crossorigin="anonymous"> ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಅಪಚಾರ : ನೆಲಕ್ಕೆ ಬಿದ್ದ ಉತ್ಸವ ಮೂರ್ತಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಅಪಚಾರ : ನೆಲಕ್ಕೆ ಬಿದ್ದ ಉತ್ಸವ ಮೂರ್ತಿ

Radhakrishna Anegundi by Radhakrishna Anegundi
08-03-19, 12 : 01 pm
in ಟಾಪ್ ನ್ಯೂಸ್
ptr temple image public tv
Share on FacebookShare on TwitterWhatsAppTelegram

ಕರಾವಳಿ ಅಂದರೆ ಮಂಗಳೂರು ದೈವ ದೇವರುಗಳ ಸತ್ಯದ ನೆಲ ಎಂದೇ ಪ್ರಸಿದ್ಧ. ಇಲ್ಲಿ ದೈವ ದೇವರ ಕಾರ್ಯಕ್ಕೆ ಒಂದಿಷ್ಟು ತೊಡಕಾದರೂ, ಕುಂದು ಉಂಟಾದರೂ ಊರಿಗೆ ಅಪಾಯ ಕಾದಿದೆ ಎಂದೇ ಅರ್ಥ.

ಅದರಲ್ಲೂ ದೈವದ ಜಾತ್ರೆ ಸಂದರ್ಭದಲ್ಲಿ ಯಾವುದಾದರೂ ನೆಗೆಟಿವ್ ಅಂಶಗಳು ಕಾಣಿಸಿಕೊಂಡರೆ ಸೇರಿದ್ದ ಭಕ್ತರು ಅಯ್ಯೋ ದೇವರೇ ಎಂದು ಅನ್ನುತ್ತಾರೆ.

ಹಾಗೇ ದೇವಸ್ಥಾನಗಳನ್ನು ಕೂಡಾ. ಅದರಲ್ಲೂ ದೇವರ ಬಲಿ ನಡೆಯುವ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿ ಹೊತ್ತವರ ಶಿರದಿಂದ ಉತ್ಸವ ಮೂರ್ತಿ ಕೆಳಗೆ ಬಿದ್ದರೆ ಅಪಾಯ ಅನ್ನುವ ನಂಬಿಕೆ ಪರಶುರಾಮನ ನಾಡಿನಲ್ಲಿದೆ.

ಈ ಹಿಂದೆ ಕರಾವಳಿಯ ಅನೇಕ ದೇವಸ್ಥಾನಗಳಲ್ಲೂ ಇಂತಹ ಘಟನೆಗಳು ನಡೆದಿದ್ದು, ಪ್ರಾಯಶ್ಚಿತ್ತ ಮತ್ತು ಬ್ರಹ್ಮಕಲಶದ ಬಳಿಕ ಮತ್ತೆ ನಿತ್ಯದ ಪ್ರಕ್ರಿಯೆಗಳನ್ನು ನಡೆಸಲಾಗಿದೆ.

ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿ ಶಿವರಾತ್ರಿಯಂದು ಅಪಚಾರ ನಡೆದಿದೆ.

ಶಿವರಾತ್ರಿ ಉತ್ಸವ ಪ್ರಯುಕ್ತ ರಾತ್ರಿ ಬಲಿ ಉತ್ಸವ ನಡೆಯುತ್ತಿದ್ದಾಗ ದೇವರ ಮೂರ್ತಿ, ದೇವರ ಉತ್ಸವ ಮೂರ್ತಿ, ಅರ್ಚಕರ ಶಿರದಿಂದ ನೆಲಕ್ಕೆ ಬಿದ್ದಿದೆ.

ಶಿವರಾತ್ರಿಯಂದೇ ಶಿವನ ಪವರ್ ಫುಲ್ ಕ್ಷೇತ್ರದಲ್ಲಿ ಇಂತಹುದೊಂದು ಘಟನೆ ನಡೆದಿರುವುದು ಭಕ್ತ ಗಣದಲ್ಲಿ ಆತಂಕ ಮೂಡಿಸಿದೆ.

