ತಮಿಳುನಾಡಿನ 67 ಜನರ ತಂಡ ಕೇರಳ ಎಕ್ಸ್ಪ್ರೆಸ್ ರೈಲಿನಲ್ಲಿ ಆಗ್ರಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿತ್ತು. ರೈಲು ಗ್ವಾಲಿಯರ್ ಸಮೀಪ ಸಾಗುತ್ತಿದ್ದಾಗ ಈ ಗುಂಪಿನಲ್ಲಿದ್ದ ಐವರು ಹಿರಿಯ ನಾಗರಿಕರು ಅಸ್ವಸ್ಥರಾದರು.
ತಕ್ಷಣ ಝಾನ್ಸಿ ರೈಲು ನಿಲ್ದಾಣಕ್ಕೆ ವಿಷಯ ತಿಳಿಸಿದ ಟಿಟಿ, ವೈದ್ಯಕೀಯ ನೆರವಿಗಾಗಿ ಕೋರಿದ್ದರು. ರೈಲು ಝಾನ್ಸಿ ನಿಲ್ದಾಣ ತಲುಪುತ್ತಿದ್ದಂತೆ ವೈದ್ಯರು ಅಸ್ವಸ್ಥರಾಗಿದ್ದ ಹಿರಿಯ ನಾಗರಿಕರನ್ನು ಪರೀಕ್ಷಿಸಿದ್ದಾರೆ. ಆವೇಳೆಗಾಗಲೇ ಮೂವರು ಮೃತಪಟ್ಟಿದ್ದರು. ಅಸ್ವಸ್ಥರಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಪುಸ್ತಕ ಖರೀದಿಗಾಗಿ ಈ ಇಮೇಜ್ ಕ್ಲಿಕ್ ಮಾಡಿ
ಮೃತ ಪಟ್ಟವರನ್ನು ಬುಂಡೂರ್ ಪಳನಿಸ್ವಾಮಿ (80), ಬಾಲಕೃಷ್ಣ ರಾಮಸ್ವಾಮಿ (69), ಚಿನ್ನಾರೆ (71) ಮತ್ತು ದಿವಾ ನಾಯ್ (71) ಮೃತರು. ಮತ್ತೊಬ್ಬ ಪ್ರಯಾಣಿಕ ಸುಬ್ಬರಿಯಾ (71) ಅಸ್ವಸ್ಥರಾಗಿದ್ದು ಅವರನ್ನು ಝಾನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪ್ರಕಾರ ಬಿಸಿಗಾಳಿಯಿಂದ ಇವರು ಮೃತಪಟ್ಟಿರುವುದು ಖಚಿತಪಟ್ಟಿದೆ ಎಂದು ಭಾರತೀಯ ರೈಲ್ವೆಯ ವಕ್ತಾರ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಪುಸ್ತಕ ಖರೀದಿಗಾಗಿ ಈ ಇಮೇಜ್ ಕ್ಲಿಕ್ ಮಾಡಿ
ಸೋಮವಾರ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 48.9 ಡಿಗ್ರಿ ಸೆಲ್ಸಿಯಸ್ ಮತ್ತು ಬಾಂಡಾದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದಲ್ಲಿ ಉಷ್ಣಾಂಶ 50ರ ಗಡಿ ದಾಟಿದ್ದು ಚುರುನಲ್ಲಿ 50.3 ಡಿಗ್ರಿ ಸೆಲ್ಸಿಯಸ್ ಮತ್ತು ಶ್ರೀ ಗಂಗಾನಗರದಲ್ಲಿ 48.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ಪುಸ್ತಕ ಖರೀದಿಗಾಗಿ ಈ ಇಮೇಜ್ ಕ್ಲಿಕ್ ಮಾಡಿ
ಉತ್ತರ ಭಾರತದಾದ್ಯಂತ ಉಷ್ಣಾಂಶ ಗಣನೀಯವಾಗಿ ಹೆಚ್ಚಾಗಿದ್ದು, ಬಿಸಿಗಾಳಿ ಬೀಸುತ್ತಿದೆ. ಬಿಸಿಲಿನ ಹೊಡೆತಕ್ಕೆ ಉತ್ತರ ಭಾರತದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವರು ಅಸ್ವಸ್ಥರಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಸಿಗಾಳಿಯಿಂದಾಗಿ ಕೇರಳ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.
Discussion about this post