಕ್ಕಳಿಗೆ ಪ್ರವೇಶ ಸಿಕ್ತು ಅದೊಂದು ಪುಣ್ಯ ಎಂದೇ ಭಾವಿಸಲಾಗಿತ್ತು. ಈ ವೇದಿಕೆಯ ಮೂಲಕ ಬೆಳಕಿಗೆ ಬಂದ ಅದೆಷ್ಟೋ ಪ್ರತಿಭೆಗಳು ಸಂಗೀತ ಲೋಕದಲ್ಲಿ ಸದ್ದು ಮಾಡುತ್ತಿದಾರೆ.
Discussion about this post