ಬೆಂಗಳೂರು : ಮೈಸೂರು ಅರಮನೆಯ ಒಳಗಡೆ ಮತ್ತು ಹೊರಗಡೆ 2016ರಲ್ಲಿ ನಡೆದ ಫೋಟೋ ಶೂಟ್ ಪ್ರಕರಣ ಕುರಿತ ಕೇಸ್ ಕೈ ಬಿಡಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಫೋಟೋಗ್ರಫಿ ನಿಷೇಧಿತ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರ ಪುತ್ರನಿಗೆ ಫೋಟೋ ಶೂಟ್ ಮಾಡಲು ಅವಕಾಶ ಕೊಟ್ಟ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.
2016ರಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೇರಿದಂತೆ ಹಲವು ಕಡೆ ಐಎಎಸ್ ಅಧಿಕಾರಿ ಪುತ್ರ ಹಾಗೂ ಸೊಸೆಯ ವೆಡ್ಡಿಂಗ್ ಶೂಟ್ ನಡೆದು ದೊಡ್ಡ ವಿವಾದವೆದ್ದಿತ್ತು. ಆಗ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಆಗ ಐಎಎಸ್ ಅಧಿಕಾರಿಯಾಗಿದ್ದ ನಂದಕುಮಾರ್ ಪುತ್ರ ಬಿ ಎನ್ ಆದಿತ್ಯ ಎಂದು ಗೊತ್ತಾಗಿತ್ತು. ಇದಕ್ಕೆ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರು ಅನುಮತಿಯನ್ನೂ ಕೊಟ್ಟಿದ್ದರು.

ಇದಾದ ಬಳಿಕ ಉಪಲೋಕಾಯುಕ್ತರು ಉಪ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇದೀಗ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣವನ್ನೇ ಕೈ ಬಿಡಲು ನಿರ್ಧರಿಸಿದೆ. ಒಬ್ಬ ಜನ ಸಾಮಾನ್ಯ ಗೊತ್ತಿಲ್ಲದೆ ಹೀಗೆ ಫೋಟೋ ತೆಗೆಸಿಕೊಂಡಿದ್ರೆ ಇಷ್ಟು ಹೊತ್ತಿಗೆ ಏನಾಗಿರುತ್ತಿತ್ತು.
Discussion about this post