51 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳ ವಿತರಣೆ
ಬೆಂಗಳೂರು ಸೇರಿದಂತೆ ದೇಶದ ೪೦ ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್ಗಾರ್ ಮೇಳ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ೫೧ ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಯುವಜನರಿಗೆ ವಿತರಿಸಲಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಮತ್ತು ಇಲಾಖೆಗಳಲ್ಲಿ ನೇಮಕಾತಿ ಮಾಡಲಾಗಿದ್ದು, ಇದು ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಪ್ರಧಾನಿ ಅವರ ಬದ್ಧತೆಯ ಭಾಗವಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಯುವಜನರನ್ನು ಭಾಗಿಯಾಗಿಸುವ ಹಾಗೂ ಅವರಿಗೆ ಅವಕಾಶಗಳನ್ನು ಮುಕ್ತಗೊಳಿಸುವ ಉಪಕ್ರಮ ಇದಾಗಿದೆ.
ನೂತನವಾಗಿ ನೇಮಕಗೊಂಡವರಿಗೆ ’ಕರ್ಮಯೋಗಿ ಪ್ರಾರಂಭ’ ಯೋಜನೆಯಡಿ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಕರ್ಮಯೋಗಿ ಪೋರ್ಟಲ್ನಲ್ಲಿ ೧ ಸಾವಿರದ ೪೦೦ಕ್ಕೂ ಹೆಚ್ಚು ಇ-ಕಲಿಕೆ ಕೋರ್ಸ್ಗಳ ಲಭ್ಯವಿದ್ದು, ಪ್ರಶಿಕ್ಷಣಾರ್ಥಿಗಳು ಅಗತ್ಯ ಕೌಶಲ್ಯಗಳನ್ನು ಕಲಿಯಬಹುದಾಗಿದೆ.