ಗಣೇಶನ ಹಬ್ಬ ಬಂದರೆ
ಸಾಕು ಊರು ಕೇರಿಯೆಲ್ಲಾ ಒಂದಾಗುತ್ತದೆ. ಈಗಂತೂ ಬೀದಿ
ಬೀದಿಯಲ್ಲೂ ಗಣೇಶನನ್ನು ಕೂರಿಸುವ ಸಂಪ್ರದಾಯ. ಇನ್ನು ಮನೆ ಮನೆಗಳಲ್ಲೂ ವಿಘ್ನ ನಿವಾರಕನನ್ನ
ಪೂಜಿಸದಿದ್ದರೆ ವಿಘ್ನ ನಿವಾರಣೆಯಾಗುವುದಾದರೂ ಹೇಗೆ. ಹೀಗಾಗಿ ಗಣೇಶ ಚತುರ್ಥಿಯ ಸಂಭ್ರವೇ ಬೇರೆ.
ಈ ನಡುವೆ ಈ ಹಬ್ಬದಿಂದ ಪರಿಸರ ಮೇಲಾಗುವ ಪರಿಣಾಮವೂ ಸಣ್ಣದೇನಲ್ಲ. ಹೀಗಾಗಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯನ್ನಾಗಿಸಲು ಸಸ್ಯ ಗಣಪತಿ ಅನ್ನುವ ತಂಡ ಸದ್ದಿಲ್ಲದೆ ಕೆಲಸ ಪ್ರಾರಂಭಿಸಿದೆ.
ಈ ತಂಡದಿಂದ ನೀವು ಗಣೇಶನ ವಿಗ್ರಹ ಖರೀದಿಸಿ ತಂದು ಪೂಜಿಸದರೆ ಅವನು ಗಿಡವಾಗುತ್ತಾನೆ. ಹೀಗಾಗಿ ಈತ ಸಸ್ಯ ಗಣಪತಿಯಾಗಿದ್ದಾನೆ.
ಹಿಂದೆಲ್ಲಾ
ರಾಸಾಯನಿಕಯುಕ್ತ ಗಣೇಶ ವಿಗ್ರಹಗಳ ಬಗ್ಗೆ ಹೆಚ್ಚಿನ ಒಲವನ್ನು ಗ್ರಾಹಕರು ಹೊಂದಿದ್ದರು. ಅಲಂಕಾರ
ಮತ್ತು ಬಣ್ಣಗಳಿಂದಾಗಿ ಚೆನ್ನಾಗಿ ಕಾಣುತ್ತದೆ ಎನ್ನುವುದು ಹೆಚ್ಚಿನವರ ಅನಿಸಿಕೆಯಾಗಿತ್ತು.
ಹಾಗಾಗಿ ಮಣ್ಣಿನ ಗಣಪತಿಯನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಿತ್ತು.
ಈಗ ಪಿಓಪಿ ಮೂರ್ತಿಗಳ ಮೇಲೆ ನಿಷೇಧ ಹೇರಲಾಗಿದೆ. ಹಾಗಂತ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ನಿಂತಿಲ್ಲ. ಈ ಕಾರಣದಿಂದ ಪರಿಸರ ಮಾಲಿನ್ಯವೂ ಹಬ್ಬದ ಸಂಭ್ರಮದ ನಡುವೆ ಜೋರಾಗಿದೆ.
ಎಲೆಕ್ಟ್ರಾನಿಕ್ಸ್
ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಜೊತೆ ಸೇರಿ ಚತುರ್ಥಿಯ ಸಮಯದಲ್ಲಿ 15 ದಿವಸ
ಕೆಲಸದಿಂದ ಬಿಡುವು ಪಡೆದು ಸಸ್ಯ ಗಣಪತಿಯ ಪ್ರಾಜೆಕ್ಟ್ನಲ್ಲಿ ನಿರತರಾಗುತ್ತಾರೆ. ಆರ್ಡರ್
ತೆಗೆದುಕೊಳ್ಳುವುದು, ಗಣಪತಿಯನ್ನು
ಸುರಕ್ಷಿತವಾಗಿ ಪ್ಯಾಕ್ ಮಾಡುವುದು. ಹೀಗೆ ಕೆಲಸಗಳಲ್ಲಿ ನಿರತರಾಗುತ್ತಾರೆ.
