crossorigin="anonymous"> ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ?

ಈ ವೇಳೆ ತಪಸ್ಸಿನಿಂದ ಎಚ್ಚರಗೊಂಡ ಗಣಪತಿ, ತುಳಸಿ ಶಾಪದಿಂದ ಸಿಟ್ಟಾಗಿ ಪ್ರತಿ ಶಾಪವಾಗಿ ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ

Radhakrishna Anegundi by Radhakrishna Anegundi
10-09-21, 9 : 20 am
in ದೇವನುಡಿ
ganesh tulasi
Share on FacebookShare on TwitterWhatsAppTelegram

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಇನ್ನಿಲ್ಲದ ಮಹತ್ವವಿದೆ. ಆಸ್ತಿಕರ ಮನೆ ಮುಂದೆ ತುಳಸಿ ಕಟ್ಟೆಯೊಂದು ಕಡ್ಡಾಯವಾಗಿ ಇರಲೇಬೇಕು. ಇನ್ನು ಆರ್ಯುವೇದದಲ್ಲೂ ತುಳಸಿಗೆ ಸಾಕಷ್ಟು ಮಹತ್ವವಿದೆ. ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಪುಟ್ಟ ಗಿಡಕ್ಕಿದೆ. ಇನ್ನು ವಿಷ್ಣು, ಕೃಷ್ಣ ಹೀಗೆ ವಿವಿಧ ದೇವರ ಅರ್ಚನೆ ಸಂದರ್ಭದಲ್ಲೂ ತುಳಸಿ ಬೇಕೇ ಬೇಕು

ಆದರೆ ಇದೇ ತುಳಸಿ ಗಣಪತಿಗೆ ನಿಷೇಧ. ಅದ್ಯಾವ ಕಾರಣಕ್ಕೂ ಗಣೇಶನಿಗೆ ತುಳಸಿ ಅರ್ಪಿಸುವಂತಿಲ್ಲ. ಬದಲಾಗಿ ಈತನಿಗೆ ಗರಿಯನ್ನು ಅರ್ಪಿಸಲಾಗುತ್ತದೆ. ಹಾಗಾದ್ರೆ ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣವೇನು? ಈ ಬಗ್ಗೆ ಪುರಾಣಗಳಲ್ಲಿ ಹಲವು ಕಥೆಗಳಿದೆ.

ಅದೊಂದು ದಿನ ಗಣಪತಿ ನದಿ ದಂಡೆಯೊಂದರಲ್ಲಿ ತಪಸ್ಸನ್ನು ಆಚರಿಸುತ್ತಿದ್ದ, ಈ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ತುಳಸಿ ಅನ್ನುವ ಹೆಸರಿನ ಹುಡುಗಿ ಗಣಪತಿಯನ್ನು ನೋಡಿ ಮೋಹಿತಳಾಗುತ್ತಾಳೆ. ಅವನನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಗಾಯನ, ನೃತ್ಯ ಹೀಗೆ ತಪಸ್ಸು ಭಂಗ ಮಾಡಲು ಹೇಗೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಾಳೆ ಆದರೆ ಗಣಪತಿ ಒಂದಿಷ್ಟು ವಿಚಲಿತನಾಗುವುದಿಲ್ಲ.

ಈ ವೇಳೆ ಮನ್ಮಥನ ಸಹಾಯ ಕೇಳಿದ ತುಳಸಿ, ಗಣಪತಿಯ ತಪಸ್ಸು ಭಂಗ ಮಾಡುವಂತೆ ಮನವಿ ಮಾಡುತ್ತಾಳೆ. ಅದೇ ಪ್ರಕಾರ ಮನ್ಮಥನು ಗಣಪತಿಯ ತಪಸ್ಸು ಕೆಡಿಸಲು ಪಂಚ ಬಾಣಗಳನ್ನು ಅವನ ಮೇಲೆ ಪ್ರಯೋಗಿಸುತ್ತಾನೆ. ಆ ಪ್ರಯತ್ನವೂ ವಿಫಲವಾಗುತ್ತದೆ. ಇದರಿಂದ ಸಿಟ್ಟಾದ ತುಳಸಿಯು ಗಣಪತಿಯನ್ನು ಶಪಿಸುತ್ತಾಳೆ. ನಿನ್ನ ಸುಂದರ ರೂಪವೇ ನಿನ್ನ ಅಹಂಕಾರಕ್ಕೆ ಕಾರಣ, ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತ ಪರಶುರಾಮನೊಡನೆ ನಡೆಯುವ ಯುದ್ಧದಲ್ಲಿ ಮುರಿಯಲಿ ಅನ್ನುತ್ತಾಳೆ. ಮತ್ತೊಂದು ಕಥೆಯ ಪ್ರಕಾರ ತುಳಸಿ ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಶಪಿಸಿದಳು ಅಂದಿದೆ.