ಕೆಲ ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ ನಡೆದಿತ್ತು. ಆಗ ಹಾಕಲಾಗಿದ್ದ ಹೊಸ ಧ್ವಜ ಸ್ತಂಭ ( ಕೊಡಿ ಮರ ) ಕೆಲ ತಿಂಗಳುಗಳನ್ನು ದುರಸ್ಥಿಗೆ ಬಂದಿತ್ತು. ಬಳಿಕ ಮತ್ತೆ ಹೊಸ ಧ್ವಜ ಸ್ತಂಭ ಹಾಕಲು ನಿರ್ಧರಿಸಲಾಗಿತ್ತು.ಧ್ವಜ ಸ್ತಂಭ ಇಲ್ಲದೆ ದೇವರ ಬಲಿ ಉತ್ಸವ ನಡೆಸುವುದು ಸೂಕ್ತವಲ್ಲ ಅನ್ನುವುದು ಕೆಲವು ಧಾರ್ಮಿಕ ವಿದ್ವಾಂಸರ ನಂಬಿಕೆ. ಹೀಗಿದ್ದರೂ ಶಿವರಾತ್ರಿಯಂದು ಎಂಬಲಿ ಉತ್ಸವ ನಡೆಸಲಾಗಿದೆ. ಹೀಗಾಗಿ ದೇವರು ತನಗೆ ಇಷ್ಟವಿಲ್ಲದ ಕಾರ್ಯ ನಡೆಸಲಾಗಿದೆ ಅನ್ನುವುದು ಪ್ರಕಟಿಸಿದ್ದಾನೆ ಎನ್ನಲಾಗಿದೆ.

ptr temple image public tv1
image courtesy : public tv

ಇನ್ನು ಕೆಳಗೆ ಬಿದ್ದ ದೇವರ ಮೂರ್ತಿಯನ್ನು ಶುದ್ಧಿಕಲಶ ಮಾಡಿಸದೆ ಹಾಗೇ ಗರ್ಭಗುಡಿಯಲ್ಲಿ ಇಡಲಾಗಿದೆ ಅನ್ನು ಸುದ್ದಿಯಿದೆ. ಒಂದು ವೇಳೆ ಹಾಗೇ ಮಾಡಿದ್ದರೆ ಅದು ದೇವರೂ ಕ್ಷಮಿಸದ ಅಪರಾಧವಾಗಬಹುದಂತೆ.

ದೇವಸ್ಥಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಶಿವನಿಗೆ ಇಷ್ಟವಿರಲಿಲ್ಲ ಅನ್ನುವ ಮಾತುಗಳು ಈ ನಡುವೆ  ಕೇಳಿಬಂದಿದೆ.

ದೇವಸ್ಥಾನಕ್ಕೆ ಬರೋ ಭಕ್ತರಿಗಿಂತ ವ್ಯವಸ್ಥಾಪನಾ ಸಮಿತಿಯ ಆಟವೇ ಇಲ್ಲಿ ನಡೆಯುತ್ತಿದೆ. ಅದರಲ್ಲೂ ಗಣ್ಯ ವ್ಯಕ್ತಿಗಳು ಬಂದರೆ ಸಾಮಾನ್ಯ ಭಕ್ತನನ್ನು ಇಲ್ಲಿ ಕೇಳುವವರೇ ಇರುವುದಿಲ್ಲವಂತೆ. ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿಯ ಕೆಲವರು ಸೇರಿಕೊಂಡು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಂಡ ಆರೋಪಗಳು ಕೂಡಾ ಇದೆ.

ಒಟ್ಟಿನಲ್ಲಿ ಪುತ್ತೂರಿನ ಮುತ್ತು ಮುನಿದಿರುವುದು ಸತ್ಯ. ಹತ್ತೂರು ಒಡೆಯನ ನೆಲದಲ್ಲಿ ಸಾಮಾನ್ಯ ಭಕ್ತನಿಗಾದ ನೋವು ಶಿವನಿಗೆ ತಟ್ಟಿದಂತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಿವನನ್ನು ಶಾಂತಗೊಳಿಸುವ ಕೆಲಸವಾಗಲಿ ಅನ್ನುವುದು ಆಸ್ತಿಕರ ಒತ್ತಾಯ.  

ಇನ್ನು ಈ ವಿಷಯವನ್ನು ಪ್ರಚಾರ ಮಾಡದಂತೆ ಯಾರಿಗೂ ಹೇಳದಂತೆ ಒತ್ತಡ ಹೇರಿರುವುದು ಹಲವು ಅನುಮಾಕ್ಕೆ ಕಾರಣವಾಗಿದೆ. ಜೊತೆಗೆ ಮೊಬೈಲ್ ಗಳಲ್ಲಿ ಸೆರೆಯಾದ ದೃಶ್ಯಗಳನ್ನು ಡಿಲೀಟ್ ಮಾಡಿಸಿರುವ ಹಿಂದಿರುವ ಉದ್ದೇಶವೇನು ಅನ್ನುವುದನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳೇ ಹೇಳಬೇಕು.

ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್