ಹಾಗಾದರೆ ಏನಿದು ಸಸ್ಯ ಗಣಪತಿ ಎಂದು ನೋಡುವುದಾದರೆ ಕಿಟ್ನಲ್ಲಿ ದೊರೆಯುವ ಸಸ್ಯಗಣಪತಿಯ ಜೊತೆಗೆ, ಗೊಬ್ಬರದ ಇಟ್ಟಿಗೆ, ಗಣಪತಿಯನ್ನು ವಿಸರ್ಜಿಸಲು ಕುಂಡ ಮತ್ತು ಬೆಂಡೆ, ಟೊಮೇಟೊ, ತುಳಸಿ ಬೀಜಗಳ ಪ್ಯಾಕೆಟ್ ಇರುತ್ತವೆ.
ಗಣಪನ ವಿಗ್ರಹವನ್ನು ವಿಶೇಷವಾಗಿ ತಯಾರಿಸಲಾಗಿದೆ. ಕುಂಡದಲ್ಲಿ ವಿಸರ್ಜಿಸಿದ 2- 3 ಗಂಟೆಗಳಲ್ಲೇ ಮಣ್ಣು ಕರಗಿ ತಳ ಸೇರುತ್ತದೆ. ನಂತರ ಇಟ್ಟಿಗೆ ಗೊಬ್ಬರವನ್ನು ಮೇಲಕ್ಕೆ ಇಡಬೇಕು. ಈ ಎರಡು ಲೇಯರ್ಗಳ ಮೇಲೆ ಬೀಜವನ್ನು ಹಾಕಬೇಕು. ಕೆಲವೇ ದಿನಗಳಲ್ಲಿ ಬೀಜ ಮೊಳಕೆಯೊಡೆದು ಗಣೇಶ ಸಸಿಯ ರೂಪದಲ್ಲಿ ಮನೆಯಲ್ಲೇ ನೆಲೆಸುತ್ತಾನೆ.
ಕೆಲ ವರ್ಷಗಳಿಂದ
ಸಸ್ಯ ಗಣಪತಿಯ ಬೇಡಿಕೆ ನಿಧಾನವಾಗಿ ಏರುತ್ತಿದೆ. 700 ಜನ ಖರೀದಿದಾರರು ಇದೀಗ ಸಾವಿರ
ದಾಟಿದ್ದಾರೆ. ಬೆಂಗಳೂರು ದಾಟಿ ಹೊರ ರಾಜ್ಯಗಳಿಂದಲೂ ಸಸ್ಯ ಗಣಪತಿಗೆ ಬೇಡಿಕೆ ಬಂದಿದೆ.
ಇನ್ಯಾಕೆ ತಡ ನೀವು ಈ ಬಾರಿ ಸಸ್ಯಗಣಪತಿಯನ್ನು ಮನೆಗೆ ತನ್ನಿ. ಪ್ರಕೃತಿಯ ಮಾತೆಯ ವರವನ್ನು ಬಿಟ್ಟಿಯಾಗಿ ಪಡೆಯಿರಿ.
ಹಾಗಾದರೆ ಹೇಗಪ್ಪ ಗಣೇಶನನ್ನು ಮನೆಗೆ ತರೋದು ಆಂತಾ ಚಿಂತೆ ಮಾಡ್ತೀರಾ.. ಚಿಂತೆಯೇ ಬೇಡ. ಈ ಕೆಳಗಿನ ಇಮೇಜ್ ಕ್ಲಿಕ್ ಮಾಡಿ ಸಸ್ಯ ಗಣೇಶ ನಿಮ್ಮ ಮನೆಗೆ ಬಂದಿರುತ್ತಾನೆ.
Discussion about this post