crossorigin="anonymous"> Crime news Aparna Singh : ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Crime news Aparna Singh : ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು

Radhakrishna Anegundi by Radhakrishna Anegundi
08-07-22, 11 : 38 pm
in ಕ್ರೈಮ್
Crime news jamshedpur-kanhaiya-singh-murder-aparna-gave-diamond-ring-to-boyfriend-to-kill-her-father-four-arrested-murder-case-two-at-large
Share on FacebookShare on TwitterWhatsAppTelegram

ಮಗಳು ಸಂಭ್ರಮಿಸಲಿ ಎಂದು ತಂದೆ ವಜ್ರದ ಉಂಗುರ ಕೊಡಿಸಿದ್ದರು. ಆದರೆ ಮಗಳು ಅದೇ ಉಂಗುರ ಬಳಸಿ ತಂದೆಯ ಉಸಿರು ನಿಲ್ಲಿಸಿದ್ದಾಳೆ  ( Crime news Aparna Singh )

ಜಾರ್ಖಂಡ್ :  ಮಗಳೇ ನನ್ನ ಕೊಲೆ ಮಾಡುತ್ತಾಳೆ ಅದ್ಯಾವ ತಂದೆ ಊಹಿಸಲು ಸಾಧ್ಯ. ಸಾಕಿ ಬೆಳೆಸಿದ ತಂದೆಯನ್ನೇ ಕೊಲೆ ಮಾಡುವ ಮಗಳಿದ್ದಾಳೆ ಅಂದ್ರೆ ಅಧರ್ಮ ತಾಂಡವವಾಡುತ್ತಿದೆ ಅನ್ನುವುದಕ್ಕೆ ಬೇರೆ ಉದಾಹರಣೆ ಬೇಕಾ ( Crime news Aparna Singh )

ಜೂನ್ 29 ರಂದು ಜಾರ್ಖಂಡ್ ನ ಸೆಕರೈಲ ಕಸ್ವರ್ನ್ ಜಿಲ್ಲೆಯ ಉದ್ಯಮಿ ಕನ್ಹಯ್ಯ ಸಿಂಗ್ ( Kanhaiya Singh) ಅನ್ನುವವರನ್ನು ಅಪರಿಚಿತರು ಗುಂಡು ಹೊಡೆದು ಸಾಯಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಕೊಲೆಗಾರರನ್ನು ಹಿಡಿಯೋದು ಸುಲಭವಿರಲಿಲ್ಲ. ಉದ್ಯಮಿ ಕನ್ಹಯ್ಯ ಸಿಂಗ್ ಅವರಿಗೆ ಶತ್ರುಗಳು ಇರಲಿಲ್ಲ, ಜೊತೆಗೆ ಯಾವುದೇ ವ್ಯವಹಾರ ವ್ಯಾಜ್ಯಗಳಿರಲಿಲ್ಲ. ಹೀಗಾಗಿ ಕೊಲೆಯಾಕಾಯ್ತು ಅನ್ನುವ ಸುಳಿವೇ ಇರಲಿಲ್ಲ.

ಇದನ್ನೂ ಓದಿ : amazon job : ಅಮೆಜಾನ್ ನಲ್ಲಿ ಉದ್ಯೋಗವಕಾಶ : ತಿಂಗಳಿಗೆ 26 ಸಾವಿರ ರೂ ಸಂಬಳ : ಮಂಗಳೂರಿನವರಿಗೆ ಅವಕಾಶ

ಇದೇ ಕಾರಣದಿಂದ ಪ್ರಕರಣದ ತನಿಖೆ ಸಲುವಾಗಿ ಹರ್ವಿಂದರ್ ಸಿಂಗ್ ನೇತೃತ್ವದಲ್ಲಿ (  Harvinder Singh ) special investigation team (SIT) ರಚಿಸಲಾಯ್ತು. ಟೆಕ್ನಿಕಲ್ ಸಾಕ್ಷಿಗಳ ಆಧಾರದಲ್ಲಿ ಎಸ್ಐಟಿ ತನಿಖೆ ಪ್ರಾರಂಭಿಸಿದಾಗ ಉದ್ಯಮಿ ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ ( Aparna Singh ) ಮೇಲೆಯೇ ಅನುಮಾನ ಬಂದಿದೆ. ಹೀಗಾಗಿ ಅಪರ್ಣಾ ಸಿಂಗ್ ಮೇಲೆ ತನಿಖೆಯನ್ನು ಕೇಂದ್ರಿಕರಿಸಿದಾಗ ಮರ್ಡರ್ ಮಿಸ್ಟರಿ ಬಿಚ್ಚಿಕೊಳ್ಳತೊಡಗಿತು. ಇದಕ್ಕಾಗಿ ಕನ್ಹಯ್ಯ ಸಿಂಗ್ ಮನೆ ಸುತ್ತಮುತ್ತಲಿನ ಅದೆಷ್ಟು ಸಿಸಿಟಿವಿಗಳನ್ನು ಪೊಲೀಸರು ಜಾಲಾಡಿದ್ದಾರೋ ಗೊತ್ತಿಲ್ಲ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೆರೈಕೆಲಾ ಖಾರ್ಸಾವನ್ ಜಿಲ್ಲಾ ಎಸ್ಪಿ ಆನಂದ ಪ್ರಕಾಶ್ ( Superintendent of Police, Seraikela-Kharsawan Anand Prakash ) ಅಪರ್ಣಾ ಸಿಂಗ್ ಕಳೆದ 5 ವರ್ಷಗಳಿಂದ ರಾಜ್ ವೀರ್ ಸಿಂಗ್ ಅನ್ನುವವನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಸಂಬಂಧ ಕನ್ಹಯ್ಯ ಸಿಂಗ್ ಗೆ ಇಷ್ಟವಿರಲಿಲ್ಲ. ಹೀಗಾಗಿ ರಾಜ್ ವೀರ್ ಸಿಂಗ್ ಮನೆ ಬಳಿ ಹೋಗಿದ್ದ ಕನ್ಹಯ್ಯ ಸಿಂಗ್, ಮಗಳ ಹಿಂದೆ ಬೀಳದಂತೆ ಎಚ್ಚರಿಕೆ ನೀಡಿದ್ದ. ಮಾತ್ರವಲ್ಲದೆ ಪಿಸ್ತೂಲ್ ತೋರಿಸಿ ಮನೆಯವರನ್ನೂ ಬೆದರಿಸಿದ್ದ.

