ಬೆಂಗಳೂರು : ಬಸವರಾಜ್ ಬೊಮ್ಮಾಯಿ ಕೊರೋನಾ ನಿಯಂತ್ರಣ ವಿಚಾರದಲ್ಲಿ ಗಟ್ಟಿ ನಿರ್ಧಾರವೊಂದನ್ನು ಕೈ ಕೊಂಡಿದ್ದಾರೆ. ಕೊರೋನಾ ನಿಯಂತ್ರಣ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಫ್ರೀ ಹ್ಯಾಂಡ್ ನೀಡಲಾಗಿತ್ತು. ಆದರೆ ಕೆಲವು ಜಿಲ್ಲಾಧಿಕಾರಿಗಳು ಮಾತ್ರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಉಳಿದವರು ರಾಜ್ಯ ಸರ್ಕಾರದ ಕಡೆಗೆ ಮುಖ ಮಾಡಿ ಕೂತಿದ್ದರು.
ಈ ವೇಳೆ ತಜ್ಞರು ಕೊಟ್ಟ ಸಲಹೆ ಆತಂಕವನ್ನು ತಂದಿಟ್ಟಿತ್ತು. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲಿನ ರಾಜ್ಯ ಸರಕಾರಗಳು ಕೂಡಾ ಕೈ ಚೆಲ್ಲಿ ಕೂರುವಂತೆ ಕಾಣಿಸುತ್ತಿದೆ. ಹೀಗಾಗಿ ಪಾಸಿಟಿವಿಟಿ ರೇಟ್ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಿ. ತಡವಾದ್ರೆ 2ನೇ ಅಲೆಗಿಂತ ಭೀಕರವಾಗಿರುತ್ತದೆ ಮೂರನೇ ಅಲೆ ಎಂದು ಎಚ್ಚರಿಕೆ ಕೊಟ್ಟರು. ಏಕಾಏಕಿ ಲಾಕ್ ಡೌನ್ ಹೇರಿ ಜನರನ್ನು ಸಂಕಷ್ಟಕ್ಕೆ ತಳ್ಳುವ ಬದಲು ಈಗ್ಲೇ ವಿಕೇಂಡ್ ಲಾಕ್ ಡೌನ್, ನೈಟ್ ಕರ್ಫ್ಯೂ ಅನ್ನು ಬಿಗಿಗೊಳಿಸೋಣ ಇದರಿಂದ ಜನಜೀವನಕ್ಕೆ ತೊಂದರೆಯಾಗುವುದಿಲ್ಲ ಅಂದು.
ತಜ್ಞರ ಶಿಫಾರಸು ಗಂಭೀರವಾಗಿ ತೆಗೆದುಕೊಂಡ ಮುಖ್ಯಮಂತ್ರಿಗಳು ಹಿಂದೆ ಮುಂದೆ ನೋಡದೆ ಪಾಸಿಟಿವಿಟಿ ರೇಟ್ ಜಾಸ್ತಿ ಇರುವ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಗೆ ಆದೇಶಿಸಿದ್ದಾರೆ. ಈ ಹಿಂದಿನ ಸರ್ಕಾರವಾಗಿರುತ್ತಿದೆ ಅಳೆದು ತೂಗುವುದರಲ್ಲೇ ಒಂದು ವಾರ ಕಳೆದು ಹೋಗಿರುತ್ತಿತ್ತು.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರು ಲಕ್ಷಣ ಗೋಚರಿಸುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಈಗ್ಲೇ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ ಅಪಾಯ ಗ್ಯಾರಂಟಿ. ಕೊರೋನಾ ಹೆಚ್ಚಿರುವ ಗ್ರಾಮಗಳ ಲಾಕ್, ಕೊರೋನಾ ಹೆಚ್ಚಿರುವ ಗ್ರಾಮಗಳಲ್ಲಿ ಸಾಮೂಹಿಕ ಕೊರೋನಾ ಪರೀಕ್ಷೆ ಹೀಗೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಪಾಸಿಟಿವಿಟಿ ರೇಟ್ ಶೇ 7.23ಕ್ಕೆ ತಲುಪಿದೆ. ಬೆಳ್ತಂಗಡಿಯಲ್ಲಿ ಶೇ 5.91ರಷ್ಟಿದ್ರೆ, ಮಂಗಳೂರು ತಾಲೂಕಿನಲ್ಲಿ ಶೇ 5.63 ಪಾಸಿಟಿವಿಟಿ ರೇಟ್ ಇದೆ.
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ವ್ಯಾಪಾರ, ಆರೋಗ್ಯ ಕ್ಷೇತ್ರದ ವಿಚಾರದಲ್ಲಿ ಕೇರಳದೊಂದಿಗೆ ಸತತ ಸಂಪರ್ಕದಲ್ಲಿರುತ್ತದೆ. ಇದೇ ಕಾರಣದಿಂದ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಅನ್ನುವುದು ತಜ್ಞರ ಮಾತು. ಇನ್ನು ಬುದ್ದಿವಂತರ ಜಿಲ್ಲೆಯ ಜನ ಮಾಸ್ಕ್ ಸಾಮಾಜಿಕ ಅಂತರವನ್ನು ಮರೆತು ಬಿಟ್ಟಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ಮಾಡ್ತಾರೆ ಅನ್ನುವ ಕಾರಣದಿಂದ ನಿಲ್ದಾಣಕ್ಕಿಂತ ಮೊದಲೇ ಇಳಿದು ಮನೆ ಸೇರುವವರ ಸಂಖ್ಯೆಯೂ ಕಡಿಮೆ ಇಲ್ಲ.
ಹೀಗಾಗಿ ಜಿಲ್ಲಾಡಳಿತ ಅದೇನೂ ಸರ್ಕಸ್ ಮಾಡಿದ್ರು ಕೊರೋನಾ ನಿಯಂತ್ರಣ ಸುಲಭವಿಲ್ಲ. ಹೀಗಾಗಿ ಬುದ್ದಿವಂತರ ಜಿಲ್ಲೆಯ ಜನ ಸರ್ಕಾರ ಆದೇಶಗಳನ್ನು ಪಾಲಿಸುವುದು ಉತ್ತಮ.
Discussion about this post