ಈ ವೇಳೆ ತಪಸ್ಸಿನಿಂದ ಎಚ್ಚರಗೊಂಡ ಗಣಪತಿ, ತುಳಸಿ ಶಾಪದಿಂದ ಸಿಟ್ಟಾಗಿ ಪ್ರತಿ ಶಾಪವಾಗಿ ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ ಎಂದು ಕಥೆ ಹೇಳಿದರೆ ಮತ್ತೊಂದು ಕಥೆಯಲ್ಲಿ ಗಿಡವಾಗಿ ಹುಟ್ಟು ಎಂದು ಶಪಿಸಿದ ಅಂದಿದೆ. ಇದಾದ ಬಳಿಕ ತುಳಸಿಯು ಗಣಪತಿಯಲ್ಲಿ ಕ್ಷಮೆ ಕೇಳುತ್ತಾಳೆ, ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ಗಿಡವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಹಾಗಂತ ನಾನು ಎಂದೆಂದಿಗೂ ನಿನ್ನ ಸ್ವೀಕರಿಸುವುದಿಲ್ಲ ಅನ್ನುತ್ತಾನಂತೆ. ಹೀಗಾಗಿ ಗಣಪತಿಗೆ ತುಳಸಿ ನಿಷಿದ್ದ ಅನ್ನಲಾಗಿದೆ.

ಇನ್ನು ರಾಕ್ಷಸನನ್ನು ಮದುವೆಯಾಗುವಂತೆ ಶಪಿಸಿದ ಕಾರಣ ಮುಂದೆ ತುಳಸಿ ಶಂಖಚೂಢ ಅನ್ನುವ ರಾಕ್ಷಸನನ್ನು ಮದುವೆಯಾಗುತ್ತಾಳೆ, ಈ ಶಂಖಚೂಢ ಡಂಬ ಅನ್ನುವ ರಾಕ್ಷಸನ ಪುತ್ರನಾಗಿದ್ದು, ವಿಷ್ಣುವಿನ ವರದಿಂದ ಜನಿಸಿದವನಾಗಿರುತ್ತಾನೆ. ಮುಂದೆ ಶಂಖಚೂಢನನ್ನು ವಧಿಸಲು ವಿಷ್ಣುವೇ ಬರುತ್ತಾನೆ ಎಂದು ಕಥೆ ಸಾಗುತ್ತದೆ.

Tulsi is the daughter of Dharmaraja (God of righteousness) in her youthful days was a great devotee of Narayana (Lord Vishnu). Once she was walking along the banks of ganges, she came across beautiful Ganesha sitting in deep meditation to Lord Krishna

Tags: FEATUREDGanesh Chaturthi:ganesh festivalಗಣೇಶ ಚತುರ್ಥಿ
ShareTweetSendShare

Discussion about this post

Related News

Tulsi Vivah

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

raghavendra swamy aradhana mantralayam

Raghavendra Swamy Aradhana : ರಾಯರ 351ನೇ ಆರಾಧನಾ ಮಹೋತ್ಸವ : ಮಂತ್ರಾಲಯದಲ್ಲಿ ಸಂಭ್ರಮ

nagara-panchami-most-amazing-snake-naga-temples-of-india-story

Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 27 july 2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 26 july 2022

Daily horoscope  : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022

Rashi bhavishya : ದಿನ ಭವಿಷ್ಯ : ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ

weekly horoscope in kannada : ಈ ವಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು

ಆಷಾಢ ಅಮಾವಾಸ್ಯೆ 2022  : ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯ ಮಹತ್ವ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್