ಇದನ್ನೂ ಓದಿ : Mangalore Accident :  ಓಮ್ನಿ ಮೇಲೆ ಉರುಳಿ ಬಿದ್ದ ಲಾರಿ : ಕಾರಿನೊಳಗೆ ಅಪ್ಪಚ್ಚಿಯಾದ ವ್ಯಕ್ತಿ

ಕನ್ಹಯ್ಯ ಸಿಂಗ್ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ ವೀರ್ ಸಿಂಗ್ ಕುಟುಂಬ ತಮ್ಮ ವಾಸ ಸ್ಥಳವನ್ನೂ ಬದಲಾಯಿಸಿದ್ದರು. ತಮ್ಮ ಸ್ವಂತ ಆಸ್ತಿಯನ್ನು ಮಾರಿ ಬಾಡಿಗೆ ಮನೆ ಸೇರಿಕೊಂಡಿದ್ದರು. ಈ ನಡುವೆ ಮಗಳಿಗೆ ಬೇರೆ ಮದುವೆ ಮಾಡಿಸಲು ಕನ್ಹಯ್ಯ ಸಿಂಗ್ ಸಿದ್ದತೆ ಮಾಡಿಕೊಳ್ಳತೊಡಗಿದೆ.

murder1

ಹೀಗೆ ಬಿಟ್ಟರೆ ಪ್ರೀತಿ ಕುತ್ತು ಎಂದು ಅರಿತ ಅಪರ್ಣಾ ಸಿಂಗ್ ಮತ್ತು ರಾಜ್ ವೀರ್ ಸಿಂಗ್ ಕನ್ಹಯ್ಯ ಸಿಂಗ್ ನನ್ನೇ ಮುಗಿಸಲು ನಿರ್ಧರಿಸಿದರು. ಈ ಸಲುವಾಗಿ ರಾಜ್ ವೀರ್ ಸಿಂಗ್ ಶೂಟರ್ ನಿಖಿಲ್ ಗುಪ್ತ ಅನ್ನುವವನನ್ನು ಸಂಪರ್ಕಿಸಿದ. 8500 ರೂಪಾಯಿ ಕೊಟ್ಟು ಬಿಹಾರದಿಂದ ಕಂಟ್ರಿ ಮೇಡ್ ಪಿಸ್ತೂಲ್ ಬೇರೆ ತರಿಸಿಕೊಂಡ್ರು.

ಅಂದ ಹಾಗೇ ಈ ಎಲ್ಲಾ ಪ್ಲಾನ್ ಗಳು ನಡೆದದ್ದು ಮೂರು ವರ್ಷಗಳ ಹಿಂದೆ, ಆದರೆ ಜಾರಿಯಾಗಿದ್ದು ಜೂನ್ 29 ರಂದು. ಮೂರು ವರ್ಷಗಳಲ್ಲಿ ಹಲವು ಸಲ ಕನ್ಹಯ್ಯ ಸಿಂಗ್ ನನ್ನು ಮುಗಿಸಲು ಯತ್ನಿಸಲಾಗಿತ್ತು. ಆದರೆ ಅದೃಷ್ಟ ಗಟ್ಟಿ ಇದ್ದ ಕಾರಣ ಬದುಕಿಕೊಂಡಿದ್ದ. ಇದೀಗ ಪೊಲೀಸರು ಅಪರ್ಣಾ ಸಿಂಗ್, ರಾಜ್ ವೀರ್ ಸಿಂಗ್ ಶೂಟರ್ ನಿಖಿಲ್ ಗುಪ್ತ ಹಾಗೂ ಈತನ ಸಹಚರರಾದ ರವಿ ಸರ್ದಾರ್ ಹಾಗೂ ಚೋಟು ದಿಗ್ಗಿ ಅನ್ನುವವರನ್ನು ಬಂಧಿಸಿದ್ದಾರೆ.

ಇನ್ನು ಕೊಲೆ ಸಲುವಾಗಿ ಶೂಟರ್ ನಿಖಿಲ್ ಗುಪ್ತ 4 ಸಾವಿರ ರೂಪಾಯಿ ನಗದು ಹಾಗೂ ಒಂದು ವಜ್ರದ ಉಂಗುರವನ್ನು ಸುಪಾರಿಯಾಗಿ ಪಡೆದುಕೊಂಡಿದ್ದ. ಈ ವಜ್ರದ ಉಂಗುರವನ್ನು ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ ಗೆ ಗಿಫ್ಟ್ ಆಗಿ ಕೊಟ್ಟಿದ್ದನಂತೆ.    

Tags: FEATURED
ShareTweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್